Asianet Suvarna News Asianet Suvarna News

ಜ್ಯೋತಿಷಿಗಳ ಮಾತಿಗೆ ಮರುಳಾಗಿ ಮೋಸ ಹೋದ ಮಹಿಳೆ

ಸಮಸ್ಯೆ ಹೇಳಿಕೊಂಡು ಜ್ಯೋತಿಷಿಗಳ ಬಳಿ ಹೋದ ಮಹಿಳೆ ಅವರಿಂದಲೇ ವಂಚನೆಗೆ ಒಳಗಾದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ 5 ಲಕ್ಷ ಹಣ ಪಡೆದು ಮೋಸ ಮಾಡಿದ್ದಾರೆ.  

Woman Cheated By Astrologers
Author
Bengaluru, First Published Sep 3, 2018, 1:16 PM IST

ಬೆಂಗಳೂರು :  ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಜ್ಯೋತಿಷಿ ಸಹೋದರರಿಬ್ಬರು ಮಹಿಳೆಯೋರ್ವರಿಗೆ ವಂಚನೆ ಮಾಡಿದ ಪ್ರಕರಣವೊಂದು ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.  

ಗಣೇಶ್ ಮತ್ತು ರಾಜನ್ ಎಂಬ ಇಬ್ಬರು ಜ್ಯೋತಿಷಿಗಳು ಮಹಿಳೆಗೆ 5 ಲಕ್ಷ ರು ವಂಚಿಸಿದ್ದಾರೆ.  ಶಾಸ್ತ್ರ ಕೇಳಲು ಹೋದಾಗ ಸರ್ಕಾರಿ  ನೌಕರಿ ಕೊಡುಸುತ್ತೇನೆ ಎಂದು ನಂಬಿಸಿ 5 ‌ಲಕ್ಷ ಪಡೆದಿದ್ದರು. ತಮಗೆ ಸಚಿವರು ಗೊತ್ತಿದ್ದು 5 ಲಕ್ಷ ಹಣ ನೀಡಿದರೆ ಟೈಪಿಂಗ್ ಕೆಲಸ ಕೊಡಿಸುವುದಾಗಿ ಹೇಳಿದ್ದರು. 

ಅದನ್ನು ನಂಬಿ ಜ್ಯೋತಿಷಿಗಳಿಗೆ ಮಹಿಳೆ ಹಣ ನೀಡಿದ್ದರು. ಆದರೆ ಇದೀಗ ಹಣವೂ ಇಲ್ಲ. ಕೆಲಸವೂ ಇಲ್ಲದಂತಾಗಿದೆ. ಈ ಬಗ್ಗೆ ಅವರ ಮನೆಗೆ ಹೋಗಿ ವಾಪಸ್ ಕೇಳಿದಾಗ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು  ಈ ಸಂಬಂಧ ಮಹಿಳೆ ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Follow Us:
Download App:
  • android
  • ios