Asianet Suvarna News Asianet Suvarna News

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ಯಾಕೆ? ಕಾರಣ ಕೊಟ್ಟ ಮಧು ಬಂಗಾರಪ್ಪ!

ಸೊರಬ ಜೆಡಿಎಸ್  ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿದ್ಯಾಕೆ ಎನ್ನುವುದಕ್ಕೆ ಸ್ಪಷ್ಟ ಕಾರಣ ಕೊಟ್ಟಿದ್ದಾರೆ.

Ex JDS MLA Madhu Bangarappa Gives Clarification about Why Joined Congress rbj
Author
Bengaluru, First Published Apr 12, 2021, 2:51 PM IST

ಬೆಳಗಾವಿ, (ಏ.12): ಮಧುಬಂಗಾರಪ್ಪ ಅವರು ಈಗಾಗಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಈ ಹಿಂದೆ ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷವನ್ನು ಏಕೆ ತೊರೆದರು ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು. ಇದೀಗ ಅದಕ್ಕೆ ಸ್ವತಃ ಮಧು ಬಂಗಾರಪ್ಪನವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಜೆಡಿಎಸ್‌ ನಾಯಕರನ್ನೂ ಕಾಂಗ್ರೆಸ್‌ಗೆ ಕರೆದೊಯ್ಯಲು ಮಧುಬಂಗಾರಪ್ಪ ಪ್ಲಾನ್!

ಈ ಬಗ್ಗೆ ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಬಂಗಾರಪ್ಪನವರ ರಾಜಕೀಯ ಚಿಂತನೆಗಳನ್ನು ಜಾರಿಗೆ ತರುವ ಸಲುವಾಗಿ ತಾನು ಕಾಂಗ್ರೆಸ್​ ಪಕ್ಷವನ್ನ ಸೇರಿರುವುದಾಗಿ ಹೇಳಿದರು.

ಕಾಂಗ್ರೆಸ್​ ಪಕ್ಷದ ಪರವಾಗಿ ಕೆಲಸ, ಪ್ರಚಾರ ಮಾಡಲು ನನಗೆ ಸಂತೋಷ ಆಗುತ್ತದೆ. ಇದರಿಂದಾಗಿ ನಾನು ಅಧಿಕೃತವಾಗಿ ಕಾಂಗ್ರೆಸ್​ ಸೇರಿದಂತಾಗಿದೆ. ನಮ್ಮ ತಂದೆ ಬಂಗಾರಪ್ಪ ಈ ಭಾಗದಲ್ಲಿ ಸತೀಶ್​ ಜಾರಕಿಹೊಳಿ‌ ಅವರ ಬಳಿ ಉಳಿದುಕೊಳ್ಳುತ್ತಿದ್ದರು, ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಕಾಂಗ್ರೆಸ್​ ಪಕ್ಷ ಸೇರಲು ಮನಸ್ಸು ಮಾಡಿದ್ರೆ ಸಾಕು, ನಾನು ಸೇರಿದಂತೆ ಆಗಿದೆ. ಕಾಂಗ್ರೆಸ್​ ಪಕ್ಷದ ಪರವಾಗಿ ಪ್ರಚಾರ ಮಾಡುವ ಕೆಲಸವನ್ನ ಕೂಡ ಶುರುಮಾಡಿದ್ದೇನೆ. ನಾನು ಮನಸಾರೆ ಕಾಂಗ್ರೆಸ್​ಗೆ ಬಂದಿದ್ದೇನೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಡೆದು ಆಳುತ್ತಿದ್ದಾರೆ‌, ಬಡವರನ್ನ ಬಡವರಾಗಿಯೇ ನೋಡುತ್ತಿದ್ದಾರೆ. ದೇಶದ ರೈತರನ್ನ ಕರೆದು ಮಾತನಾಡುವ ಸೌಜನ್ಯ ಅವರಲ್ಲಿ ಇಲ್ಲ. ಇವರಿಗೆ ರಾಜಕಾರಣ ಮಾಡಲು ಬರಲ್ಲ, ಹಾಗಾಗಿ ಹಿಂಬಾಗಿಲಿನಿಂದ ಬರ್ತಾ ಇದ್ದಾರೆ. ರಾಜ್ಯವನ್ನ ಕಾರ್ಪೊರೇಟ್​ಗೆ ಮಾರಿ ಬಿಡಬಹುದೆನ್ನುವ ಪರಿಸ್ಥಿತಿ ಬಂದಿದೆ. ಸತೀಶ್​ ಜಾರಕಿಹೊಳಿ‌ ಗೆಲುವು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಂದೇಶವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios