Asianet Suvarna News Asianet Suvarna News

Congress Politics: ಚುನಾವಣೆಯಲ್ಲಿ ಯುವಕರಿಗೆ ಶೇ.50 ಟಿಕೆಟ್‌: ಸಿದ್ದರಾಮಯ್ಯ

*   ಜೆಡಿಎಸ್‌ ಜತೆ ಚುನಾವಣೆ ಸಂಬಂಧವೂ ಇಲ್ಲ ಬೇರೆ ಸಂಬಂಧವೂ ಇಲ್ಲ
*  ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ
*  ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಏನು ಭರವಸೆ ಕೊಟ್ಟಿದ್ದರು? 
 

50 Percent Ticket for Youth in Karnataka Assembly Election 2023 says Siddaramaiah grg
Author
Bengaluru, First Published May 27, 2022, 7:30 AM IST

ಶಿರಸಿ(ಮೇ.27):  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವಕರಿಗೆ ಶೇ.50ರಷ್ಟುಟಿಕೆಟ್‌ ನೀಡುವ ವಿಚಾರ ಚರ್ಚೆಯ ಹಂತದಲ್ಲಿದೆ. ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯಸಭೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಯಾವ ರಾಜಕೀಯ ಸಂಬಂಧವನ್ನೂ ಮಾಡಿಕೊಳ್ಳುವುದಿಲ್ಲ. ಜೆಡಿಎಸ್‌ ಜತೆ ಚುನಾವಣೆ ಸಂಬಂಧವೂ ಇಲ್ಲ ಬೇರೆ ಸಂಬಂಧವೂ ಇಲ್ಲ ಎಂದು ಹೇಳಿದರು.

ಬಿಜೆಪಿ ಧಾರ್ಮಿಕ ವಿಚಾರಗಳನ್ನು ತೆಗೆದು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ಸಂವಿಧಾನದಲ್ಲಿ ಎಲ್ಲ ಧರ್ಮದವರಿಗೂ ಸಮನಾದ ಅವಕಾಶ ಇರುವುದರಿಂದ ಧರ್ಮದ ವಿಚಾರಗಳಿಗೆ ಅಡ್ಡಿಪಡಿಸುವುದು ಕಾನೂನಿಗೆ ವಿರುದ್ಧವಾಗುತ್ತದೆ. ಯಾವುದೇ ಧರ್ಮದವರಾದರೂ ಸಂವಿಧಾನದಂತೆ ನಡೆದುಕೊಳ್ಳಬೇಕೆಂದರು.

Rajya Sabha Election: ಸಿದ್ದು, ಡಿಕೆಶಿ ಭೇಟಿಯಾದ ಜೈರಾಂ: 30ಕ್ಕೆ ನಾಮಪತ್ರ?

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಕಳೆದ ಎರಡು ವರ್ಷಗಳಿಂದ ಯಾರೂ ಕೂಡ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಬಂಡವಾಳ ಇಲ್ಲದೆ ಉದ್ಯೋಗವಿಲ್ಲ, ಉದ್ಯೋಗವಿಲ್ಲದೇ ಜಿಡಿಪಿ ಕೂಡ ಹೆಚ್ಚಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಹಿಜಾಬ್‌, ಹಲಾಲ್‌ ಹಿಂದಿನಿಂದಲೂ ಇದೆ. ಈಗ ಏಕೆ ಬಿಜೆಪಿ ಪ್ರಸ್ತಾಪ ಮಾಡಲು ಹೊರಟಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಮಸೀದಿಯಲ್ಲಿ ಅಜಾನ್‌ ಕೂಗಿದರೆ ತಪ್ಪೇನು? ದೇವಸ್ಥಾನದಲ್ಲಿ ನೀವು ಪ್ರಾರ್ಥನೆ ಮಾಡಿಕೊಳ್ಳಿ. ಸಂವಿಧಾನದಲ್ಲಿ ಅವರಿಗೆ ಹಕ್ಕು ಕೊಡಲಾಗಿದೆ. ಪ್ರಮೋದ್‌ ಮುತಾಲಿಕ್‌ ಅವರನ್ನು ಹಿಡಿದು ಒಳಗೆ ಹಾಕಬೇಕು ?ಮನುಷ್ಯರಾಗಿ ಬದುಕುವವರಿಗೆ ಹುಳಿ ಹಿಂಡಲು ಏಕೆ ಹೋಗುತ್ತೀರಿ ಎಂದು ಪ್ರಶ್ನಿಸಿದರು. ನಾನು ಕರ್ನಾಟಕಕ್ಕೆ ಸೀಮಿತವಾಗಿ ಇರುತ್ತೇನೆ. ದೇಶದ ರಾಜಕೀಯಕ್ಕೆ ಹೋಗುವುದಿಲ್ಲ. ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಏನು ಭರವಸೆ ಕೊಟ್ಟಿದ್ದರು ? ಒಂದೂ ಭರವಸೆಯನ್ನೂ ಈಡೇರಿಸಿಲ್ಲ. ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Dharwad: ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ: ಕಾಂಗ್ರೆಸ್ ವಿರುದ್ದ ಹರಿಹಾಯ್ದ ಪ್ರಹ್ಲಾದ್ ಜೋಶಿ!

ಯಾವ ಪಠ್ಯಪುಸ್ತಕದಲ್ಲಿಯೂ ವಿವಾದಾತ್ಮಕ ವಿಷಯಗಳನ್ನು ಹಾಕಬಾರದು. ಇಂತಹ ವಿಷಯಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವುದರಿಂದ ಸಾಹಿತಿಗಳ ಶಿಕ್ಷಣ ತಜ್ಞರ ಸಲಹೆ ಸೂಚನೆಗಳನ್ನು ಪಡೆದು ಮಕ್ಕಳಿಗೆ ಅತೀ ಅವಶ್ಯವಾಗಿ ಬೇಕಾಗುವ ದೇಶಕ್ಕೆ ತ್ಯಾಗ ಬಲಿದಾನ ಮಾಡಿದವರ, ಸಾಹಿತಿಗಳ, ಸಾಧಕರ, ಚಿಂತಕರು, ಸಮಾಜದಲ್ಲಿ ಅಗ್ರಗಣ್ಯರಾಗಿ ಗುರುತಿಸಿಕೊಂಡವರ ವಿಷಯವನ್ನು ಸೇರ್ಪಡೆ ಮಾಡಬೇಕು ಎಂದರು.

ಮಳೆಗಾಲದ ಪರಿಹಾರ ಬಾರದಿರುವ ಬಗ್ಗೆ ಮಾತನಾಡಿದ ಅವರು, ಕಳೆದೆರಡು ವರ್ಷಗಳ ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಿಂದ ಇದುವರೆಗೂ ಮಳೆಗಾಲದಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ನಷ್ಟಅನುಭವಿಸಿದ ರೈತರಿಗೆ ಪರಿಹಾರ ಬಂದಿಲ್ಲ. ಇದರ ಬಗ್ಗೆ ಅಸೆಂಬ್ಲಿಯಲ್ಲಿ ಹಲವಾರು ಬಾರಿ ಮಾತನಾಡಿದ್ದೇನೆ. ಯಾರೂ ಕೂಡ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ, ಮಧು ಬಂಗಾರಪ್ಪ ಇದ್ದರು.
 

Follow Us:
Download App:
  • android
  • ios