Asianet Suvarna News Asianet Suvarna News

ರಾಹುಲ್‌ ದಿಕ್ಕು ತಪ್ಪಿಸಿದ್ದಕ್ಕೆ ಮಾಜಿ ಸಿಎಂಗೆ ಚುನಾವಣೆ ಟಿಕೆಟ್ ಇಲ್ಲ

ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಅವರನ್ನೇ ದಿಕ್ಕು ತಪ್ಪಿಸಿದ್ದಕ್ಕಾಗಿ ಕಾಂಗ್ರೆಸ್ ಮಾಜಿ ಸಿಎಂ ಗೆ ಚುನಾವಣಾ ಟಿಕೆಟ್ ನಿರಾಕರಿಸಲಾಗಿದ್ದು, ಉಸ್ತುವಾರಿಯನ್ನಷ್ಟೇ ಮಾಡಿ ಶಿಕ್ಷೆ ನೀಡಲಾಗಿದೆ. 

Former  CM Narayanasamy to not contest Puducherry polls snr
Author
Bengaluru, First Published Mar 19, 2021, 12:07 PM IST

ಪುದುಚೆರಿ (ಮಾ.19): ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ವಿಫಲರಾದ ಮತ್ತು ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನೇ ಉದ್ದೇಶಪೂರ್ವಕವಾಗಿ ದಿಕ್ಕುತಪ್ಪಿಸಿದ್ದ  ಪುದುಚೆರಿಯ ಮಾಜಿ ಮುಖ್ಯಮಂತ್ರಿ ನಾರಾಯಣಸಾಮಿಗೆ ಈ ಬಾರಿ ವಿಧಾನಸಭೆ ಟಿಕೆಟ್ ನಿರಾಕರಿಸಿದೆ. 

ಅವರಿಗೆ ಕೇವಲ ಚುನಾವಣಾ ಉಸ್ತುವಾರಿ ವಹಿಸುವ ಮೂಲಕ ಶಿಕ್ಷೆ ನೀಡಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸೇರಿದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. 

ಮತ್ತೆ ಮೂವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ: ಖಚಿತಪಡಿಸಿದ ಬಿಜೆಪಿ ನಾಯಕ

ಅದಕ್ಕೂ ಮುನ್ನ ರಾಹುಲ್ ಪ್ರವಾಸ ಕೈಗೊಂಡ ವೇಳೆಮೀನುಗಾರ ಮಹಿಳೆಯೊಬ್ಬರು ಸಿಎಂ ಸೇರಿ ಕಾಂಗ್ರೆಸ್‌ ನಾಯಕರ ವಿರುದ್ಧ ತಮಿಳಿನಲ್ಲಿ ದೂರು ಹೇಳಿದ್ದರು. 

ಆದರೆ ಸಾಮಿ ಆಕೆಯ ಮಾತನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡ ರಾಹುಲ್‌ಗೆ ಹೇಳುವ ವೇಳೆ ಚಂಡಮಾರುತದ ವೇಳೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಿದ್ದಾಗಿ ಸ್ಮರಿಸಿದ್ದಾಳೆ ಎಂದು ಹೇಳಿದ್ದರು. ಬಳಿಕ ಈ ವಿಚಾರ ರಾಹುಲ್ ಕಿವಿಗೆ ಬಿದ್ದಿತ್ತು. 

Follow Us:
Download App:
  • android
  • ios