Asianet Suvarna News Asianet Suvarna News

ಡಿಕೆಶಿಗೆ ಕೆಪಿಸಿಸಿ ಗಾದಿ: ಸಿದ್ದು ಕೋಪ ಶಮನಕ್ಕೂ ಇದೆ ಹಾದಿ!

ಡಿಕೆ ಶಿವಕುಮಾರ್’ಗೆ ಕೆಪಿಸಿಸಿ ಅಧ್ಯಕ್ಷ ಗಾದಿ ಫಿಕ್ಸ್?| ಎಐಸಿಸಿಯಿಂದ ಇಂದೇ ಘೋಷಣೆ ಹೊರಬೀಳುವ ಸಾಧ್ಯತೆ| ಮಾಜಿ ಸಿಎಂ ಸಿದ್ದರಾಮಯ್ಯ ಕೋಪ ಶಮನಕ್ಕೆ ದಾರಿ ಹುಡುಕಿದ ಹೈಕಮಾಂಡ್| ಸಿದ್ದು ಆಪ್ತರಿಗೆ ಪ್ರಮುಖ ಹುದ್ದೆ ನೀಡುವ ಮೂಲಕ ಕೋಪ ಶಮನಕ್ಕೆ ಎಐಸಿಸಿ ಯತ್ನ| ಡಿಕೆಶಿಗೆ ಅಧ್ಯಕ್ಷ ಸ್ಥಾನ ದಕ್ಕಲು ಏಸು ಪ್ರತಿಮೆ ನಿರ್ಮಾಣ ಪ್ರಯತ್ನ ಕಾರಣವೇ?| 

DK Shivkumar Likely To Be Appoint As KPCC President Soon
Author
Bengaluru, First Published Jan 16, 2020, 6:46 PM IST

ನವದೆಹಲಿ(ಜ.16): ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿಕೆ ಶಿವಕುಮಾರ್ ಹೆಸರು ಬಹುತೇಕ ಅಂತಿಮಗೊಂಡಿದ್ದು, ಇಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.

"

ಡಿಕೆ ಶಿವಕುಮಾರ್ ಅವರತ್ತ ಒಲವು ತೋರಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಇಂದು ಅವರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಡಿಕೆಶಿ ಮನೆಗೆ ತೆರಳಿ ಅವರನ್ನು ಅಭಿನಂದಿಸುತ್ತಿದ್ದಾರೆ.

ಉಳುಮೆ ಮಾಡಿಕೊಂಡಿರ್ತೀನಿ, ರೇಸಲ್ಲಿ ನಾನಿಲ್ಲ!: ಕಣದಿಂದ ಹಿಂದೆ ಸರಿದ್ರಾ ಡಿಕೆಶಿ?

ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ  ಅವರ ಕೋಪ ಶಮನಕ್ಕೂ ಸೂತ್ರ ಹೆಣೆದಿರುವ ಎಐಸಿಸಿ, ಸಿದ್ದು ನಿಷ್ಠರಿಗೆ ಪ್ರಮುಖ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

DK Shivkumar Likely To Be Appoint As KPCC President Soon

ಪ್ರಮುಖವಾಗಿ ಸಿದ್ದರಾಮಯ್ಯ ಆಪ್ತರಾದ ಸತೀಶ್ ಜಾರಕಿಹೊಳಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಸಾಧ್ಯತೆ ಇದ್ದು, ಈಶ್ವರ್ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮುಂದುವರೆಸಲಾಗುವುದು ಎನ್ನಲಾಗಿದೆ.

ಇಕ್ಕಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್: ಪಾರಾಗಲು ಸಿದ್ದರಾಮಯ್ಯ ಕೊಟ್ರು 2 ಪ್ಲಾನ್!

ಅದರಂತೆ ಎಂ.ಬಿ ಪಾಟೀಲ್ ಅವರಿಗೂ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡುವ ಕುರಿತು ನಿರ್ಧರಿಸಲಾಗಿದ್ದು, ಈ ಮೂಲಕ ಸಿದ್ದರಾಮಯ್ಯ ಅವರ ಮನವೋಲಿಸುವ ಕಾರ್ಯಕ್ಕೆ ಹೈಕಮಾಂಡ್ ಮುಂದಡಿ ಇಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಏಸು ಕೃಪೆಯಿಂದ ಡಿಕೆಶಿ ಬಾಸು?:

ಇನ್ನು ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಗಣಿಸಲು ಅವರ ಪಕ್ಷ ನಿಷ್ಠೆ ಹಾಗೂ ನಾಯಕತ್ವ ಗುಣ ಪ್ರಮುಖ ಕಾರಣವಾದರೂ, ರಾಮನಗರದಲ್ಲಿ ಡಿಕೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದು ಕೂಡ ಸೋನಿಯಾ ಗಾಂಧಿ ಸಂತುಷ್ಟರಾಗಲು ಕಾರಣ ಎಂಬ ಮಾತುಗಳಿಗೇನೂ ಬರವಿಲ್ಲ.

Follow Us:
Download App:
  • android
  • ios