`ವಂದೇ ಮಾತರಂ ಗೀತೆ ತಾಯಿಗೆ ಸಲ್ಲಿಸುವ ಗೌರವವಾಗಿದೆ. ಅದರೊಂದಿಗೆ ನಿಮಗಿರುವ ಸಮಸ್ಯೆಯಾದರೂ ಏನು? ನಿಮ್ಮ ತಾಯಿಗೆ ಸಲ್ಯೂಟ್ ಮಾಡದಿದ್ದರೆ, ಇನ್ಯಾರಿಗೆ ಗೌರವ ನಮನ ಸಲ್ಲಿಸುತ್ತೀರಿ.ಹೀಗೆಂದು ವಂದೇ ಮಾತರಂ ವಿರೋಧಿಸುವವರನ್ನು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಖಾರವಾಗಿ ಪ್ರಶ್ನಿಸಿದ್ದಾರೆ.

ನವದೆಹಲಿ(ಡಿ.9): `ವಂದೇ ಮಾತರಂ ಗೀತೆ ತಾಯಿಗೆ ಸಲ್ಲಿಸುವ ಗೌರವವಾಗಿದೆ. ಅದರೊಂದಿಗೆ ನಿಮಗಿರುವ ಸಮಸ್ಯೆಯಾದರೂ ಏನು? ನಿಮ್ಮ ತಾಯಿಗೆ ಸಲ್ಯೂಟ್ ಮಾಡದಿದ್ದರೆ, ಇನ್ಯಾರಿಗೆ ಗೌರವ ನಮನ ಸಲ್ಲಿಸುತ್ತೀರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಸತ್ತಿನ ಮೇಲೆ ದಾಳಿಗೈದ ಅಫಜಲ್ ಗುರುವಿಗೆ ಪ್ರಣಾಮ ಸಲ್ಲಿಸುವಿರಾ?,' ಹೀಗೆಂದು ವಂದೇ ಮಾತರಂ ವಿರೋಧಿಸುವವರನ್ನು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಖಾರವಾಗಿ ಪ್ರಶ್ನಿಸಿದ್ದಾರೆ.

ಶುಕ್ರವಾರ ಇಲ್ಲಿ ಹಮ್ಮಿಕೊಳ್ಳಲಾದ ದಿ. ಅಶೋಕ್ ಸಿಂಘಾಲ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, `ಭಾರತ್ ಮಾತಾ ಕೀ ಜೈ ಎಂದರೆ, ಅಖಂಡ ಭಾರತಕ್ಕೆ ಗೌರವ ಸಲ್ಲಿಸಿದಂತೆ,' ಎಂದರು.