Asianet Suvarna News Asianet Suvarna News

ಕಾವೇರಿ ವಿವಾದ: ದೆಹಲಿಯಲ್ಲಿ ಕಾನೂನು ತಜ್ಞರು, ಅಧಿಕಾರಿಗಳೊಂದಿಗೆ ಡಿ.ಕೆ.ಶಿವಕುಮಾರ್ ಮಾತು​ಕ​ತೆ

ಕಾವೇರಿ ನೀರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ತಮಿ​ಳು​ನಾಡು ಸಲ್ಲಿ​ಸಿ​ರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾ​ರ​ಣೆಗೆ ಬರುವ ಹಿನ್ನೆ​ಲೆ​ಯಲ್ಲಿ ಉಪ ಮುಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಅವರು ಹಿರಿಯ ವಕೀಲ ಮೋಹ​ನ್‌ ಕಾತ​ರಕಿ, ಅಡ್ವೊ​ಕೇಟ್‌ ಜನ​ರಲ್‌ ಶಶಿ​ಕಿ​ರಣ್‌ ಶೆಟ್ಟಿ, ಹೆಚ್ಚು​ವರಿ ಮುಖ್ಯ ಕಾರ್ಯ​ದರ್ಶಿ ರಾಕೇಶ್‌ ಸಿಂಗ್‌ ಅವರ ಜತೆ ದೆಹ​ಲಿ​ಯಲ್ಲಿ ಮಾತು​ಕತೆ ನಡೆ​ಸಿ​ದ್ದಾ​ರೆ. 

dk shivakumar holds consultation with legal experts and officials in delhi gvd
Author
First Published Sep 1, 2023, 3:20 AM IST

ನವದೆಹಲಿ (ಸೆ.01): ಕಾವೇರಿ ನೀರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ತಮಿ​ಳು​ನಾಡು ಸಲ್ಲಿ​ಸಿ​ರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾ​ರ​ಣೆಗೆ ಬರುವ ಹಿನ್ನೆ​ಲೆ​ಯಲ್ಲಿ ಉಪ ಮುಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಅವರು ಹಿರಿಯ ವಕೀಲ ಮೋಹ​ನ್‌ ಕಾತ​ರಕಿ, ಅಡ್ವೊ​ಕೇಟ್‌ ಜನ​ರಲ್‌ ಶಶಿ​ಕಿ​ರಣ್‌ ಶೆಟ್ಟಿ, ಹೆಚ್ಚು​ವರಿ ಮುಖ್ಯ ಕಾರ್ಯ​ದರ್ಶಿ ರಾಕೇಶ್‌ ಸಿಂಗ್‌ ಅವರ ಜತೆ ದೆಹ​ಲಿ​ಯಲ್ಲಿ ಮಾತು​ಕತೆ ನಡೆ​ಸಿ​ದ್ದಾ​ರೆ. ನಂತರ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿದ ಡಿ.ಕೆ.​ಶಿ​ವ​ಕು​ಮಾರ್‌, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿ​ಡ​ಬ್ಲ್ಯು​ಎಂಎ​)ದವರು ಕರ್ನಾಟಕದ ಕಾವೇರಿ ನದಿ ಅಣೆಕಟ್ಟುಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವಾಂಶ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದೇವೆ. 

ಆಗಲಾದರೂ ನಮ್ಮ ಪರಿಸ್ಥಿತಿ ಅವರಿಗೆ ಅರ್ಥವಾಗಲಿದೆ ಎಂದು ತಿಳಿ​ಸಿ​ದ​ರು. ಮೇಕೆ​ದಾಟು ಯೋಜನೆ ಎಲ್ಲಾ ಸಮ​ಸ್ಯೆ​ಗ​ಳಿಗೆ ಪರಿ​ಹಾ​ರ​ವಾ​ಗಿ​ದೆ. ಮೇಕೆದಾಟು ಅಣೆಕಟ್ಟು ಇದ್ದಿದ್ದರೆ ಸಂಕಷ್ಟಸೂತ್ರದ ಮೂಲಕ ತಮಿಳುನಾಡಿಗೆ ನೀರು ಬಿಡಬಹುದಾಗಿತ್ತು. ಮೇಕೆದಾಟು ಯೋಜನೆ ತಮಿಳುನಾಡಿನ ಹಿತ ಕಾಯಲಿದೆ. ಹೀಗಾಗಿ ನಾವು ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತೇವೆ ಎಂದ​ರು. ಕಾವೇರಿ ನೀರಿನ ವಿಚಾರವಾಗಿ ನಮ್ಮ ಅಧಿಕಾರಿಗಳ ಹೋರಾಟದ ಪರಿಣಾಮ ಕಡಿಮೆ ನೀರು ಹರಿಸುವ ಆದೇಶ ಸಿಕ್ಕಿದೆ. ಆದರೂ ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ಪ್ರತಿನಿತ್ಯ 5 ಸಾವಿರ ಕ್ಯುಸೆಕ್‌ ನೀರು ಹರಿಸುವುದು ಸವಾಲಿನ ವಿಚಾರ. 

ಸುಪ್ರೀಂಕೋರ್ಟ್​ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ!

ಹೀಗಾಗಿ ಕಾವೇರಿ ವಿಚಾರವಾಗಿ ರಾಜ್ಯದ ಪರ ವಾದ ಮಾಡುತ್ತಿರುವ ಅಡ್ವೊ​ಕೇಟ್‌ ಜನರಲ್‌ ಹಾಗೂ ಅವರ ಕಾನೂನು ತಜ್ಞರ ತಂಡ, ಅಧಿಕಾರಿಗಳು, ಕರ್ನಾಟಕ ಪ್ರತಿನಿಧಿಗಳು ಸೇರಿ ಚರ್ಚೆ ಮಾಡಿ​ದ್ದೇ​ವೆ ಎಂದ​ರು. ತಮಿಳುನಾಡಿನವರು 24 ಸಾವಿರ ಕ್ಯುಸೆಕ್‌ ನೀರು ಕೇಳಿದ್ದರು. ನಮ್ಮ ಅಧಿಕಾರಿಗಳು ವಾಸ್ತವಾಂಶಗಳ ದಾಖಲೆ ಮಂಡಿಸಿದ ಪರಿಣಾಮ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ 5 ಸಾವಿರ ಕ್ಯುಸೆ​ಕ್‌ಗೆ ಇಳಿ​ಸ​ಲಾ​ಗಿ​ದೆ. ರಾಜ್ಯದಲ್ಲಿ ಮಳೆ ಕೊರತೆ, ಅಣೆಕಟ್ಟುಗಳಿಗೆ ಒಳಹರಿವಿನ ಪ್ರಮಾಣ ಕುಸಿದಿರುವ ಕಾರಣ, ಈ ಪ್ರಮಾಣದಲ್ಲಿ ನೀರು ಬಿಡುವುದು ಕಷ್ಟಕರ. ನಾವು ತಮಿಳುನಾಡಿನ ಹಕ್ಕಿನ ನೀರಿನ ಬಳಕೆ ಬಗ್ಗೆ ನಾವು ಪ್ರಶ್ನಿಸಲು ಸಾಧ್ಯವಿಲ್ಲ ಎಂದ​ರು.

Follow Us:
Download App:
  • android
  • ios