Asianet Suvarna News Asianet Suvarna News

ಸಿಡಿ ತೋರಿಸಿ ಮಂತ್ರಿಗಿರಿ ಪಡೆದಿದ್ದಾರೆ, ಸಿಡಿ ಬಾಂಬ್ ಸ್ಫೋಟಿಸಿದ ಯತ್ನಾಳ್

* ಮತ್ತೆ ಹೊಸ ಬಾಂಬ್‌ ಹಾಕಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
* ಡಿಕೆ ಕೊತ್ವಾಲ್‌ ಗೆ ಸಿಗರೇಟು ತಂದು ಕೊಡ್ತಿದ್ದ ರೌಡಿ
* ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್

BJP MLA Basangouda Patil yatnal Hits Out at DK Shivakumar brj
Author
Bengaluru, First Published May 8, 2022, 7:15 PM IST

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ‌ ನ್ಯೂಸ್

ವಿಜಯಪುರ (ಮೇ.8):
ಮುಖ್ಯಮಂತ್ರಿ ಕುರ್ಚಿಗೆ 2500 ಕೋಟಿ ರೂ. ಕೇಳಿದ್ದಾರೆ ಎಂದು ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ರು, ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಹೌದು...ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ನಡೆದ ವೀರರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆ ಮೇಲೆ ಮಾತನಾಡಿದ ಯತ್ನಾಳ್‌, ಸಿಡಿ ತೋರಿಸಿ ಬ್ಲಾಕ್‌ ಮೇಲ್‌ ಮಾಡಿ ಮಂತ್ರಿಗಿರಿ ಪಡೆದಿದ್ದಾರೆ. ಯಾರ್ಯಾರದ್ದೋ ಸಿಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ. ಹೀಗೆ ಅವರ ವಿಕ್ನೇಸ್‌ ಪತ್ತೆ ಮಾಡಿ ಸಿಡಿ ಮಾಡಿ ಅದನ್ನ ತೋರಿಸಿ ಸಚಿವ ಸ್ಥಾನ ಪಡೆದವರು ನಮ್ಮ ಬಿಜೆಪಿಯಲ್ಲೆ ಇದ್ದಾರೆ. ಇವರ ಅರ್ಹತೆಯಿಂದ ಮಂತ್ರಿಯಾಗಿಲ್ಲ ಎನ್ನುವ ಮೂಲಕ ಸ್ವಪಕ್ಷೀಯ ಪ್ರಭಾವಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ದಿಢೀರ್ ಯುಟರ್ನ್, ಫೋನ್‌ಗೆ ಬೆದರಿದ್ರಾ ಬಸನಗೌಡ ಪಾಟೀಲ್ ಯತ್ನಾಳ್?

100 ಕೋಟಿಯ ಬಾಂಬ್‌ ಹಾಕಿದ ಯತ್ನಾಳ್..!‌
ನನಗೆ 50 ಕೋಟಿ, 100 ಕೋಟಿ ಕೊಡಿ ಅಂದ್ರೆ ಎಲ್ಲಿಂದ ಕೊಡಲಿ ಎಂದು ಯತ್ನಾಳ್‌ ಪ್ರಶ್ನಿಸಿದ್ದಾರೆ. ಅದೇ 50 ಕೋಟಿ ನನ್ನ ಸಿದ್ಧಸಿರಿ ಬ್ಯಾಂಕಿನಲ್ಲಿಟ್ಟರೆ ತಿಂಗಳಿ 50 ಲಕ್ಷ ಬಡ್ಡಿ ಬರುತ್ತೆ. 25 ಖರ್ಚು ಮಾಡಿ ಇನ್ನು 25ಲಕ್ಷ ಜನರಿಗೆ ಕೊಟ್ಟು ಆರಾಮಾಗಿರಿ ಇರಬಹುದು. ಅವರಿವರ ಕೈ ಕಾಲು ಬಿದ್ದು, ಯಪ್ಪಾ-ಯಣ್ಣಾ ಅನ್ನೋದ್ಯಾಕೆ ಎಂದಿದ್ದಾರೆ. ಈ ಮೂಲಕ 50, 100 ಕೋಟಿ ಕೊಟ್ಟು ಸಚಿವ ಸ್ಥಾನ ಪಡೆದವರು ಇದ್ದಾರೆ ಎಂದು ತಮ್ಮದೆ ದಾಟಿಯಲ್ಲಿ ಯತ್ನಾಳ್‌ ಕೋಟಿ-ಕೋಟಿಯ ಬಾಂಬ್‌ ಸಿಡಿಸಿದರು.

ಮುತಾಲಿಕ್ ಪರ ನಿಲ್ತೀನಿ ಎಂದ ಪೈರ್‌ ಬ್ರಾಂಡ್‌ ಶಾಸಕ.!
ಇನ್ನು ಅಜಾನ್‌ ಮೈಕ್‌ ವಿರುದ್ಧ ನಾಳೆಯಿಂದ ಹನುಮಾನ ಚಾಲಿಸ, ಭಜನೆ ಅಭಿಯಾನ ಶುರು ಮಾಡ್ತಿರೋ ಮುತಾಲಿಕ್‌ ಕುರಿತಾಗಿ ಮಾತನಾಡಿದ ಯತ್ನಾಳ ಸರ್ಕಾರ ಕಾನೂನು ಬಾಹಿರ ಮೈಕ್‌ ಗಳನ್ನ ಧಾರ್ಮಿಕ ಕೇಂದ್ರಗಳಿಂದ ತೆಗೆದು ಹಾಕಬೇಕು. ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಬೇಕಾದ್ದು ಸರ್ಕಾರದ ಧರ್ಮ. ಸಿಎಂ ಕೂಡ ಕೋರ್ಟ್‌ ಆದೇಶ ಪಾಲಿಸಿ ಉತ್ತರ ಪ್ರದೇಶದಂತೆ ಅನುಮತಿ ಇಲ್ಲದ ಹಾಗೂ ಕಾನೂನು ಬಾಹಿರವಾಗಿ ಅಳವಡಿಕೆಯಾಗಿರೋ ಮೈಕ್‌ ಗಳನ್ನ ತೆಗೆದು ಹಾಕಲು ಗೃಹಮಂತ್ರಿಗಳಿಗೆ ನಿರ್ದೇಶನ ಕೊಡಬೇಕು. ಇಲ್ಲದೆ ಹೋದಲ್ಲಿ ಮುತಾಲಿಕ್‌ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಅವರ ಪರ ನಿಲ್ತೀನಿ ಎಂದು ಯತ್ನಾಳ್ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಡಿಕೆಶಿ ವಿರುದ್ಧ ಮುಗಿಬಿದ್ದ ಯತ್ನಾಳ್..!
ಇನ್ನು ರಾಣಿ ಚೆನ್ಮಮ್ಮ ಮೂರ್ತಿ ಉದ್ಘಾಟನೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಯತ್ನಾಳ್‌, ಡಿಕೆಶಿ ವಿರುದ್ಧ ಕೆಂಡಾಮಂಡಲಾದ್ರು, ಡಿಕೆ ಮಾನನಷ್ಟ ಮೊಕದ್ದಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್‌ ಹಿಂದೆ ನನ್ನ ವಿರುದ್ಧ ಕೇಸ್‌ ಹಾಕಿದ್ರು, ಹಣ ಇದೆ ಈಗಲು ಕೇಸ್‌ ಹಾಕಲಿ.. ಮಾನ ಇದ್ದವರ ಮಾನ ಹೋಗುತ್ತೆ, ಮಾನವೇ ಇಲ್ದವರ ಮಾನ ಎಲ್ಲಿ ನಷ್ಟವಾಗುತ್ತೆ ಎನ್ನುವ ಮೂಲಕ ಡಿಕೆಶಿಗೆ ಮಾತಲ್ಲೆ ತಿವಿದರು..

ಕೊತ್ವಾಲ್‌ ಗೆ ಸಿಗರೇಟು, ಟೀ ತಂದುಕೊಡ್ತಿದ್ದ ಡಿಕೆಶಿ..!
ಇನ್ನು ಡಿಕೆಶಿ ಯತ್ನಾಳ್‌ ಗೆ ಮೆಂಟಲ್‌ ಎಂದು ನಿಂದಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆ ಒಬ್ಬ ರೌಡಿ, ಭೂಗತ ಲೋಕದ ಕೊತ್ವಾಲ್‌ ನಿಗೆ ಸಿಗೇಟ್‌, ಚಹಾ ತಂದು ಕೊಡ್ತಿದ್ದ ರೌಡಿ. ಇಂಥ ರೌಡಿಯಿಂದ ನಾನು ಕಲಿಯಬೇಕಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಯತ್ನಾಳ್‌ ಸಿಎಂ ಸೀಟಿಗೆ 2ಸಾವಿರ ಕೋಟಿ ಕೇಳಿದರು ಎನ್ನುವ ಹೇಳಿಕೆ ವಿಚಾರವಾಗಿ ಡಿಕೆ ಶಿವಕುಮಾರ್‌ ಈ ಬಗ್ಗೆ ತನಿಖೆ ನಡೆಯಲಿ ಎಂದು ಎಸಿಬಿ ದೂರು ಕೊಡುವುದಾಗಿ ಹೇಳಿದ್ದರು. ಈ ವಿಚಾರವಾಗಿ ಕೆಂಡಾಮಂಡಲರಾಗಿದ್ದ ಯತ್ನಾಳ್‌ ನಿನ್ನೆ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಡಿಕೆಶಿಗೆ ನನ್ನ ಕಂಡ್ರೆ ಭಯವಿದೆ. ನಾನು ಪವರ್‌ ಪುಲ್‌ ಮನುಷ್ಯನಾದ್ರೆ ಡಿಕೆಶಿಗೆ ಮತ್ತೆ ಜೈಲು ಸೇರುವ ಭಯವಿದೆ ಎಂದಿದ್ದರು. ಜೊತೆಗೆ ನಾನು ಏನಾದ್ರು ಆದ್ರೆ ಬುಲ್ಡೋಜರ್‌ ರೆಡಿ ಇಟ್ಟಿದ್ದೀನಿ, ಅಕ್ರಮ ಆಸ್ತಿಗಳನ್ನ ಒಡೆದು ಹಾಕ್ತೀನಿ ಎಂದು ಡಿಕೆಶಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು.

Follow Us:
Download App:
  • android
  • ios