Asianet Suvarna News Asianet Suvarna News

ರಾಜ​ಕೀಯ ಜೀವ​ನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ ಡಿಕೆ​ಶಿ

ನನ​ಗೀಗ 61 ವರ್ಷ ವಯಸ್ಸು. ಇನ್ನು 10 ವರ್ಷ ರಾಜ​ಕಾ​ರಣ ಮಾಡ​ಬ​ಹುದು. 8ರಿಂದ 10 ವರ್ಷದ ನಂತರ ರಾಜ​ಕಾ​ರಣ ಮಾಡಲು ಆಗು​ವು​ದಿಲ್ಲ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಪರೋ​ಕ್ಷ​ವಾಗಿ ರಾಜ​ಕೀಯ ಜೀವ​ನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿ​ದ್ದಾರೆ. 

dk shivakumar speaks on retiring from politics in kanakapur function gvd
Author
First Published Oct 8, 2022, 7:15 AM IST

ರಾಮ​ನ​ಗರ/ಕನ​ಕ​ಪು​ರ (ಅ.08): ನನ​ಗೀಗ 61 ವರ್ಷ ವಯಸ್ಸು. ಇನ್ನು 10 ವರ್ಷ ರಾಜ​ಕಾ​ರಣ ಮಾಡ​ಬ​ಹುದು. 8ರಿಂದ 10 ವರ್ಷದ ನಂತರ ರಾಜ​ಕಾ​ರಣ ಮಾಡಲು ಆಗು​ವು​ದಿಲ್ಲ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಪರೋ​ಕ್ಷ​ವಾಗಿ ರಾಜ​ಕೀಯ ಜೀವ​ನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿ​ದ್ದಾರೆ. ಕನ​ಕ​ಪು​ರದ ರೂರಲ್‌ ಎಜು​ಕೇ​ಷ​ನ್‌ ಸೊಸೈಟಿ (ಗ್ರಾ​ಮಾಂತರ ವಿದ್ಯಾ ಪ್ರಚಾ​ರಕ ಸಂಘ​) ಸದ​ಸ್ಯರ ಸಭೆ​ಯಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ನ್ಯಾಷ​ನಲ್‌ ಹೆರಾಲ್ಡ್‌ ಪ್ರಕ​ರಣ ಸಂಬಂಧ ಇ.ಡಿ. ವಿಚಾ​ರಣೆ ಎದು​ರಿ​ಸು​ತ್ತಿ​ರುವ ಸಂದ​ರ್ಭ​ದಲ್ಲಿಯೇ ರಾಜ​ಕೀಯಕ್ಕೆ ವಿದಾಯ ಹೇಳುವ ಮಾತು​ಗ​ಳ​ನ್ನಾ​ಡಿ​ದ್ದಾ​ರೆ.

ನಾನು ಸಂಪಾ​ದನೆ ಮಾಡಿ​ರು​ವುದು ಸಾಕು. ದೇವರು ಎಲ್ಲ​ವನ್ನೂ ಕೊಟ್ಟಿ​ದ್ದಾನೆ. ನನ್ನ ಮೇಲೆ ಸಾಕಷ್ಟುಕೇಸು​ಗಳು ನಡೆ​ಯು​ತ್ತಿ​ರ​ಬ​ಹುದು. ಅದೆ​ಲ್ಲ​ವನ್ನು ನಾನು ಅನು​ಭ​ವಿ​ಸಿ​ದ್ದೇನೆ. ಪ್ರೀತಿ, ವಿಶ್ವಾ​ಸದ ಮೇಲೆ ನನ್ನನ್ನು ಬೆಳೆಸಿ, ಒಂದು ಸ್ಥಾನಕ್ಕೆ ತಂದು ಕೂರಿ​ಸಿ​ದ್ದೀರಿ. ಇನ್ನು ದೊಡ್ಡ ಸ್ಥಾನಕ್ಕೆ ಹೋಗ​ಬ​ಹುದು. ಯಾವುದೇ ದೊಡ್ಡ ಸ್ಥಾನಕ್ಕೆ ಹೋದರೂ ಶಾಸ​ಕ ಸ್ಥಾನವೇ ದೊಡ್ಡದು ಎಂದು ಹೇಳಿ​ದ​ರು.

ಸೋಲಾರ್‌ ಪಾರ್ಕ್‌ನಲ್ಲಿ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿ.ಕೆ.ಶಿವಕುಮಾರ್‌

ಡಿಕೆಶಿ ಹೇಳಿ​ದ್ದೇನು?: ರೂರಲ್‌ ಎಜು​ಕೇ​ಷ​ನ್‌ ಸೊಸೈಟಿ ಶಿಕ್ಷಣ ಸಂಸ್ಥೆ​ಯಲ್ಲಿ ಏನಾ​ದರು ಬದ​ಲಾ​ವಣೆ ತರುವ ಆಸೆಯಿದೆ. ಸಾಕಷ್ಟು ಸಂಪ​ದಾನೆ ಮಾಡಿ​ದ್ದೇನೆ. ದೇವರು ಎಲ್ಲ​ವನ್ನೂ ಕೊಟ್ಟಿ​ದ್ದಾನೆ. ಯಾವ ವಿಚಾ​ರಕ್ಕೂ ಯಾರ ಮುಂದೆಯೂ ಕೈ ಚಾಚಿಲ್ಲ. ನಾನು ಪ್ರತಿ​ಫಲ ನಿರೀಕ್ಷೆ ಮಾಡು​ವು​ದಿಲ್ಲ. ನನಗೆ ಸೊಸೈ​ಟಿಯಲ್ಲಿ ಯಾವುದೇ ಹುದ್ದೆ ಬೇಕಾ​ಗಿಲ್ಲ. ಕ್ಷೇತ್ರದ ಜನರು ನೀಡಿ​ರುವ ಹುದ್ದೆಯೇ ಸಾಕು. ನಾನು ಶಾಸ​ಕ​ನಾಗಿ ಏನು ಮಾಡ​ಬೇಕು ಹೇಳಿ ಮಾಡು​ತ್ತೇನೆ. ಇಲ್ಲ​ದಿ​ದ್ದರೆ ನನ್ನನ್ನು ನಾನು ಮೋಸ ಮಾಡಿ​ಕೊ​ಂಡಂತಾ​ಗು​ತ್ತಿದೆ. ಶಾಸ​ಕ​ನಾಗಿ 20-25 ವರ್ಷ ನೋಡಿ​ದ್ದೇನೆ. 

ಈಗಿ​ರುವ ವ್ಯವ​ಸ್ಥೆ​ಯಲ್ಲಿ ನಂಬಿಕೆ ಇಲ್ಲ, ಬದ​ಲಾ​ವಣೆ ಆಗ​ಬೇ​ಕಿದೆ. ಈಗಲೂ ಬದ​ಲಾ​ವಣೆ ಮಾಡಲು ಆಗ​ದಿ​ದ್ದರೆ ಏನು ಮಾಡಲು ಆಗು​ವು​ದಿಲ್ಲ. ನನಗೂ 61 ವರ್ಷ ವಯ​ಸ್ಸಾ​ಯಿತು. ಇನ್ನೆಷ್ಟುವರ್ಷ ರಾಜ​ಕಾರಣ ಮಾಡಲು ಆಗು​ತ್ತದೆ. ಇನ್ನು 8 - 10 ವರ್ಷ ​ಅಂದರೆ 70 ವರ್ಷ​ದ​ವ​ರೆಗೆ ರಾಜ​ಕಾ​ರಣ ಮಾಡಬ​ಹುದು ಅಷ್ಟೆ. ಸಂಸ್ಥೆ​ಯಲ್ಲಿ ಏನಾದರೂ ಬದ​ಲಾ​ವಣೆ ತರದೆ ಹೋದರೆ ಮತ್ತೆ ಯಾವುದೇ ಬದ​ಲಾ​ವಣೆ ತರಲು ಅವ​ಕಾಶ ಸಿಗು​ವು​ದಿಲ್ಲ. ಅಷ್ಟ​ರೊ​ಳಗೆ ನಾವು ಬದ​ಲಾ​ವಣೆ ತರ​ದಿ​ದ್ದರೆ ನಮ್ಮ ಕರ್ತ​ವ್ಯಕ್ಕೆ ಲೋಪ ಮಾಡಿ​ದಂತಾ​ಗು​ತ್ತದೆ ಎಂದು ಹೇಳಿ​ದ​ರು.

ನಾನು ನಿಮ್ಮ ಪ್ರತಿ​ನಿಧಿ, ನಿಮಗೆ ವಾಪಸ್‌ ಕೊಡ​ಬೇಕು. ನಾನು ಸಾಕ​ಷ್ಟುಸಂಪಾ​ದನೆ ಮಾಡಿ​ದ್ದೇನೆ. ದೇವರು ಎಲ್ಲ​ವನ್ನೂ ಕೊಟ್ಟಿ​ದ್ದಾನೆ. ನನ್ನ ಮೇಲೆ ಸಾಕಷ್ಟುಕೇಸು​ಗಳು ನಡೆ​ಯುತ್ತಿ​ರ​ಬ​ಹುದು. ಅದೆ​ಲ್ಲ​ವನ್ನು ನಾನು ಅನು​ಭ​ವಿ​ಸಿ​ದ್ದೇನೆ. ಕನ​ಕ​ಪುರ ತಾಲೂ​ಕಿನಲ್ಲಿ 3 ರಿಂದ 4 ಸಾವಿರ ಜನ​ರಿಗೆ ಉದ್ಯೋಗ ಕೊಡಿ​ಸಿ​ದ್ದೇನೆ. ಒಬ್ಬ​ರಿಂದಲೂ ಹಣ ಕೇಳಿಲ್ಲ. ಯಾವುದೇ ವಿಚಾ​ರಕ್ಕೂ ಯಾರ ಮುಂದೆ​ಯೂ ಕೈ ಚಾಚಿಲ್ಲ. ಒಂದು ಸಣ್ಣ ವಿಚಾ​ರಕ್ಕೆ ಒಬ್ಬ​ರಿಂದ ಕಮಿ​ಷನ್‌ ಕೇಳಿಲ್ಲ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ಪ್ರೀತಿ, ವಿಶ್ವಾ​ಸದ ಮೇಲೆ ನನ್ನನ್ನು ಬೆಳೆಸಿ, ಒಂದು ಸ್ಥಾನಕ್ಕೆ ತಂದು ಕೂರಿ​ಸಿ​ದ್ದೀರಿ. ಇನ್ನು ದೊಡ್ಡ ಸ್ಥಾನಕ್ಕೆ ಹೋಗ​ಬ​ಹುದು. ಯಾವುದೇ ದೊಡ್ಡ ಸ್ಥಾನಕ್ಕೆ ಹೋದರೂ ಶಾಸ​ಕ ಸ್ಥಾನವೇ ದೊಡ್ಡದು ಎಂದು ತಿಳಿಸಿ​ದ​ರು.

ಸೋನಿಯಾ ಬರ್ತಾರೆ, ಒಟ್ಟಿಗೆ ನಡೆಯೋಣ ಬನ್ನಿ: ಡಿಕೆಶಿ

ಕರಿ​ಯ​ಪ್ಪ​ನ​ವರು ಕಟ್ಟಿದ ಸಂಸ್ಥೆ ನಡೆ​ಯು​ತ್ತಿ​ರುವ ಬಗ್ಗೆ ನನಗೆ ಸಮಾ​ಧಾನ ತಂದಿಲ್ಲ. ಪೋಷ​ಕರು ಪತ್ರ ಮತ್ತು ದೂರ​ವಾಣಿ ಮೂಲಕ ನನ್ನ ಬಳಿ ದೂರು ಹೇಳಿ​ಕೊಂಡಿ​ದ್ದಾರೆ. ಇಡೀ ವ್ಯವಸ್ಥೆ ಬದ​ಲಾ​ಗ​ಬೇಕು. ಸೊಸೈಟಿ ಚುನಾ​ವಣೆ ಘೋಷ​ಣೆ​ಯಾ​ಗಿದ್ದು, 200-250 ಸದ​ಸ್ಯರಿದ್ದೀರಿ. ಮುಂದಿನ ವರ್ಷ ಯಾರು ಇರು​ತ್ತಾರೊ ಇರ​ಲ್ಲವೋ ಗೊತ್ತಿಲ್ಲ. ನಿಮ್ಮ ಅವ​ಧಿ​ಯಲ್ಲಿ ಪರಿ​ಣಾ​ಮ​ಕಾ​ರಿ​ಯಾದ ಬದ​ಲಾ​ವಣೆ ತರ​ಬೇ​ಕಿದೆ. ಆ ದೃಷ್ಟಿ​ಯಿಂದ ತಮ್ಮ ಸಲಹೆ ಸೂಚನೆ ಪಡೆ​ಯಲು ಸಭೆ ಕರೆ​ಯ​ಲಾ​ಗಿದೆ ಎಂದು ಶಿವ​ಕು​ಮಾರ್‌ ಹೇಳಿ​ದ​ರು. ಸಭೆ​ಯಲ್ಲಿ ಸೊಸೈಟಿ ಅಧ್ಯಕ್ಷ ಕೆ.ಬಿ.​ನಾ​ಗ​ರಾಜು, ಕಾರ್ಯ​ದರ್ಶಿ ರಮೇಶ್‌, ಪದಾ​ಧಿ​ಕಾ​ರಿ​ಗ​ಳಾದ ಎಂ.ಎಲ್‌.ಶಿ​ವ​ಕು​ಮಾರ್‌, ನಾಗ​ರಾಜು ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದರು.

Follow Us:
Download App:
  • android
  • ios