Asianet Suvarna News Asianet Suvarna News

ಬಿಜೆಪಿಗೆ ಕೈಕೊಟ್ಟ ನಿತೀಶ್‌, ಆಗಸ್ಟ್ 11ಕ್ಕೆ ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಸರ್ಕಾರ?

ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಸರ್ಕಾರ ಪತನಗೊಳ್ಳುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ. ಮೂಲಗಳ ಪ್ರಕಾರ, ಆಗಸ್ಟ್‌ 11 ರಂದು ಆರ್‌ಜೆಡಿ ಬೆಂಬಲದೊಂದಿಗೆ ನಿತೀಶ್‌ ಕುಮಾರ್‌ ಸರ್ಕಾರ ರಚಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಆರ್‌ಜೆಡಿ ಮೈತ್ರಿಯೊಂದಿಗೆ ಸರ್ಕಾರ ರಚಿಸಿದ್ದ ಜೆಡಿಯು, ಬಳಿಕ ಮೈತ್ರಿ ಕಡಿದುಕೊಂಡು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿತ್ತು. ಈಗ ಮತ್ತೆ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ.
 

BJP JDU alliance may break in Bihar JDU RJD may form government by August 11 Nitish Kumar talks to Sonia gandhi san
Author
Bengaluru, First Published Aug 8, 2022, 6:46 PM IST

ಪಾಟ್ನಾ (ಆ.8): ಬಿಹಾರದಲ್ಲಿ ಮತ್ತೊಮ್ಮೆ ಜೆಡಿಯು-ಬಿಜೆಪಿ ಮೈತ್ರಿ ಮುರಿದು ಬೀಳುವ ಸಾಧ್ಯತೆ ಇದೆ. ಆಗಸ್ಟ್‌ 11 ರಂದು ಬಿಹಾರದಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ಸರ್ಕಾರ ಕೊನೆಯಾಗಲಿದ್ದು, ಅದೇ ದಿನ ಮತ್ತೊಮ್ಮೆ ಬಿಹಾರದಲ್ಲಿ ಜೆಡಿಯು ಮತ್ತು ಆರ್‌ಜೆಡಿ ಸರ್ಕಾರ ರಚನೆಯಾಗಬಹುದು ಎಂದು ವರದಿಯಾಗಿದೆ. ಇನ್ನೆರಡು ದಿನಗಳಲ್ಲಿ ಪಾಟ್ನಾ ತಲುಪುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಎಲ್ಲಾ ಸಂಸದರು ಮತ್ತು ಶಾಸಕರಿಗೆ ತಿಳಿಸಿದ್ದಾರೆ. ಮತ್ತೊಂದೆಡೆ ಆರ್‌ಜೆಡಿ ಕೂಡ ಅದೇ ಹಾದಿಯಲ್ಲಿದೆ. ಎಲ್ಲಾ ಶಾಸಕರನ್ನು ಪಾಟ್ನಾದಲ್ಲಿಯೇ ಇರುವಂತೆ ಹೇಳಿದ್ದಾರೆ. ಮೂಲಗಳ ಪ್ರಕಾರ ನಿತೀಶ್ ಅವರು ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಆಗಸ್ಟ್ 11 ರೊಳಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬಹುದು. ಮಂಗಳವಾರವೇ ತೇಜಸ್ವಿ ಯಾದವ್ ಅವರು ತಮ್ಮ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಆದರೆ, ಸರ್ಕಾರದ ಭವಿಷ್ಯದ ಬಗ್ಗೆ ಜೆಡಿಯು ನಾಯಕರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ದೆಹಲಿಯಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಝಂಜರ್‌ಪುರದ ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಅವರು ಬಿಹಾರ ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ ಎಂದು ಹೇಳಿದ್ದಾರೆ. ಇದು ಟರ್ನಿಂಗ್ ಪಾಯಿಂಟ್. ನಾವು ಅಲ್ಲಿಗೆ ಹೋಗುವ ಮೊದಲೇ ಅಲ್ಲಿ ಏನು ಬೇಕಾದರೂ ಆಗಬಹುದು. ನಮ್ಮ ನಾಯಕ ನಿತೀಶ್ ಕುಮಾರ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಮಾನ್ಯವಾಗಿರುತ್ತದೆ. 

ಈ ಹೇಳಿಕೆಯ ಪ್ರಕಾರ, ನಿತೀಶ್ ಕುಮಾರ್ ಇಂದು ಎನ್‌ಡಿಎ ಸರ್ಕಾರದ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಲಾಗಿದೆ. ಇನ್ನೊಂದೆಡೆ, ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಶಿವಾನಂದ್ ತಿವಾರಿ ಅವರು, ನಿತೀಶ್ ಕುಮಾರ್ ಆರ್‌ಜೆಡಿ ಜೊತೆ ಮಾತುಕತೆ ಆರಂಭಿಸಿದರೆ ನಾವು ಅದಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಪಾಟ್ನಾದ ರಸ್ತೆಗಳನ್ನು ಹಾಳು ಮಾಡಿ ಬಿಜೆಪಿಯ ನಂಬರ್ ಟೂ ನಾಯಕ ಹೊರಟು ಹೋಗಿದ್ದಾರೆ ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಹೇಳಿದ್ದಾರೆ. ನಾವು ಮತ್ತು ಇತರ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ನಂ.2 ನಾಯಕನನ್ನು ಪವಿತ್ರಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಆಫರ್ ಬಂದ ಮೇಲೆ ಸರ್ಕಾರ ರಚಿಸುವ ಪ್ರಶ್ನೆಗೆ, ನಾವು ಜನರೊಂದಿಗೆ ಇದ್ದೇವೆ ಎಂದು ಹೇಳಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಗಲಭೆಕೋರರ ಸರ್ಕಾರವನ್ನು ತಡೆಯಲು ನಾವು ಪ್ರತಿ ಹೆಜ್ಜೆ ಇಡಲು ಸಿದ್ಧರಿದ್ದೇವೆ ಎಂದಿದ್ದಾರೆ.

ನೀತಿ ಆಯೋಗ ಸಭೆಗೆ ಗೈರಾಗಲಿರುವ ನಿತೀಶ್‌ ಕುಮಾರ್‌, ಕೆಸಿಆರ್‌: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಪತ್ರ ಬರೆದು ಆಕ್ರೋಶ

ಕಡಿಮೆ ಸೀಟ್‌ಗಳು ಬಂದಿದ್ದರೂ ನಿತೀಶ್‌ ಮುಖ್ಯಮಂತ್ರಿ: 2020ರ ಬಿಹಾರ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷ, 2015ರ ಚುನಾವಣೆಗೆ ಹೋಲಿಸಿದರೆ 28 ಕಡಿಮೆ ಸೀಟ್‌ಗಳನ್ನು ಗೆದ್ದಿತ್ಉತ. ಕೇವಲ 43 ಸೀಟ್‌ಗಳನ್ನು ಜೆಡಿಯು ಗೆದ್ದಿತ್ತು.ಇನ್ನೊಂದೆಡೆ ಬಿಜೆಪಿಯ 21 ಸೀಟ್‌ಗಳು ಏರಿಕೆಯಾಗಿ 74 ಸ್ಥಾನಗಳನ್ನು ಗೆದ್ದಿತ್ತು. ಹಾಗಿದ್ದರೂ ಬಿಜೆಪಿ ನಿತೀಶ್‌ ಕುಮಾರ್‌ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಚುನಾವಣೆಯಲ್ಲಿ ಎನ್‌ಡಿಎ 125 ಸ್ಥಾನಗಳಲ್ಲಿ ಜಯ ಕಂಡರೆ, ಮಹಾಘಟಬಂದನ್‌ 110 ಸೀಟ್‌ಗಳನ್ನು ಗೆದ್ದಿತ್ತು.

ಲಾಲು ಯಾದವ್ ಭೇಟಿಯಾದ ಸಿಎಂ ನಿತೀಶ್ ಕುಮಾರ್, ಚಿಕಿತ್ಸೆ ಸೇರಿ ಎಲ್ಲಾ ಖರ್ಚು ಸರ್ಕಾರದ್ದೇ!

ನಿತೀಶ್‌ ಕುಮಾರ್‌ ಸಿಟ್ಟಿಗೆ ಕಾರಣವೇನು: ಮೂಲಗಳ ಪ್ರಕಾರ, ಸರ್ಕಾರದಲ್ಲಿ ಅವರಿಗೆ ಮುಕ್ತ ಹಸ್ತ ಸಿಗುತ್ತಿಲ್ಲ. ಇದರ ನಡುವೆ ಆರ್‌ಸಿಪಿ ಕೂಡ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ನಿತೀಶ್ ಅನೇಕ ಪ್ರಮುಖ ಸಭೆಗಳಿಂದ ದೂರ ಉಳಿದಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ಕೊರೊನಾ ಕುರಿತು ಪ್ರಧಾನಿ ಕರೆದಿದ್ದ ಸಭೆಯಿಂದ ದೂರ ಉಳಿದಿದ್ದರು. ಇತ್ತೀಚೆಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗೌರವಾರ್ಥ ಔತಣಕೂಟ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಹೋಗಿರಲಿಲ್ಲ. ಬಿಹಾರದ ಬಿಜೆಪಿ ನಾಯಕರನ್ನೂ ಅವರು ಭೇಟಿ ಮಾಡಿಲ್ಲ. ಸಿಎಂ ಸ್ಥಳೀಯ ಮಟ್ಟದ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ, ಆದರೆ ಅವರು ಬಿಜೆಪಿ ನಾಯಕರನ್ನು ಬಹಿರಂಗವಾಗಿ ಮಾತನಾಡುತ್ತಿಲ್ಲ, ಮತ್ತು ಭೇಟಿ ಮಾಡುತ್ತಿಲ್ಲ.

Follow Us:
Download App:
  • android
  • ios