Asianet Suvarna News Asianet Suvarna News

ಸರ್ಕಾರಿ ಶಾಲೆಗೆ ತೆರಳಿ ಪಾಠ ಮಾಡಿದ ಯುವರಾಜ

ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟಿದ್ದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ, ಬುದ್ದಿಮಾತು ಹೇಳಿದರು.

Yaduveer teach lesson

ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ ಇವತ್ತು ಸರ್ಕಾರಿ ಶಾಲೆಗೆ ತೆರೆಳಿ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟಿದ್ದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿ, ಬುದ್ದಿಮಾತು ಹೇಳಿದರು. ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಮೈಸೂರಿನ ಕಲಿಸು ಫೌಂಢೇಶನ್​ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯದುವೀರ್​ ಪಾಲ್ಗೊಂಡಿದ್ದರು. ಮಕ್ಕಳೊಂದಿಗೆ ಒಂದು ಗಂಟೆಗೂ ಹೆಚ್ಚುಕಾಲ ಕಳೆದ ಅವರು, ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಪರಿಸರ ಸಂರಕ್ಷಣೆ ದಿನನಿತ್ಯದ ಕೆಲಸ. ಸುತ್ತಮುತ್ತಲಿದ ಪರಿಸರವನ್ನು ಸುಚಿತ್ವದಿಂದ ಇಟ್ಟುಕೊಳ್ಲುವುದು, ಪ್ಲಾಸ್ಟಿಕ್​ನಿಂದ ಆಗುವ ಹಾನಿಯನ್ನು ಮನಗಂಡು, ಪರಿಸರವನ್ನು ಪ್ಲಾಸ್ಟಿಕ್​ ಮುಕ್ತ ಗೊಳಿಸುವ ಬಗ್ಗೆ ಮಕ್ಕಳಿಗೆ ಹೇಳಿಕೊಟ್ಟರು. ಇದರ ಜೊತೆಗೆ ಮಕ್ಕಳಿಗೆ ಗಣಿತ ಪಾಠವನ್ನು ಯದಿವೀರ್​ ಹೇಳಿಕೊಟ್ಟರು.

Follow Us:
Download App:
  • android
  • ios