Asianet Suvarna News Asianet Suvarna News

ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್‌: ಸಿದ್ದರಾಮಯ್ಯ

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್‌, ಅವರ ಹೇಳಿಕೆ, ನಡವಳಿಕೆ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

Former CM Siddaramaiah Outraged Against Minister Dr CN Ashwath Narayan At Gadag gvd
Author
First Published Feb 17, 2023, 4:10 AM IST

ಶಿರ​ಹಟ್ಟಿ (ಫೆ.17): ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್‌, ಅವರ ಹೇಳಿಕೆ, ನಡವಳಿಕೆ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪಟ್ಟ​ಣದ ಜ. ಫ​ಕೀ​ರೇ​ಶ್ವರ ಮಠಕ್ಕೆ ಭೇಟಿ ನೀಡಿದ ಸಂದ​ರ್ಭ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವ​ರು, ಮಂಡ್ಯ​ದ ಒಂದು ಹಳ್ಳಿ​ಯಲ್ಲಿ ಭಾಷಣ ಮಾಡು​ವಾಗ ಸಚಿವ ಅಶ್ವತ್ಥನಾರಾ​ಯಣ ಟಿಪ್ಪು ಸುಲ್ತಾನ್‌ ಮುಗಿ​ಸಿದ ರೀತಿ​ಯಲ್ಲಿ ಸಿದ್ದ​ರಾ​ಮಯ್ಯನ​ವ​ರನ್ನೂ ಮುಗಿ​ಸ​ಬೇಕು ಎಂದು ಹೇಳಿ​ದ್ದಾರೆ. ಮಂತ್ರಿ ಎಂದರೆ ಎಲ್ಲ​ರನ್ನೂ ರಕ್ಷಣೆ ಮಾಡು​ವ​ವರು. ರಾಜ್ಯದ ಜನರ ಮಾನ, ಪ್ರಾಣ, ಆಸ್ತಿ ರಕ್ಷಣೆ ಮಾಡು​ವಂತ​ಹದ್ದು ಸರ್ಕಾ​ರದ ಜವಾ​ಬ್ದಾರಿ. ಜವಾ​ಬ್ದಾ​ರಿ​ಯುತ ಮಂತ್ರಿ​ಗಳೇ ಈ ರೀತಿ ಹೇಳುತ್ತಾರೆ ಅಂದರೆ ಏನರ್ಥ? ಅವ​ರು ಮಂತ್ರಿ ಸ್ಥಾನ​ದಲ್ಲಿರಲು ನಾಲಾಯಕ್‌ ಎಂದು ಕಿಡಿಕಾರಿದರು.

ನಾವೆಲ್ಲರೂ ಮನುಷ್ಯರು, ನಂತರ ಧರ್ಮ: ನಾವೆ​ಲ್ಲರೂ ಕೂಡ ಮೂಲತಃ ಮನು​ಷ್ಯರು, ನಂತರ ಧರ್ಮ. ಧರ್ಮ ಎನ್ನುವುದು ಮನು​ಷ್ಯರ ಒಳಿತಿ​ಗಾ​ಗಿ ಇರು​ವಂತದ್ದು, ಧರ್ಮ​ಕ್ಕೋ​ಸ್ಕರ ಮನು​ಷ್ಯ​ರಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದ​ರಾಮಯ್ಯ ಹೇಳಿ​ದ​ರು. ಬಸ​ವಾದಿ ಶರ​ಣರು ದಯವೇ ಧರ್ಮದ ಮೂಲ​ವಯ್ಯ, ದಯ​ವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳಿದ್ದಾರೆ. ಯಾವುದೇ ಧರ್ಮವಾಗಲಿ ಮನು​ಷ್ಯ​ರನ್ನು ಪ್ರೀತಿಸಿ, ಗೌರ​ವಿಸಿ ಎಂದು ಹೇಳು​ತ್ತದೆ ಹೊರತು ದ್ವೇಷಿಸಿ ಎಂದು ಹೇಳು​ವು​ದಿ​ಲ್ಲ. ​ಕೆ​ಲ​ವರು ಧರ್ಮದ ಹೆಸ​ರಲ್ಲಿ ಸಮಾಜ ಹಾಳು ಮಾಡು​ತ್ತಿದ್ದಾ​ರೆ, ಅದು ಆಗ​ಬಾ​ರದು ಎಂದರು.

ಬಿಜೆಪಿ ದುರಾಡಳಿತದ ವಿರುದ್ಧ ಜನತೆಗೆ ಬೇಸರ: ಸಿದ್ದರಾಮಯ್ಯ

ಎಲ್ಲ ದೇಶ​ಗಳ ಸಂವಿ​ಧಾನ, ಎಲ್ಲ ಧರ್ಮ​ಗ​ಳನ್ನು ಅಧ್ಯ​ಯನ ಮಾಡಿ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಬಸ​ವಾದಿ ಶರ​ಣರ ಧರ್ಮದಲ್ಲಿ ಅದನ್ನು ಹೆಚ್ಚು ಪ್ರತಿ​ಪಾ​ದಿ​ಸಲಾಗುತ್ತಿದೆ. ಅದೇ ರೀತಿ ಶಿರ​ಹಟ್ಟಿಶ್ರೀ ಫಕೀ​ರೇ​ಶ್ವರ ಮಠವು ಮಾಡು​ತ್ತಿದೆ. ಮನುಷ್ಯ, ಮನು​ಷ್ಯ​ರಲ್ಲಿ ಐಕ್ಯತೆ ಇಲ್ಲವೆಂದರೆ ನಮಗೂ ಪ್ರಾಣಿ​ಗ​ಳಿಗೂ ಏನು ವ್ಯತ್ಯಾ​ಸ​. ಮನು​ಷ್ಯ​ರನ್ನು ಮನು​ಷ್ಯರೇ ತಿನ್ನು​ವುದೇ, ನಾವು ಮನು​ಷ್ಯರು ಪ್ರಾಣಿ​ಗ​ಳಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ರಾಜ್ಯ​ದಲ್ಲಿ ಕೆಲವು ಕಾಡು ಪ್ರಾಣಿ​ಗ​ಳಿವೆ. ಅವುಗಳಿಗೆ ಧರ್ಮ, ಇತಿ​ಹಾ​ಸ, ಮನು​ಷ್ಯತ್ವ, ಪರ​ಸ್ಪರ ಪ್ರೀತಿ ಇವು​ಗಳ ಬಗ್ಗೆ ಗೊತ್ತೇ ಇಲ್ಲ. ವಿದ್ಯೆ ಕೊಡುವುದು ಜಾತಿ ಮಾಡು​ವುದ​ಕ್ಕಲ್ಲ, ಪರ​ಸ್ಪರ ಮನುಷ್ಯರಾಗಿ ಬದುಕುವುದಕ್ಕೆ. ಇಂದು ವಿದ್ಯಾ​ವಂತರೇ ಜಾತಿ​ವಾ​ದಿ​ಗ​ಳಾಗುತ್ತಿದ್ದು, ಇದು ಅಪಾ​ಯ​ಕಾರಿ ಬೆಳ​ವ​ಣಿಗೆ. ವಿದ್ಯೆ ಪಡೆ​ಯುವು​ದ​ರಿಂದ ಜ್ಞಾನ ಬರ​ಬೇಕು. ಆದರೆ, ಜ್ಞಾನ ಬರುತ್ತಿ​ಲ್ಲ, ಬದಲಾಗಿ ವಿದ್ಯಾ​ವಂತ​ರೇ ಜಾತಿ ಮಾಡುತ್ತಿ​ದ್ದಾ​ರೆ. ಫ​ಕೀ​ರೇ​ಶ್ವರ ಮಠ ಯಾವು​ದೇ ಜಾತಿಭೇದ, ಪಕ್ಷ​ಭೇ​ದ​ವಿಲ್ಲದೇ ಮಾನ​ವರು ಎಲ್ಲರೂ ಒಂದು, ನಾವೆ​ಲ್ಲರೂ ಪ್ರೀತಿ, ವಿಶ್ವಾ​ಸ​ದಿಂದ ಬಾಳ​ಬೇಕು ಎಂದು ಭಾವೈಕ್ಯ​ತೆಯ ಸಂದೇಶ ಸಾರುವ ಕೆಲಸ ಮಾಡು​ತ್ತಿದೆ. ಇದು ದೊಡ್ಡ ಕೆಲಸ, ಇದಕ್ಕೆ ನಮ್ಮ ಸಂಪೂ​ರ್ಣ ಬೆಂಬ​ಲ​ವಿದೆ ಎಂದು ಸಿದ್ದರಾಮಯ್ಯ ಹೇಳಿದ​ರು.

ಅಶ್ವತ್ಥ ನಾರಾಯಣ ವಿರುದ್ಧ ದೂರು ದಾಖಲು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನ ರೀತಿ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಇಲ್ಲಿನ ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ದೂರು ನೀಡಿದ್ದಾರೆ. ದೂರಿನನ್ವಯ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಠಾಣೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕವಾಗಿ ದುರುದ್ದೇಶ ಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ಜನರಿಗೆ ಪ್ರಚೋದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವಕ್ಕೆ ಹಾನಿಯಾಗುವ ಸಂಭವಗಳಿವೆ. ಆದಕಾರಣ ಕೂಡಲೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ತನಿಖೆಗೊಳಪಡಿಸಬೇಕು. ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತದೊಡನೆ ಅಧಿಕಾರಕ್ಕೆ: ವೀರಪ್ಪ ಮೊಯ್ಲಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗದಿಗೆಪ್ಪಗೌಡರ, ರಾಜ್ಯಪಾಲರು ಅಶ್ವತ್ಥ ನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಬಿಜೆಪಿಯವರಿಗೆ ಸೋಲಿನ ಭಯ ಶುರುವಾಗಿದೆ. ಹತಾಶೆಯಿಂದಾಗಿ ಬಿಜೆಪಿಯವರು ಈ ರೀತಿ ಮಾತನಾಡುತ್ತಿದ್ದಾರೆ. ಅಶ್ವತ್ಥ ನಾರಾಯಣ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕು ಎಂದು ತಿಳಿಸಿದರು.

Follow Us:
Download App:
  • android
  • ios