Asianet Suvarna News Asianet Suvarna News

ಸಚಿವ ಶರಣಪ್ರಕಾಶ ಪಾಟೀ​ಲ​ರಿ​ಗೆ ಉಸ್ತು​ವಾರಿ ಪಟ್ಟ: ರಾಯಚೂರಲ್ಲಿ ಅಸ​ಮಾಧಾನ ಸ್ಫೋಟ!

ರಾಜ್ಯದ ಎಲ್ಲ ಜಿಲ್ಲೆ​ಗ​ಳಿಗೆ ಉಸ್ತು​ವಾರಿ ಸಚಿ​ವ​ರನ್ನು ನೇಮಕ ಮಾಡಿ​ರುವ ಸರ್ಕಾರ ರಾಯ​ಚೂರಿಗೆ ನೆರೆಯ ಕಲ​ಬು​ರ​ಗಿ ಜಿಲ್ಲೆಯ ವೈದ್ಯ​ಕೀಯ ಶಿಕ್ಷಣ ಸಚಿ​ವ ಡಾ.ಶ​ರ​ಣ​ಪ್ರ​ಕಾಶ ಪಾಟೀ​ಲ್‌ ಅವ​ರನ್ನು ನಿಯು​ಕ್ತಿ​ಗೊ​ಳಿ​ಸಿದ್ದು, ಸ್ಥಳೀ​ಯ​ರಿಗೇ ಉಸ್ತು​ವಾರಿ ಪಟ್ಟಕಲ್ಪಿ​ಸ​ಬೇಕು ಎನ್ನುವ ಬೇಡಿ​ಕೆಗೆ ಮನ್ನಣೆ ಸಿಗದ ಕಾರ​ಣ​​ ಜಿಲ್ಲೆ ಜನರು ಹೊಸ ಸರ್ಕಾ​ರದ ವಿರುದ್ಧ ಅಸ​ಮಾ​ಧಾ​ನ​ ವ್ಯಕ್ತಪಡಿ​ಸಿ​ದ್ದಾರೆ.

Dr Sharan Prakash Patil appointed as Raichur In-charge Minister Protest against the minister rav
Author
First Published Jun 10, 2023, 5:15 AM IST

ರಾಮ​ಕೃಷ್ಣ ದಾಸರಿ

ರಾಯ​ಚೂರು (ಜೂ.10) ರಾಜ್ಯದ ಎಲ್ಲ ಜಿಲ್ಲೆ​ಗ​ಳಿಗೆ ಉಸ್ತು​ವಾರಿ ಸಚಿ​ವ​ರನ್ನು ನೇಮಕ ಮಾಡಿ​ರುವ ಸರ್ಕಾರ ರಾಯ​ಚೂರಿಗೆ ನೆರೆಯ ಕಲ​ಬು​ರ​ಗಿ ಜಿಲ್ಲೆಯ ವೈದ್ಯ​ಕೀಯ ಶಿಕ್ಷಣ ಸಚಿ​ವ ಡಾ.ಶ​ರ​ಣ​ಪ್ರ​ಕಾಶ ಪಾಟೀ​ಲ್‌ ಅವ​ರನ್ನು ನಿಯು​ಕ್ತಿ​ಗೊ​ಳಿ​ಸಿದ್ದು, ಸ್ಥಳೀ​ಯ​ರಿಗೇ ಉಸ್ತು​ವಾರಿ ಪಟ್ಟಕಲ್ಪಿ​ಸ​ಬೇಕು ಎನ್ನುವ ಬೇಡಿ​ಕೆಗೆ ಮನ್ನಣೆ ಸಿಗದ ಕಾರ​ಣ​​ ಜಿಲ್ಲೆ ಜನರು ಹೊಸ ಸರ್ಕಾ​ರದ ವಿರುದ್ಧ ಅಸ​ಮಾ​ಧಾ​ನ​ ವ್ಯಕ್ತಪಡಿ​ಸಿ​ದ್ದಾರೆ.

ಕಳೆದ 15 ವರ್ಷ​ಗಳಿಂದ ಜಿಲ್ಲೆಗೆ ಸಚಿವ ಸ್ಥಾನ ಒದ​ಗಿ ​ಬಂದಿ​ರ​ಲಿಲ್ಲ. ಆದರೆ ಎಐ​ಸಿಸಿ ಕಾರ್ಯ​ದರ್ಶಿ ಎನ್‌.​ಎ​ಸ್‌.​ಬೋ​ಸ​ರಾಜುಗೆ ಈ ಬಾರಿ ಸಚಿವ ಸ್ಥಾನ ನೀಡಿ​ದ್ದಾರೆ ಎನ್ನುವ ಸಂತೋಷ ಮಾಸುವ ಮುನ್ನವೆ, ಅವ​ರಿ​ಗೆ ಉಸ್ತು​ವಾರಿ ಜವಾ​ಬ್ದಾರಿ ವಹಿ​ಸಿ​ಕೊ​ಡದೆ ಇರು​ವುದು ಜಿಲ್ಲೆ ಜನರ ಆಕ್ರೋ​ಶಕ್ಕೆ ಕಾರ​ಣ​ವಾ​ಗಿದೆ.

ರಾಯಚೂರು: ಕಲಬುರಗಿಗೆ ಏಮ್ಸ್ ಎಂದ ಸಚಿವ ಶರ​ಣ​ಪ್ರ​ಕಾಶ ವಿರುದ್ಧ ಗೋ ಬ್ಯಾಕ್‌ ಚಳ​ವ​ಳಿ ಎಚ್ಚ​ರಿ​ಕೆ

ಹಿಂದೆ ನಿರಾಸೆ ಮೂಡಿ​ಸಿ​ದ್ದ​ರು:

2013ರಲ್ಲಿ ಆಡ​ಳಿತ ನಡೆ​ಸಿದ ಸಿದ್ದ​ರಾ​ಮಯ್ಯ ನೇತೃ​ತ್ವದ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಇದೇ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಅವರು ರಾಯ​ಚೂರು ಜಿಲ್ಲೆಯ ಉಸ್ತು​ವಾರಿ ಸಚಿ​ವ​ರಾಗಿ​ದ್ದರು. ಆರಂಭ​ದಲ್ಲಿ ಜಿಲ್ಲೆಯ ಅಭಿ​ವೃದ್ಧಿ ಮಾಡು​ವ ಭರ​ವ​ಸೆ ಹುಟ್ಟಿ​ಸಿದ್ದ ಶರ​ಣ​ಪ್ರ​ಕಾಶ ಪಾಟೀಲ್‌ ಜಿಲ್ಲೆಯ ಜನರ ನಿರೀ​ಕ್ಷೆಗೆ ತಕ್ಕಂತೆ ಕೆಲಸ ಮಾಡದೆ ನಿರಾ​ಸೆ ಮೂಡಿ​ಸಿ​ದ್ದರು. ಹಿಂದೆ ಅವರ ಉಸ್ತು​ವಾರಿ ಕಾರ್ಯ​ವನ್ನು ಕಣ್ಣಾರೆ ಕಂಡ ಜಿಲ್ಲೆಯ ಜನರು ಇದೀಗ ಮತ್ತೆ ಅವ​ರನ್ನೇ ಉಸ್ತು​ವಾ​ರಿ​ಯ​ನ್ನಾಗಿ ಮಾಡಿ​ದ್ದಕ್ಕೆ ಕಿಡಿಕಾರಿ​ದ್ದಾರೆ.

ಏಮ್ಸ್‌ ಪಡೆ​ಯುವ ಹುನ್ನಾ​ರ:

ಇತ್ತೀ​ಚೆಗೆ ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಕಲ​ಬು​ರ​ಗಿ​ಗೆ ಏಮ್ಸ್‌ ಪಡೆ​ಯುವ ಪ್ರಯತ್ನ ಮಾಡು​ವು​ದಾಗಿ ಹೇಳಿಕೆ ನೀಡಿ​ದ್ದರು. ಇದಕ್ಕೆ ರಾಯ​ಚೂರು ಜಿಲ್ಲೆ​ಯಲ್ಲಿ ವ್ಯಾಪಕ ವಿರೋಧ ವ್ಯಕ್ತ​ಗೊಂಡಿ​ರುವ ಬೆನ್ನ​ಲ್ಲೆ ಅವ​ರನ್ನೇ ಮತ್ತೆ ಉಸ್ತು​ವಾರಿ ಸಚಿ​ವ​ರ​ನ್ನಾಗಿ ನೇಮಿ​ಸ​ಲಾ​ಗಿದೆ. ಏಮ್ಸ್‌​ಗಾಗಿ ಕಳೆದ 393 ದಿನ​ಗ​ಳಿಂದ ನಿರಂತರ ಧರಣಿ ನಡೆ​ಯು​ತ್ತಿ​ರುವ ಸಮ​ಯ​ದ​ಲ್ಲಿಯೇ ಏಮ್ಸ್‌ ಪಡೆ​ಯುವ ಹುನ್ನಾರ ಹೂಡಿ​ರುವವರನ್ನೆ ಉಸ್ತು​ವಾರಿ ಸಚಿ​ವ​ರ​ನ್ನಾಗಿ ಮಾಡಿ​ರುವ ರಾಜ್ಯ ಸರ್ಕಾ​ರದ ನಿರ್ಧಾ​ರಕ್ಕೆ ಖಂಡ​ನೆ​ ವ್ಯ​ಕ್ತ​ವಾ​ಗು​ತ್ತಿದೆ.

ಭಾವ​ಚಿತ್ರ ಸುಟ್ಟು ಆಕ್ರೋ​ಶ:

ಉಸ್ತು​ವಾರಿ ಸಚಿ​ವರ ಪಟ್ಟಿಬಿಡು​ಗ​ಡೆ​ಯಾ​ಗು​ತ್ತಿ​ದ್ದಂತೆ ಜಿಲ್ಲೆ​ಯಲ್ಲಿ ಅಸ​ಮಾಮ​ಧಾ​ನ ಸ್ಫೋಟ​ಗೊಂಡಿದ್ದು, ನಗ​ರದ ಡಾ. ಬಿ.​ಆ​ರ್‌.​ಅಂಬೇ​ಡ್ಕರ್‌ ವೃತ್ತ​ದಲ್ಲಿ ರಾಯ​ಚೂರು ಏಮ್ಸ್‌ ಮಂಜೂರು ಹೋರಾಟ ಸಮಿತಿ ನೇತೃ​ತ್ವ​ದಲ್ಲಿ ಕರವೇ (ಶಿ​ವ​ರಾ​ಮೇ​ಗೌಡ ಬಣ) ಡಾ.ರಾ​ಜ​ಕು​ಮಾರ ಅಭಿ​ಮಾ​ನಿ​ಗಳ ಸಂಘ, ಅಖಿಲ ಕರ್ನಾ​ಟಕ ರಕ್ಷಣಾ ಸಮಿತಿ, ಕನ್ನ​ಡಿ​ಗರ ರಕ್ಷಣಾ ಸಮಿತಿ, ಕನ್ನಡ ರಣ​ದೀರರ ಪಡೆ ಹಾಗೂ ವಿವಿಧ ಸಂಘ​ಟ​ನೆ​ಗಳು ಸೇರಿ​ಕೊಂಡು ಮಿಂಚಿನ ಪ್ರತಿ​ಭ​ಟನೆ ನಡೆ​ಸ​ಲಾ​ಯಿತು. ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಅವರ ಭಾವ​ಚಿ​ತ್ರ​ವನ್ನು ಸುಟ್ಟಸಮಿ​ತಿಯ ಮುಖಂಡರು ಶರ​ಣ​ಪ್ರ​ಕಾಶ ಪಾಟೀಲ್‌ಗೆ ಉಸ್ತು​ವಾರಿ ಪಟ್ಟಬೇಡವೆ ಬೇಡ ಎನ್ನುವ ಘೋಷ​ಣೆ ಕೂಗಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ​ರು.

ನಮ್ಮ​ವರೇ ನಮಗೆ ಚೆಂದ:

ಹಿಂದಿನ ಎರ​ಡ್ಮೂರು ಸರ್ಕಾ​ರ​ಗ​ಳಲ್ಲಿ (ವೆಂಕ​ಟ​ರಾವ್‌ ನಾಡ​ಗೌ​ಡ​ರನ್ನು ಬಿಟ್ಟು) ಬೇರೆ ಜಿಲ್ಲೆ​ಗಳ ಉಸ್ತು​ವಾರಿ ಸಚಿ​ವ​ರನ್ನೆ ನೇಮಕ ಮಾಡಿ​ದ್ದ​ರಿಂದ ಅವ​ರೆಲ್ಲ​ರೂ ರಾಷ್ಟ್ರೀಯ ದಿನಾ​ಚ​ರ​ಣೆ​ಗ​ಳಲ್ಲಿ ಪಾಲ್ಗೊ​ಳ್ಳಲು ಮಾತ್ರ ಆಗ​ಮಿಸಿ ಉಳಿದ ವೇಳೆ ಜಿಲ್ಲೆ ಅಭಿ​ವೃದ್ಧಿ ಕಡೆಗೆ ಗಮನ ಹರಿ​ಸದೆ ಇರು​ವು​ದನ್ನು ಗಮ​ನಿ​ಸಿ​ರುವ ಜಿಲ್ಲೆಯ ಜನ​ರು ನಮ್ಮ​ವರೇ ನಮಗೆ ಚೆಂದ ಎನ್ನುವ ತೀರ್ಮಾ​ನಕ್ಕೆ ಬಂದಿ​ರು​ವು​ದ​ರಿಂದ ಅನ್ಯ ಜಿಲ್ಲೆಯವರನ್ನು ಜಿಲ್ಲಾ ಉಸ್ತು​ವಾರಿ ಸಚಿ​ವ​ರ​ನ್ನಾಗಿ ಅಂಗೀ​ಕ​ರಿ​ಸಲು ಮುಂದಾ​ಗು​ತ್ತಿಲ್ಲ.

Agriculture: ಕಲಬುರಗಿಯಲ್ಲಿ ಕೃಷಿ ಮಾಹಿತಿ ರಥಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ

ನಮ್ಮ ಜಿಲ್ಲೆ​ಯ​ವರೇ ಸಚಿ​ವ​ರಾಗಿರು​ವಾಗ ಬೇರೆ ಜಿಲ್ಲೆಯ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ಗೆ ಉಸ್ತು​ವಾ​ರಿ ವಹಿ​ಸಿ​ಕೊ​ಟ್ಟಿ​ರುವ ಸರ್ಕಾ​ರದ ನಿರ್ಧಾ​ರ​ವನ್ನು ಒಪ್ಪು​ವು​ದಿಲ್ಲ. ಕೂಡಲೇ ಜಿಲ್ಲೆಯ ಎನ್‌.​ಎ​ಸ್‌.​ಬೋ​ಸ​ರಾಜುಗೆ ಉಸ್ತು​ವಾರಿ ಜವಾ​ಬ್ದಾ​ರಿ ನೀಡ​ಬೇಕು. ಇಲ್ಲ​ವಾ​ದಲ್ಲಿ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಜಿಲ್ಲೆಗೆ ಬಂದರೆ ‘ಗೋ ಬ್ಯಾಕ್‌ ಚಳ​ವ​ಳಿ’ ​ಯನ್ನು ನಡೆ​ಸ​ಲಾ​ಗು​ವು​ದು.

-ಅಶೋಕ ಕುಮಾರ ಜೈನ್‌, ಕರವೇ ಜಿಲ್ಲಾ​ಧ್ಯಕ್ಷ, ರಾ​ಯ​ಚೂ​ರು

Follow Us:
Download App:
  • android
  • ios