ಜ್ಯೋತಿಷಿಗಳ ಮಾತಿಗೆ ಮರುಳಾಗಿ ಮೋಸ ಹೋದ ಮಹಿಳೆ
ಸಮಸ್ಯೆ ಹೇಳಿಕೊಂಡು ಜ್ಯೋತಿಷಿಗಳ ಬಳಿ ಹೋದ ಮಹಿಳೆ ಅವರಿಂದಲೇ ವಂಚನೆಗೆ ಒಳಗಾದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ 5 ಲಕ್ಷ ಹಣ ಪಡೆದು ಮೋಸ ಮಾಡಿದ್ದಾರೆ.
ಬೆಂಗಳೂರು : ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಜ್ಯೋತಿಷಿ ಸಹೋದರರಿಬ್ಬರು ಮಹಿಳೆಯೋರ್ವರಿಗೆ ವಂಚನೆ ಮಾಡಿದ ಪ್ರಕರಣವೊಂದು ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಗಣೇಶ್ ಮತ್ತು ರಾಜನ್ ಎಂಬ ಇಬ್ಬರು ಜ್ಯೋತಿಷಿಗಳು ಮಹಿಳೆಗೆ 5 ಲಕ್ಷ ರು ವಂಚಿಸಿದ್ದಾರೆ. ಶಾಸ್ತ್ರ ಕೇಳಲು ಹೋದಾಗ ಸರ್ಕಾರಿ ನೌಕರಿ ಕೊಡುಸುತ್ತೇನೆ ಎಂದು ನಂಬಿಸಿ 5 ಲಕ್ಷ ಪಡೆದಿದ್ದರು. ತಮಗೆ ಸಚಿವರು ಗೊತ್ತಿದ್ದು 5 ಲಕ್ಷ ಹಣ ನೀಡಿದರೆ ಟೈಪಿಂಗ್ ಕೆಲಸ ಕೊಡಿಸುವುದಾಗಿ ಹೇಳಿದ್ದರು.
ಅದನ್ನು ನಂಬಿ ಜ್ಯೋತಿಷಿಗಳಿಗೆ ಮಹಿಳೆ ಹಣ ನೀಡಿದ್ದರು. ಆದರೆ ಇದೀಗ ಹಣವೂ ಇಲ್ಲ. ಕೆಲಸವೂ ಇಲ್ಲದಂತಾಗಿದೆ. ಈ ಬಗ್ಗೆ ಅವರ ಮನೆಗೆ ಹೋಗಿ ವಾಪಸ್ ಕೇಳಿದಾಗ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು ಈ ಸಂಬಂಧ ಮಹಿಳೆ ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.