.  ಬೆದರಿಕೆ ಕರೆ ಹಿನ್ನಲೆಯಲ್ಲಿ  ಸುವರ್ಣ ನ್ಯೂಸ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಲ್ಯಾಂಡ್ ಲೈನ್ ಸಂಖ್ಯೆ ಬೆನ್ನತ್ತಿದ್ದ ಬಸವೇಶ್ವರ ನಗರ ಪೊಲೀಸರು ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರು(ಫೆ.13): ನಗರದಲ್ಲಿ ಕೆಲವು ಕಡೆ ಬಾಂಬ್ ಇಟ್ಟ ಬೆದರಿಕೆ ಕರೆ ಬಂದಿದೆ. ಪ್ರಕಾಶ್ ನಗರದ ಲ್ಯಾಂಡ್'ಲೈನ್'ನಿಂದ ಸುವರ್ಣ ನ್ಯೂಸ್ ಮುಖ್ಯ ಕಚೇರಿಗೆ ಕರೆ ಮಾಡಿದ ಅನಾಮಿಕ ಮಹಿಳೆಯೊಬ್ಬರು 2 ಆಸ್ಪತ್ರೆ, 9 ಶಾಲೆ, 2 ಬಸ್​ಸ್ಟ್ಯಾಂಡ್​'ನಲ್ಲಿ ಬಾಂಬ್​ ಇಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಯಾರಿಟ್ಟಿದ್ದಾರೆ ಎಂಬ ಬಗ್ಗೆ ಆ ಮಹಿಳೆ ತಿಳಿಸಲಿಲ್ಲ. ಬೆದರಿಕೆ ಕರೆ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಲ್ಯಾಂಡ್ ಲೈನ್ ಸಂಖ್ಯೆ ಬೆನ್ನತ್ತಿದ್ದ ಬಸವೇಶ್ವರ ನಗರ ಪೊಲೀಸರು ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred