ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಭಾರತೀಯ ಶಟ್ಲರ್‌ಗಳು ಅಧಿಕೃತವಾಗಿ ಹೊರಬಿದ್ದಿದ್ದಾರೆ. ಪಿ.ವಿ ಸಿಂಧು ಗೆದ್ದು ನಿಟ್ಟುಸಿರು ಬಿಟ್ಟರೆ, ಶ್ರೀಕಾಂತ್‌ ಸತತ ಹ್ಯಾಟ್ರಿಕ್ ಸೋಲು ಕಂಡು ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬ್ಯಾಂಕಾಕ್‌(ಜ.30): ಭಾರತದ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಸಿಂಗಲ್ಸ್‌ ಗುಂಪು ಹಂತದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡ್‌ನ ಪೊರ್ನ್‌ಪಾವಿ ಚೊಚುವಾಂಗ್‌ ವಿರುದ್ಧ 21-18, 21-15 ಗೇಮ್‌ಗಳಲ್ಲಿ ಜಯಿಸಿದರು. ಮೊದಲೆರಡು ಪಂದ್ಯಗಳಲ್ಲಿ ಸೋಲುಂಡಿದ್ದ ಕಾರಣ ಸಿಂಧು ಸೆಮೀಸ್‌ಗೇರುವಲ್ಲಿ ವಿಫಲರಾದರು.

ವಿಶ್ವ ಟೂರ್‌ ಫೈನಲ್ಸ್‌: ಸೆಮೀಸ್‌ ರೇಸ್‌ನಿಂದ ಸಿಂಧು, ಶ್ರೀಕಾಂತ್‌ ಔಟ್‌

ಇನ್ನು ಪುರುಷರ ಸಿಂಗಲ್ಸ್‌ ಗುಂಪು ಹಂತದ 3ನೇ ಪಂದ್ಯದಲ್ಲಿ ಶ್ರೀಕಾಂತ್‌, ಹಾಂಕಾಂಗ್‌ನ ಆ್ಯಂಗುಸ್‌ ಕಾ ಲಾಂಗ್‌ ವಿರುದ್ಧ 21-12, 18-21, 19-21 ಗೇಮ್‌ಗಳಲ್ಲಿ ಸೋಲುಂಡರು. ಶ್ರೀಕಾಂತ್‌ಗಿದು ಸತತ 3ನೇ ಸೋಲು. ಮೂರೂ ಪಂದ್ಯಗಳಲ್ಲಿ ಮೊದಲ ಗೇಮ್‌ ಜಯಿಸಿ ಬಳಿಕ ಪಂದ್ಯ ಬಿಟ್ಟುಕೊಟ್ಟರು.

Scroll to load tweet…
Scroll to load tweet…