Asianet Suvarna News Asianet Suvarna News

ಗಾಜಿನ ಮನೆಯಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಮಿಂಚಿನ ಸಂಚಾರ!

ವಿಜಯೇಂದ್ರಗೆ ಶುಭಾಶಯ ಹೇಳಲು ಮುಗಿಬಿದ್ದ ಸಚಿವರು| ಕಾರ‍್ಯಕ್ರಮಕ್ಕೂ ಮುನ್ನವೇ ನಿರ್ಗಮಿಸಿದ ಬಿಎಸ್‌ವೈ ಪುತ್ರ

Cabinet Expansion BS Yediyurappa Son BY Vijayendra Receieves Special Attention During Oath Taking Ceremony
Author
Bangalore, First Published Feb 7, 2020, 8:39 AM IST

ಬೆಂಗಳೂರು[ಫೆ.07]: ಸಚಿವ ಸಂಪುಟ ವಿಸ್ತರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರು ಕೇಂದ್ರ ಬಿಂದುವಾಗಿ ಕಾಣಿಸಿಕೊಂಡರು.

"

ರಾಜಭವನದಲ್ಲಿ ಕೆಲವೇ ಹೊತ್ತು ಇದ್ದರೂ ಕಾರ್ಯಕ್ರಮದಲ್ಲಿ ಗಮನ ಸೆಳೆದರು. ಸಮಾರಂಭಕ್ಕೆ ವಿಜಯೇಂದ್ರ ಆಗಮಿಸುತ್ತಿದ್ದಂತೆ ಬಿಜೆಪಿಯ ನಾಯಕರು ಮತ್ತು ನೂತನ ಸಚಿವರು ಮುಗಿಬಿದ್ದು ಶುಭಾಶಯ ಕೋರಿದರು. ನೂತನ ಸಚಿವರು ಮತ್ತು ಅವರ ಕುಟುಂಬದ ಸದಸ್ಯರ ಬಳಿ ತೆರಳಿ ವಿಜಯೇಂದ್ರ ಯೋಗಕ್ಷೇಮ ವಿಚಾರಿಸಿದರು.

ಸಂಪುಟ ವಿಸ್ತರಣೆ ಕಸರತ್ತಿನಲ್ಲಿ ವಿಜಯೇಂದ್ರ ಕೇಂದ್ರ ಬಿಂದು!

ಕೆಲ ಸಮಯ ಇಡೀ ಸಮಾರಂಭದಲ್ಲಿ ಓಡಾಡಿ ಮುಖಂಡರನ್ನು, ಸಚಿವರಾಗುವವರನ್ನು ಮಾತನಾಡಿಸಿದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆರಂಭವಾಗುವ ಮುನ್ನವೇ ವಿಜಯೇಂದ್ರ ಸ್ಥಳದಿಂದ ನಿರ್ಗಮಿಸಿದರು. ಮೂಲಗಳ ಪ್ರಕಾರ, ವಿಜಯೇಂದ್ರ ಅವರು ದೆಹಲಿಗೆ ತೆರಳಬೇಕಾಗಿದ್ದ ಕಾರಣ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಥಳದಿಂದ ತೆರಳಿದರು ಎಂದು ಹೇಳಲಾಗಿದೆ.

Follow Us:
Download App:
  • android
  • ios