Asianet Suvarna News Asianet Suvarna News

ಗೃಹಲಕ್ಷ್ಮೀಗಾಗಿ ಅತ್ತೆ-ಸೊಸೆ ನಡುವೆ ಪೈಪೋಟಿ: ರೇಷನ್‌ ಕಾರ್ಡಿ​ಗಾಗಿ ಕುಟುಂಬ​ಗಳು ಇಬ್ಭಾ​ಗ

ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾ​ರ ಜಾರಿಗೆ ಮುಂದಾ​ಗಿ​ರುವ ಗೃಹ​ಲಕ್ಷ್ಮಿ ಯೋಜನೆಯಲ್ಲಿ 2 ಸಾವಿರ ರುಪಾಯಿ ಪಡೆ​ಯುವ ಯಜ​ಮಾನಿ ಯಾರೆಂಬು​ದರ ಬಗ್ಗೆ ಮನೆ ಮನೆ​ಗ​ಳಲ್ಲಿ ಚರ್ಚೆ ನಡೆ​ಯು​ತ್ತಿದ್ದು, ರೇಷನ್‌ ಕಾರ್ಡ್‌ಗಾಗಿ ಒಂದಾ​ಗಿ​ರುವ ಕುಟುಂಬ​ಗಳು ಬೇರೆ ಬೇರೆ​ಯಾ​ಗುವ ಲಕ್ಷ​ಣ​ಗಳು ಗೋಚ​ರಿ​ಸು​ತ್ತಿವೆ. 

Competition between mother in law and daughter in law for Grihalakshmi Yojana gvd
Author
First Published Jun 4, 2023, 9:03 PM IST

ಎಂ.ಅಫ್ರೋಜ್‌ ಖಾನ್‌

ರಾಮ​ನ​ಗರ (ಜೂ.04): ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾ​ರ ಜಾರಿಗೆ ಮುಂದಾ​ಗಿ​ರುವ ಗೃಹ​ಲಕ್ಷ್ಮಿ ಯೋಜನೆಯಲ್ಲಿ 2 ಸಾವಿರ ರುಪಾಯಿ ಪಡೆ​ಯುವ ಯಜ​ಮಾನಿ ಯಾರೆಂಬು​ದರ ಬಗ್ಗೆ ಮನೆ ಮನೆ​ಗ​ಳಲ್ಲಿ ಚರ್ಚೆ ನಡೆ​ಯು​ತ್ತಿದ್ದು, ರೇಷನ್‌ ಕಾರ್ಡ್‌ಗಾಗಿ ಒಂದಾ​ಗಿ​ರುವ ಕುಟುಂಬ​ಗಳು ಬೇರೆ ಬೇರೆ​ಯಾ​ಗುವ ಲಕ್ಷ​ಣ​ಗಳು ಗೋಚ​ರಿ​ಸು​ತ್ತಿವೆ. ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜ​ನೆ​ಯಡಿ ಮನೆ ಯಜ​ಮಾ​ನಿಗೆ ಮಾಸಿಕ 2 ಸಾವಿರ ರುಪಾಯಿ ನೀಡುವ ಗ್ಯಾರಂಟಿ​ಯನ್ನು ನೀಡಿದೆ. ಮನೆ ಒಡ​ತಿ​ಯಾ​ದರೆ ಮನೆ​ಯಲ್ಲಿ ಒಬ್ಬ​ ಮಹಿ​ಳೆಗೆ ಮಾತ್ರ 2 ಸಾವಿರ ದೊರೆ​ಯು​ತ್ತದೆ. ಹಾಗಾಗಿ ಈಗಿ​ರುವ ರೇಷನ್‌ ಕಾರ್ಡ್‌ನಿಂದ ಹೆಸರು ಡಿಲೀಟ್‌ ಮಾಡಿಸಿ ಹೊಸ ರೇಷನ್‌ ಕಾರ್ಡ್‌ ಮಾಡಿ​ಸುವ ಪ್ಲಾನ್‌ಗಳನ್ನು ಜನರು ಹಾಕಿ​ಕೊ​ಳ್ಳು​ತ್ತಿ​ದ್ದಾರೆ. 

ಹೊಸ ರೇಷನ್‌ ಕಾರ್ಡ್‌ ಮಾಡಿ​ಸಲು ಹಾಗೂ ಹೆಸರು ಡಿಲೀಟ್‌ ಮಾಡಿ​ಸಲು ಜಿಲ್ಲೆಯ ಆನ್‌ಲೈನ್‌ ಕೇಂದ್ರ​ಗಳು ಹಾಗೂ ಸೇವಾ ಕೇಂದ್ರ​ಗ​ಳಿಗೆ ಜನರು ಅಲೆ​ದಾ​ಡು​ತ್ತಿ​ದ್ದಾರೆ. ಆಹಾರ ಇಲಾಖೆ ರೇಷನ್‌ ಕಾರ್ಡ್‌ಗೆ ಹೊಸ​ದಾಗಿ ಅರ್ಜಿ ಸಲ್ಲಿ​ಸಲು ಅವ​ಕಾಶ ನೀಡಿಲ್ಲ. ಒಂದೇ ಕಾರ್ಡಿ​ನಲ್ಲಿ ತಂದೆ - ತಾಯಿ, ಮಕ್ಕಳು, ಸೊಸೆ​ಯಂದಿರು, ಮೊಮ್ಮ​ಕ್ಕಳು ಇದ್ದಾರೆ. ಭಾವ​ನಾ​ತ್ಮ​ಕ​ವಾ​ಗಿಯೂ ಕುಟುಂಬ​ಗಳು ಒಂದೇ ಎಂಬ ಕಾರ​ಣಕ್ಕೆ ರೇಷನ್‌ ಕಾರ್ಡ್‌ ನಲ್ಲಿ ಎಲ್ಲರ ಹೆಸರು ನಮೂ​ದಾ​ಗಿವೆ. ಆದರೆ, ಈಗ ಬೆಂಗ​ಳೂರು ಸೇರಿ​ದಂತೆ ವಿವಿ​ಧೆಡೆ ಕೆಲ​ಸಕ್ಕೆ ಹೋಗಿ​ರುವ ಮಕ್ಕಳು ಕೂಡ ಹೊಸ​ಕಾರ್ಡ್‌ ಮಾಡಿ​ಸಲು ಮುಂದಾ​ಗಿ​ದ್ದಾ​ರೆ.

ಪ್ರವಾ​ಸೋ​ದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಬಾಲ​ಕೃಷ್ಣ ಜೊತೆ ಸಂಸದ ಸುರೇಶ್‌ ಚರ್ಚೆ

ಅತ್ತೆ-ಸೊಸೆ​ಯಲ್ಲಿ ಮನ​ಸ್ತಾ​ಪ: ಈ ಯೋಜ​ನೆಯ ಫಲಾ​ನು​ಭವಿ ಅತ್ತೆ ಅಥವಾ ಸೊಸೆ ಪೈಕಿ ಯಾರು ಫಲಾ​ನು​ಭವಿ ಎಂಬ ಗೊಂದ​ಲವೂ ಇತ್ತು. ಆದರೆ, ಸರ್ಕಾರ ಕುಟುಂಬದ ಸದ​ಸ್ಯರು ಮನೆ ಯಜ​ಮಾನಿ ಯಾರೆಂಬು​ದನ್ನು ನಿರ್ಧ​ರಿ​ಸ​ಬೇ​ಕೆಂದು ಸೂಚಿ​ಸಿದೆ. ಇದು ಅತ್ತೆ ಮತ್ತು ಸೊಸೆ ನಡುವೆ ಮನ​ಸ್ತಾಪ ಮೂಡಿ​ಸು​ತ್ತಿದೆ. ಅನ್ನ ಭಾಗ್ಯಕ್ಕೆ ಇಲ್ಲದ ಗೊಂದಲ ಈಗ ಗೃಹ ಲಕ್ಷ್ಮಿಗೆ ಹುಟ್ಟಿಕೊಂಡಿದೆ. ಈ ಯೋಜ​ನೆಗೆ ರೇಷನ್‌ ಕಾರ್ಡ್‌ ಅನ್ನೇ ಮಾನ​ದಂಡ​ವಾಗಿ ಪರಿ​ಗ​ಣಿ​ಸ​ಲಾ​ಗು​ತ್ತದೆ ಎಂಬ ಲೆಕ್ಕಾ​ಚಾರ ಹಾಕಿ​ಕೊಂಡಿ​ರುವ ಜನರು ಆನ್‌ಲೈನ್‌ ಕೇಂದ್ರ, ಕಂಪ್ಯೂ​ಟರ್‌ ಸೆಂಟರ್‌, ಸೇವಾ ಕೇಂದ್ರ​ಗ​ಳಿಗೆ ಎಡ​ತಾ​ಕು​ತ್ತಿ​ದ್ದಾರೆ.

ಸರ್ಕಾ​ರದ 5 ಗ್ಯಾರಂಟಿ​ಗಳ ಬಗ್ಗೆಯೇ ಎಲ್ಲೆಡೆ ಚರ್ಚೆ​ಗಳು ನಡೆ​ಯು​ತ್ತಿವೆ. ಅಧಿ​ಕಾ​ರಿ​ಗಳು ಯಾವಾಗ ಬಂದು ಸರ್ವೆ ಮಾಡುತ್ತಾರೊ ಎಂದು ಜನರಲ್ಲು ಆತಂಕ​ವಿದೆ. ಹಾಗಾಗಿ ಬೆಂಗ​ಳೂರು ಸೇರಿ​ದಂತೆ ಬೇರೆ ಕಡೆ ವಲಸೆ ಹೋದ​ವರು ಕೂಡ ಊರು​ಗ​ಳಿಗೆ ವಾಪ​ಸ್ಸಾಗಿ ದಾಖ​ಲೆ​ಗ​ಳನ್ನು ಜೋಡಿ​ಸುವ ಪ್ರಕ್ರಿ​ಯೆ​ಯಲ್ಲಿ ತೊಡ​ಗಿ​ದ್ದಾ​ರೆ.

ಆ​ರೋಗ್ಯ, ಶಿಕ್ಷ​ಣದ ವಲಸೆ ತಪ್ಪಿ​ಸುವುದು ನನ್ನ ಗುರಿ: ಡಿ.ಕೆ.​ಶಿ​ವ​ಕು​ಮಾರ್‌

3.05 ಲಕ್ಷ ಪಡಿ​ತರ ಚೀಟಿ​ಗಳು: ಜಿಲ್ಲೆ​ಯಲ್ಲಿ ಅಂತ್ಯೋ​ದಯ - 18,972, ಪ್ರಿಯಾ​ರಿಟಿ ಹೌಸ್‌ ಹೋಲ್ಡ್‌ (ಪಿ​ಎಚ್‌ಎಚ್‌ )- 2,78,107 ಹಾಗೂ ನಾನ್‌ ಪ್ರಿಯಾ​ರಿಟಿ ಹೌಸ್‌ ಹೋಲ್ಡ್‌ (ಎನ್‌ ಪಿಎಚ್‌ ಎಚ್‌ )- 8,406 ಸೇರಿ​ದಂತೆ ಒಟ್ಟು 3,05485 ಪಡಿ​ತರ ಚೀಟಿ​ಗ​ಳಿವೆ. ಈಗ ಹೊಸ​ದಾಗಿ ಆದ್ಯತಾ ಕುಟುಂಬ ಚೀಟಿ ಕೋರಿ ಅರ್ಜಿ ಸಲ್ಲಿ​ಸು​ವ​ವರ ಸಂಖ್ಯೆ ಹೆಚ್ಚಾ​ಗಿ​ದೆ. ಅಂತ್ಯೋ​ದಯ ಚೀಟಿ​ ಪಡೆ​ದ​ವ​ರಲ್ಲಿ ಚನ್ನ​ಪ​ಟ್ಟಣ - 4,742, ಕನ​ಕ​ಪುರ - 4955, ಮಾಗಡಿ - 5199, ರಾಮ​ನ​ಗರ 4076 ಕುಟುಂಬ​ಗ​ಳಿ​ದ್ದರೆ, ಆದ್ಯತಾ ಕುಟುಂಬ ಚೀಟಿ​ಗ​ಳನ್ನು ಚನ್ನ​ಪ​ಟ್ಟಣ - 65,234, ಕನ​ಕ​ಪುರ - 93,524, ಮಾಗಡಿ - 52,240 , ರಾಮ​ನ​ಗರ - 67,109 ಕುಟುಂಬ​ಗ​ಳು ಹೊಂದಿವೆ. ಆದ್ಯ​ತೇ​ತರ ಕುಟುಂಬ ಚೀಟಿ​ಗ​ಳನ್ನು ಚನ್ನ​ಪ​ಟ್ಟಣ - 3222, ಕನ​ಕ​ಪುರ - 1445, ಮಾಗಡಿ - 1678, ರಾಮ​ನ​ಗರ - 2061 ಕುಟುಂಬ​ಗಳು ಪಡೆ​ದು​ಕೊಂಡಿವೆ.

Follow Us:
Download App:
  • android
  • ios