Asianet Suvarna News Asianet Suvarna News

‘ಕೈ’ನೊಂದಿಗೆ ಟಚ್‌ನಲ್ಲಿರುವ ಬಿಜೆಪಿ ಶಾಸಕರೆಷ್ಟು? ಸಿದ್ದರಾಮಯ್ಯ ಟ್ವೀಟ್ ಸಂಚಲನ!

ಆಪರೇಶನ್ ಸಂಕ್ರಾಂತಿ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕಿದ್ದಾರೆ. ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಿಜೆಪಿಯವರಿಗೆ  ಒಂದು ಶಾಕ್ ನೀಡಿದ್ದಾರೆ.

Former CM Of Karnataka Siddaramaiah tweets on Operation Sankranthi
Author
Bengaluru, First Published Jan 15, 2019, 10:00 PM IST

ಬೆಂಗಳೂರು[ಜ. 15]  ‘ರಾಜ್ಯದ ಕೆಲವು ಬಿಜೆಪಿ‌ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ.‌ ರಾಜಕೀಯದ ಅಖಾಡದಲ್ಲಿ‌ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು’

ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ವೇಳೆಗೆ ಟ್ವೀಟ್ ಮಾಡಿದ್ದಾರೆ. ಮಧ್ಯಾಹ್ನದಿಂದ ಕುಮಾರಸ್ವಾಮಿ ತಮ್ಮ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದು ಹೇಳುತ್ತ ಕೂಲ್ ಆಗಿದ್ದರು. ಮಗ ನಿಖಿಲ್ ಅಭಿನಯದ ಕುರುಕ್ಷೇತ್ರ ಚಿತ್ರದ ಟೀಸರ್ ಸಹ ನೋಡಿಕೊಂಡು ಬಂದಿದ್ದರು.

ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ಬರಲ್ಲ, ಇನ್ನೊಂದು ಆಯ್ಕೆಯೂ ಇದೆ!

ಇಷ್ಟೆಲ್ಲಾ ರಾಜಕಾರಣದ ಬೆಳವಣಿಗೆ ನಡೆಯುತ್ತಿದ್ದರೂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಖಾಡದಿಂದ ಹೊರಕ್ಕೆ ಇದ್ದರು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈಗ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಕುತೂಹಲ ಕೆರಳಿಸಿದ್ದು  ಬಿಜೆಪಿಯ ಆ  ಶಾಸಕರು ಯಾರು ಎಂಬ ಪ್ರಶ್ನೆ ಮೂಡಿದೆ.

Follow Us:
Download App:
  • android
  • ios