Asianet Suvarna News Asianet Suvarna News

‘ಪಂಚರತ್ನ’ ಯೋಜನೆಯಿಂದ ರಾಜ್ಯದ ಅಭಿವೃದ್ಧಿ: ಎಚ್‌.ಡಿ.ಕುಮಾರಸ್ವಾಮಿ

ಪಂಚರತ್ನ ಯೋಜನೆಯಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ, ಹೊಳವನಹಳ್ಳಿ, ಕೋಳಾಲ, ಕಸಬಾ, ತೋವಿನಕೆರೆ ಮತ್ತು ಕೊರಟಗೆರೆ ಪಟ್ಟಣದಲ್ಲಿ ಜಾತ್ಯತೀತಾ ಜನತಾ ದಳ ಪಕ್ಷದಿಂದ ಶನಿವಾರ ಏರ್ಪಡಿಸಲಾಗಿದ್ದ ಪಂಚರತ್ನ ರಥಯಾತ್ರೆ ಸಂಚಾರದ ವೇಳೆ ಮಾತನಾಡಿದರು.

Development of the state through the Pancharatna scheme says Hd Kumaraswamy gvd
Author
First Published Dec 4, 2022, 2:00 AM IST

ಕೊರಟಗೆರೆ (ಡಿ.04): ಪಂಚರತ್ನ ಯೋಜನೆಯಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ, ಹೊಳವನಹಳ್ಳಿ, ಕೋಳಾಲ, ಕಸಬಾ, ತೋವಿನಕೆರೆ ಮತ್ತು ಕೊರಟಗೆರೆ ಪಟ್ಟಣದಲ್ಲಿ ಜಾತ್ಯತೀತಾ ಜನತಾ ದಳ ಪಕ್ಷದಿಂದ ಶನಿವಾರ ಏರ್ಪಡಿಸಲಾಗಿದ್ದ ಪಂಚರತ್ನ ರಥಯಾತ್ರೆ ಸಂಚಾರದ ವೇಳೆ ಮಾತನಾಡಿದರು.

ಗುಣಮಟ್ಟದ ಶಿಕ್ಷಣವೇ ಆಧುನಿಕ ಶಕ್ತಿ, ಬಡವರಿಗೆ ವಸತಿಯ ಆಸರೆ, ಪ್ರತಿ ಗ್ರಾಪಂಗೆ ಹೈಟೆಕ್‌ ಆಸ್ಪತ್ರೆ, ಆಧುನಿಕ ತಂತ್ರಜ್ಞಾನದ ಕೃಷಿ ಚೈತನ್ಯ, ಯುವ ಜನತೆಗೆ ನವಮಾರ್ಗ ಮತ್ತು ಮಹಿಳೆಯರಿಗೆ ಉದ್ಯೋಗಕ್ಕಾಗಿ ಜೆಡಿಎಸ್‌ ಪಕ್ಷವು ಪಂಚರತ್ನ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ, ಕಾರ್ಯಕ್ರಮದ ಹೆಸರಿನಲ್ಲಿ ಜನರ ಹಣವು ಲೂಟಿ ಆಗುತ್ತಿದೆ. ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೇ ಬಡವರ ಕಲ್ಯಾಣವೇ ನನ್ನ ಗುರಿ ಎಂದರು.

JDS Pancharatna Rathayatra: ಮಧುಗಿರಿಯಲ್ಲಿ ಪಂಚರತ್ನ ಯಾತ್ರೆಗೆ ಅದ್ಧೂರಿ ಸ್ವಾಗತ

ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ಮಾತನಾಡಿ, ನವ ಕರ್ನಾಟಕ ನಿರ್ಮಾಣಕ್ಕಾಗಿ ಕುಮಾರಣ್ಣ ಪಂಚರತ್ನ ಯೋಜನೆ ರೂಪಿಸಿ ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಕುಮಾರಣ್ಣ ನೀಡಿರುವ ರೈತಪರ ಯೋಜನೆಯೇ ನನಗೆ ಶ್ರೀರಕ್ಷೆ ಆಗಲಿದೆ. ಪಂಚರತ್ನ ಯಾತ್ರೆ ವೇಳೆ ಕೊರಟಗೆರೆ ಕ್ಷೇತ್ರದ ರೈತಾಪಿ ವರ್ಗ ಮತ್ತು ಕಾರ್ಯಕರ್ತರು ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋುಣಿ ಆಗಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ಲಕ್ಷ್ಮಣ್‌, ವಕ್ತಾರ ಲಕ್ಷ್ಮೇಶ್‌, ಯುವಾಧ್ಯಕ್ಷ ವೆಂಕಟೇಶ್‌, ಜಿಪಂ ಸದಸ್ಯರಾದ ಶಿವರಾಮಯ್ಯ, ತಾಪಂ ಮಾಜಿ ಸದಸ್ಯ ಪ್ರಕಾಶ್‌, ಮುಖಂಡರಾದ ಕಾಮರಾಜು, ಸಿದ್ದಮಲ್ಲಪ್ಪ, ಮಂಜುನಾಥ, ನಾಗರಾಜು, ಕಾಂತರಾಜು, ರಮೇಶ್‌, ಶಶಿಕುಮಾರ್‌, ಪಾರುಕ್‌, ಅಮರ್‌ ಸೇರಿದಂತೆ ಇತರರು ಇದ್ದರು.

ರೈತರಿಂದ ಕುಮಾರಣ್ಣನಿಗೆ ಅದ್ಧೂರಿ ಸ್ವಾಗತ: ಪುರವಾರ ಗ್ರಾಮದ ರೈತರಿಂದ ಕಡಲೆಕಾಯಿ ಹಾರ, ಬೈರೇನಹಳ್ಳಿಯ ಕಾರ್ಯಕರ್ತರಿಂದ ಸೇಬಿನ ಹಾರ, ಹೊಳವನಹಳ್ಳಿಯ ರೈತರಿಂದ ಅಡಕೆಯ ಹಾರ, ಕೊರಟಗೆರೆ ಪಟ್ಟಣದ ಕಾರ್ಯಕರ್ತರಿಂದ ಉದ್ದಿನಹೊಡೆ, ಲಿಂಬೆಹಣ್ಣು ಹಾರ, ಜಿ.ನಾಗೇನಹಳ್ಳಿಯ ಸ್ಥಳೀಯರಿಂದ ತುಳಸಿ ಪತ್ರೆಯ ಹಾರ ಮತ್ತು ಕೆಸ್ತೂರು-ತೋವಿನಕೆರೆ ಮುಖಂಡರಿಂದ ಮುಸುಕಿನ ಜೋಳ- ಸೇಬಿನ ಹಾರ ಹಾಕುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಕೊರಟಗೆರೆ ಕ್ಷೇತ್ರದ ಸಾವಿರಾರು ರೈತರು ಅದ್ಧೂರಿ ಸ್ವಾಗತ ಕೋರಿದರು.

6 ಜಿಪಂ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ: ಕೊರಟಗೆರೆ ಕ್ಷೇತ್ರದ ಪುರವಾರ, ಹೊಳವನಹಳ್ಳಿ, ಕೋಳಾಲ, ಕಸಬಾ, ತೋವಿನಕೆರೆ ಮತ್ತು ಕೆಸ್ತೂರು ಕ್ಷೇತ್ರಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸುಧಾಕರಲಾಲ್‌ ಅಬ್ಬರ ಪ್ರಚಾರ ನಡೆಸಿದರು. ಪಂಚರತ್ನ ಯೋಜನೆಯ ಪ್ರಚಾರದ ವಾಹನ ಮತ್ತು ಸಾವಿರಾರು ಜೆಡಿಎಸ್‌ ಕಾರ್ಯಕರ್ತರು ದ್ವಿಚಕ್ರ ವಾಹನಗಳ ಮೂಲಕ 50ಕ್ಕೂ ಅ​ಧಿಕ ಗ್ರಾಮಗಳಲ್ಲಿ ಸಂಚರಿಸಿ ಜೆಡಿಎಸ್‌ ಪಕ್ಷದ ಯೋಜನೆಯ ಬಗ್ಗೆ ಪ್ರಚಾರ ನಡೆಸಿದರು.

Pancharatna Rathayatra: ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು: ಎಚ್‌.ಡಿ.ಕುಮಾರಸ್ವಾಮಿ

ಹತ್ತಾರು ಸಮಸ್ಯೆ ಆಲಿಸಿದ ಕುಮಾರಣ್ಣ: ಪಂಚರತ್ನ ಯಾತ್ರೆ ಸಂಚಾರದ ವೇಳೆ ಶಾಲೆಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲ, ಕೊಠಡಿಗಳು ಸೋರುತ್ತಿವೆ ಎಂದ ಮಕ್ಕಳು, ನನಗೇ ಒಂದು ಕಾಲು ಇಲ್ಲ, ಕೃತಕ ಕಾಲಿನಲ್ಲಿ ಓಡಾಡುತ್ತಿದ್ದೇನೆ ಒಂದು ಬೈಕ್‌ ಕೊಡಿಸಿ ಎಂದು ವಿಶೇಷ ಚೇತನನ ಮನವಿ, ಹತ್ತಾರು ಕಡೆಗಳಲ್ಲಿ ಸೇತುವೆ ದುರಸ್ತಿ ಮತ್ತು ರಸ್ತೆಗಳು ಕಡಿತವಾಗಿವೆ ಎಂದು ತೀತಾ ಜನರ ಅಳಲು, ಶಾಲೆಗೆ ಬರಲು ಕರಡಿ ಕಾಟವಿದೆ ಎಂದು ಕುಮಾರಸ್ವಾಮಿ ಮುಂದೆ ಕಣ್ಣೀರಿಟ್ಟಪುರವಾರದ ವಿದ್ಯಾರ್ಥಿನಿ. ಹೀಗೆ ನೂರಾರು ಜನ ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಮಾಜಿ ಸಿಎಂ ಮುಂದೆ ತೋಡಿಕೊಂಡರು.

Follow Us:
Download App:
  • android
  • ios