Asianet Suvarna News Asianet Suvarna News

ಆರ್‌ಎಸ್‌ಎಸ್‌ ಮುಖಂಡರ ಮನೆಗೆ ಈಶ್ವರಪ್ಪ ದಿಢೀರ್‌ ಭೇಟಿ: ಬಿಜೆಪಿ ವಲಯದಲ್ಲಿ ಭಾರೀ ಕುತೂಹಲ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪುತ್ರನ ಟಕೆಟ್‌ಗಾಗಿ ಮತ್ತು ಸದ್ಯದ ರಾಜ್ಯ ರಾಜಕಾರಣದ ಸ್ಥಿತಿ ಬಗ್ಗೆ ಈ ವೇಳೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿದ್ದು, ಬಿಜೆಪಿ ವಲಯದಲ್ಲಿ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

Former Minister KS Eshwarappa Met RSS Leader Aravind Deshpande at Athani in Belagavi grg
Author
First Published Jul 29, 2023, 9:00 AM IST

ಅಥಣಿ(ಬೆಳಗಾವಿ)(ಜು.29): ರಾಜ್ಯ ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಪಟ್ಟಣಕ್ಕೆ ಶುಕ್ರವಾರ ಧೀಡಿರ್‌ ಭೇಟಿ ನೀಡಿದ್ದು, ಆರೆಸ್ಸೆಸ್‌ನ ಉತ್ತರ ಕರ್ನಾಟಕ ಪ್ರಾಂತ ಮುಖಂಡ ಅರವಿಂದ ದೇಶಪಾಂಡೆ ಅವರ ಮನೆಗೆ ತೆರಳಿ ಕೆಲಕಾಲ ಸುದೀರ್ಘ ಚರ್ಚಿಸಿದ್ದಾರೆ. 

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪುತ್ರನ ಟಕೆಟ್‌ಗಾಗಿ ಮತ್ತು ಸದ್ಯದ ರಾಜ್ಯ ರಾಜಕಾರಣದ ಸ್ಥಿತಿ ಬಗ್ಗೆ ಈ ವೇಳೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿದ್ದು, ಬಿಜೆಪಿ ವಲಯದಲ್ಲಿ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಸರ್ಕಾರ ಉರುಳಿಸಲು ಯಾರು ಯತ್ನಿಸುತ್ತಿದ್ದಾರೆ, ಡಿಕೆಶಿ ಹೇಳಲಿ: ಈಶ್ವರಪ್ಪ ಸವಾಲ್‌

ಉಭಯ ನಾಯಕರ ಮಾತುಕತೆ ವೇಳೆ ವಿರೋಧ ಪಕ್ಷದ ನಾಯಕನ ಆಯ್ಕೆ ಸೇರಿ ಹಲವು ವಿಚಾರಗಳು ಚರ್ಚೆಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಇದಾದ ನಂತರ ಅಥಣಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರ ಸಾಧನೆ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡರು.

Follow Us:
Download App:
  • android
  • ios