Asianet Suvarna News Asianet Suvarna News

ರಾಮ​ನ​ಗರ ಕ್ಷೇತ್ರ​ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಶಕ್ತಿ ಪ್ರದ​ರ್ಶನ

ನವ ಕರ್ನಾ​ಟಕ ನಿರ್ಮಾ​ಣ​ಕ್ಕಾಗಿ ಪಂಚ​ರತ್ನ ಯೋಜ​ನೆ​ಯನ್ನು ಮುಂದಿ​ಟ್ಟು​ಕೊಂಡ ಮಹಾ​ಯಾತ್ರೆ ಹೊರ​ಟಿ​ರುವ ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿರವರು ಶನಿ​ವಾರ ತಮ್ಮ ಕರ್ಮ​ಭೂಮಿ ರಾಮ​ನ​ಗರ ಕ್ಷೇತ್ರ​ದಲ್ಲಿ ಪಂಚ​ರತ್ನ ರಥ​ಯಾತ್ರೆ ಮೂಲಕ ಶಕ್ತಿ ಪ್ರದ​ರ್ಶನ ಮಾಡಿ​ದರು.

Former CM HD Kumaraswamy Power Show in Ramanagara Constituency gvd
Author
First Published Dec 18, 2022, 8:24 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಡಿ.18): ನವ ಕರ್ನಾ​ಟಕ ನಿರ್ಮಾ​ಣ​ಕ್ಕಾಗಿ ಪಂಚ​ರತ್ನ ಯೋಜ​ನೆ​ಯನ್ನು ಮುಂದಿ​ಟ್ಟು​ಕೊಂಡ ಮಹಾ​ಯಾತ್ರೆ ಹೊರ​ಟಿ​ರುವ ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿರವರು ಶನಿ​ವಾರ ತಮ್ಮ ಕರ್ಮ​ಭೂಮಿ ರಾಮ​ನ​ಗರ ಕ್ಷೇತ್ರ​ದಲ್ಲಿ ಪಂಚ​ರತ್ನ ರಥ​ಯಾತ್ರೆ ಮೂಲಕ ಶಕ್ತಿ ಪ್ರದ​ರ್ಶನ ಮಾಡಿ​ದರು. ಕೆಂಪೇ​ಗೌ​ಡರ ನಾಡು ಮಾಗಡಿ​ಯಿಂದ ಪುನರಾರಂಭ​ಗೊಂಡ ರಥ​ಯಾತ್ರೆ ಶ್ರೀನಿ​ವಾಸ ಕಲ್ಯಾ​ಣೋ​ತ್ಸವ ಹಿನ್ನೆ​ಲೆ​ಯಲ್ಲಿ ಶುಕ್ರ​ವಾ​ರ ಮೊಟ​ಕು​ಗೊಂಡಿತ್ತು. ಕಲ್ಯಾ​ಣೋ​ತ್ಸವ ತರು​ವಾಯ ಮತ್ತೆ ಚಾಲನೆ ಪಡೆದ ರಥಯಾತ್ರೆಯಲ್ಲಿ ಕುಮಾ​ರ​ಸ್ವಾ​ಮಿ​ ರಾಮ​ನ​ಗರ ಕ್ಷೇತ್ರ​ದಾ​ದ್ಯಂತ ಭರ್ಜರಿ ರೋಡ್‌ ಶೋ ನಡೆ​ಸಿ​ದರು.

ಹಾಗ​ಲ​ಹ​ಳ್ಳಿ​ಯಲ್ಲಿ ಆಂಜ​ನೇಯ ಸ್ವಾಮಿಗೆ ಪೂಜೆ ಸಲ್ಲಿ​ಸಿದ ನಂತರ ಗುಡ್ಡ​ದ​ಹಳ್ಳಿ ಗ್ರಾಮ​ದಿಂದ ಮಧ್ಯಾಹ್ನ 12.15ರ ಸುಮಾ​ರಿಗೆ ಆರಂಭ​ಗೊಂಡ ರಥ​ಯಾ​ತ್ರೆಯೂ ಹಾರೋ​ಹಳ್ಳಿ ತಲು​ಪು​ವ​ರೆಗೆ ತಡರಾತ್ರಿ ಆಯಿತು. ಪ್ರತಿ ಗ್ರಾಮ​ಗ​ಳ ದ್ವಾರ​ದಲ್ಲಿ ರಥ​ಯಾತ್ರೆ ಸ್ವಾಗ​ತ​ಕ್ಕಾ​ಗಿಯೇ ತಳಿರು ತೋರಣ, ಬಾಳೆ ಕಂದು ಕಟ್ಟಲಾ​ಗಿ​ತ್ತು. ರಥ​ಯಾತ್ರೆಗೆ ದಾರಿ​ ಉ​ದ್ದಕ್ಕೂ ಪ್ರತಿ ಗ್ರಾಮ​ಗ​ಳಲ್ಲಿ ಜೆಡಿ​ಎಸ್‌ ಕಾರ್ಯ​ಕ​ರ್ತರು, ಅಭಿ​ಮಾ​ನಿ​ಗ​ಳು ಹಾಗೂ ಗ್ರಾಮ​ಸ್ಥ​ರಿಂದ ಭವ್ಯ ಸ್ವಾಗತ ದೊರ​ಕಿತು. ಕುಮಾ​ರ​ಸ್ವಾಮಿ ಅವ​ರಿಗೆ ಪತ್ನಿ ಶಾಸಕಿ ಅನಿತಾ ಕುಮಾ​ರ​ಸ್ವಾಮಿ, ಪುತ್ರ ನಿಖಿಲ್‌ ಕುಮಾ​ರ​ಸ್ವಾಮಿ, ಜೆಡಿ​ಎಸ್‌ ಜಿಲ್ಲಾ​ಧ್ಯ​ಕ್ಷ​ರಾದ ಶಾಸಕ ಎ.ಮಂಜು​ನಾಥ್‌ ಸಾಥ್‌ ನೀಡಿ​ದ​ರು.

ಜೆಡಿಎಸ್‌ ಗ್ರಾಫ್‌ ಏರ್ತಿದೆ, 123 ಸೀಟು ಗೆಲ್ತೀವಿ: ಎಚ್‌.ಡಿ.ಕುಮಾರಸ್ವಾಮಿ

ಪಂಚ​ರತ್ನ ರಥ​ಯಾ​ತ್ರೆಯ ವಾಹನ ಏರಲು ಕೇತ​ಗಾ​ನ​ಹಳ್ಳಿ ತೋಟದ ಮನೆ​ಯಿಂದ ಗುಡ್ಡ​ದಹ​ಳ್ಳಿಗೆ ಆಗ​ಮಿ​ಸಿದ ಕುಮಾ​ರ​ಸ್ವಾಮಿ ಮತ್ತು ನಿಖಿಲ್‌ ಕುಮಾ​ರ​ಸ್ವಾಮಿ ಅವ​ರಿಗೆ ಮೊಸಂಬಿ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗ​ತಿ​ಸುವ ಮೂಲಕ ಕಾರ್ಯ​ಕ​ರ್ತರು ಅಭಿ​ಮಾನ ಮೆರೆ​ದೆರು. ಗುಡ್ಡ​ದ​ಹ​ಳ್ಳಿಗೆ ಎಲ್ಲ ಸೌಕರ್ಯ ಒದ​ಗಿಸಿ ನವ ಗ್ರಾಮ ನಿರ್ಮಿಸಿ ಕೊಡುವ ಜೊತೆಗೆ ಸಂಪರ್ಕ ಸೇತು​ವೆ​ಗಳನ್ನು ನಿರ್ಮಿಸಿ ಜನ ಸಂಚಾ​ರಕ್ಕೆ ಅನು​ಕೂಲ ಮಾಡಿ​ಕೊ​ಡು​ವು​ದಾಗಿ ಕುಮಾ​ರ​ಸ್ವಾಮಿ ಗ್ರಾಮ​ಸ್ಥ​ರಿಗೆ ಭರ​ವಸೆ ನೀಡಿ​ದ​ರು.

ಕೇನ್‌ನಲ್ಲಿ ಹಾರ ಹಾಕಿ ಅಭಿ​ಮಾ​ನ: ಹಾಗ​ಲ​ಹ​ಳ್ಳಿ​ಯಲ್ಲಿ ಸಾಗಿದ ರಥ​ಯಾ​ತ್ರೆ​ಯಲ್ಲಿ ಕುಮಾ​ರ​ಸ್ವಾಮಿ ಅವ​ರಿಗೆ ಶಾಸಕ ಅನಿತಾ, ಎ.ಮಂಜು​ನಾಥ್‌ ಜೊತೆ​ಯಾದರು. ತೆನೆ ಹೊತ್ತು ಹಾಗೂ ಕಳಶ ಹೊತ್ತು ಮಹಿ​ಳೆ​ಯರು ಸ್ವಾಗ​ತಿ​ಸಿ​ದರೆ,ಕಾರ್ಯ​ಕರ್ತರು ಹೂ ಮಳೆ ಸುರಿ​ಸಿ​ದರು. ಆಂಜ​ನೇಯ ಸ್ವಾಮಿ ದೇವಾ​ಲ​ಯ​ದಲ್ಲಿ ಪೂಜೆ ಸಲ್ಲಿ​ಸಿದ ತರು​ವಾಯ ಕುಮಾ​ರ​ಸ್ವಾಮಿ ಅವ​ರಿಂದ ಕೇಕ್‌ ಕಟ್‌ ಮಾಡಿ​ಸಿ​ದರು. ಆನಂತರ ನಾಯ​ಕ​ರಿಗೆ ಕ್ರೇನ್‌ ಮೂಲಕ ಬೃಹತ್‌ ಸೇಬಿನ ಹಾರ ಹಾಕಿ ಸಂಭ್ರ​ಮಿ​ಸಿ​ದರು.

ರಾಂಪು​ರ​ದಲ್ಲಿ ಗ್ರಾಮ​ಸ್ಥರು ಜೆಸಿಬಿ ಮೂಲಕ ಹೂಮಳೆ ಸುರಿಸಿ ಪ್ರೀತಿ ತೋರಿ​ದರೆ, ಮಹಿ​ಳೆ​ಯರು ಆರತಿ ಬೆಳಗಿ ಖುಷಿ ಪಟ್ಟರು. ಹಿರಿಯ ಮಹಿ​ಳೆ​ಯ​ರನ್ನು ಕುಮಾ​ರ​ಸ್ವಾಮಿ ಆತ್ಮೀ​ಯ​ವಾಗಿ ಮಾತ​ನಾ​ಡಿ​ದರು. ​ಕ​ಗ್ಗ​ಲ​ಹ​ಳ್ಳಿಗೆ ಆಗ​ಮಿ​ಸಿದ ರಥ​ಯಾ​ತ್ರೆಗೆ ನೂರಾರು ಮಹಿ​ಳೆ​ಯರು ಪೂರ್ಣ​ಕುಂಭ ಸ್ವಾಗತ ಕೋರಿ​ದರು. ಕಟ್ಟ​ಮಾ​ರ​ನ​ದೊಡ್ಡಿಯಲ್ಲಿ ಕುಮಾ​ರಣ್ಣ ಎಂದು ಜಯ​ಘೋಷ ಕೂಗಿ ಯುವ​ಕರು ಜೆಸಿಬಿ ಮೂಲಕ ಪುಷ್ಪ ವೃಷ್ಠಿ ಮಾಡಿ​ದರು. ಸುಗ್ಗ​ನ​ಹಳ್ಳಿ ಗ್ರಾಮಕ್ಕೆ ತಲು​ಪಿದ ರಥ​ಯಾ​ತ್ರೆ​ಯನ್ನು ಜಾನ​ಪದ ಕಲಾ​ತಂಡ​ಗಳೊಂದಿಗೆ ಜೆಸಿಬಿ ಮೂಲಕ ಹೂ ಮಳೆ​ಸು​ರಿಸಿ ಗ್ರಾಮ​ಸ್ಥರು ಅದ್ಧೂರಿಯಾಗಿ ಸ್ವಾಗತಿಸಿ​ದ​ರು. ಅಲ್ಲದೆ, 200 ಕೆಜಿಯ ಬೃಹತ್‌ ಸೇಬಿನ ಹಾರ ತೊಡಿಸಿ ಅಭಿ​ಮಾನ ಮೆರೆ​ದರು. ಇಲ್ಲಿ ಕುಮಾ​ರ​ಸ್ವಾಮಿ ಬಹಿ​ರಂಗ ನಡೆ​ಸಿ​ದ​ರು.

ಹಸ್ತ​ಲಾ​ಘವ ಮಾಡಿ ಖುಷಿ​ಪಟ್ಟ ಜನ: ಕಂಪಕ್ಕಿ ಮಾರೇ​ಗೌ​ಡ​ನ​ದೊ​ಡ್ಡಿ​ಯಲ್ಲಿ ಗ್ರಾಮ​ಸ್ಥರು ಕುಮಾ​ರ​ಸ್ವಾಮಿ ಅವ​ರ ಕೈಯಿಂದ ಕೇಕ್‌ ಕತ್ತ​ರಿಸಿ ಶುಭಾ​ಶಯ ಕೋರಿ​ದರು. ಹನು​ಮಂತೇ​ಗೌ​ಡ​ನ​ದೊ​ಡ್ಡಿ​ ಜನರು ಎಳ​ನೀರು ವಿತ​ರಿ​ಸಿ​ದರು. ಹರೀ​ಸಂದ್ರ ಗ್ರಾಮದ ವೃತ್ತ​ದಲ್ಲಿ ತಮ್ಮ ನೆಚ್ಚಿನ ನಾಯ​ಕ​ನನ್ನು ಕಾಣಲು ಮುಗಿ​ಬಿದ್ದ ಜನರು ಹಸ್ತ​ಲಾ​ಘವ ಮಾಡಿ ಖುಷಿ​ಪ​ಟ್ಟರು. ಮದ​ರ​ಸಾ​ಬ​ರ​ದೊಡ್ಡಿ ಮಾರ್ಗ​ವಾಗಿ ರಾಯ​ರ​ದೊಡ್ಡಿಯಲ್ಲಿ ಹೂವಿನ ಹಾರ ಹಾಗೂ ಕೆಂಪೇ​ಗೌ​ಡ​ನ​ದೊಡ್ಡಿ​ಯಲ್ಲಿ ಸೇಬಿನ ಹಾರ ಹಾಕಿ ಸ್ವಾಗತ ಕೋರ​ಲಾ​ಯಿತು. ಕೆಂಪೇ​ಗೌ​ಡ​ನ​ದೊ​ಡ್ಡಿ​ಯಿಂದ ಹಳೇ ಬಸ್‌ ನಿಲ್ದಾ​ಣದ ಬಳಿಗೆ ರಥ​ಯಾತ್ರೆ ಬೃಹತ್‌ ಬೈಕ್‌ ರ್ಯಾಲಿ ಮೂಲಕ ಸಂಚ​ರಿ​ಸಿತು. 

ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್‌ ಕುಮಾ​ರ​ಸ್ವಾ​ಮಿ

ರಸ್ತೆಯ ಇಕ್ಕೆ​ಲ​ಗ​ಳಲ್ಲಿ ನಿಂತಿದ್ದ ಜನರತ್ತ ಕುಮಾ​ರ​ಸ್ವಾಮಿ ಕೈ ಬೀಸಿ ಸಾಗಿ​ದರು. ಅಲ್ಲಿ ಗುಲಾಬಿ, ತುಳಸಿ ಹಾಗೂ ರೇಷ್ಮೆಯ ಹಾರ ಹಾಕಿದ ಜನರು ಮುಂದಿನ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಎಂದು ಘೋಷಣೆ ಕೂಗಿದರು. ಈ ವೇಳೆ ಹೆಲಿ​ಕಾ​ಪ್ಟರ್‌ ಮೂಲಕ ಪಂಚ​ರತ್ನ ರಥ​ಯಾ​ತ್ರೆಗೆ ಪುಷ್ಪಾ​ರ್ಚನೆ ಮಾಡ​ಲಾ​ಯಿ​ತು. ಕೈಲಾಂಚ​ದಲ್ಲಿ ಬಹಿ​ರಂಗ ಸಭೆ ನಡೆ​ಸಿದ ತರು​ವಾಯ ಕೆ.ಪಿ.​ದೊಡ್ಡಿ, ಅಚ್ಚಲು, ಅವ್ವೇ​ರ​ಹಳ್ಳಿ ಗೇಟ್‌, ಚಿಕ್ಕ​ಮು​ದ​ವಾಡಿ, ಕೊಟ್ಟ​ಗಾಳು, ಕೊಳ್ಳ​ಗ​ನ​ಹಳ್ಳಿ, ಚೀಲೂರು , ಟಿ.ಹೊ​ಸಳ್ಳಿ, ತೋಪ​ಸಂದ್ರ ಮಾರ್ಗ​ವಾಗಿ ರಥ​ಯಾ​ತ್ರೆ​ಯಲ್ಲಿ ಸಂಚ​ರಿ​ಸಿದ ಕುಮಾ​ರ​ಸ್ವಾಮಿ ಅವ​ರನ್ನು ಅದ್ಧೂರಿಯಾಗಿ ಬರ​ಮಾ​ಡಿ​ಕೊಂಡರು. ಮರ​ಳ​ವಾ​ಡಿ​ಯಲ್ಲಿ ಕುಮಾ​ರ​ಸ್ವಾ​ಮಿ​ರ​ವರು ಬಹಿರಂಗ ಸಭೆ ನಡೆ​ಸಿದ ತರು​ವಾಯ ರಥ​ಯಾತ್ರೆ ಹಾರೋ​ಹ​ಳ್ಳಿ​ ತಲು​ಪಿ​ತು.

Follow Us:
Download App:
  • android
  • ios