Asianet Suvarna News Asianet Suvarna News

ಸಿದ್ದರಾಮಯ್ಯಗೆ ಒಲಿಯುತ್ತಾ ಮತ್ತೊಂದು ಹುದ್ದೆ..?

ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟ ಪರಿಸ್ಥಿತಿಗೆ ಜಾರಿದೆ. ಹೀಗಾಗಿ ಪಕ್ಷವನ್ನು ಲೋಕಸಭಾ ಚುನಾವಣೆಗೆ ಸಮರ್ಥವಾಗಿ ಸಂಘಟಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಮಾಜಿ ಸಚಿವ ಎ. ಮಂಜು ಒತ್ತಾಯಪಡಿಸಿದ್ದಾರೆ.
 

Will it be Dinesh Gundurao or Siddaramaiah for KPCC chief

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟ ಪರಿಸ್ಥಿತಿಗೆ ಜಾರಿದೆ. ಹೀಗಾಗಿ ಪಕ್ಷವನ್ನು ಲೋಕಸಭಾ ಚುನಾವಣೆಗೆ ಸಮರ್ಥವಾಗಿ ಸಂಘಟಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಮಾಜಿ ಸಚಿವ ಎ. ಮಂಜು ಒತ್ತಾಯಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷ ಜನಪರ ಕಾರ್ಯ ಕ್ರಮಗಳನ್ನು ನೀಡಿದ್ದರು. ಅತ್ಯುತ್ತಮ ಆಡಳಿತ ನೀಡಿದರೂ ಕಾರ್ಯ ಕ್ರಮಗಳ ಬಗ್ಗೆ ಜನತೆಗೆ ತಿಳಿಸಲು ವಿಫಲ ವಾದ ಕಾರಣ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. 

ಕಾಂಗ್ರೆಸ್ ಶೇ.38 ಮತ ಪಡೆದರೂ 80 ಸ್ಥಾನ ಮಾತ್ರ ಪಡೆಯಿತು.ಇಂತಹ ಕಠಿಣ ಸ್ಥಿತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಅಂತಹ ಜಾತ್ಯತೀತ ನಾಯಕನ ನೇತೃತ್ವ ಬೇಕು ಎಂದರು. ಸಿದ್ದರಾಮಯ್ಯ ಅಲ್ಲದೆ, ಬಿ.ಕೆ. ಹರಿಪ್ರಸಾದ್, ಡಿ.ಕೆ. ಶಿವಕುಮಾರ್, ಕೆ.ಎಚ್. ಮುನಿಯಪ್ಪ , ದಿನೇಶ್ ಗುಂಡೂರಾವ್ ಕೂಡ ಸಮರ್ಥರಿದ್ದಾರೆ. ಇವರಲ್ಲಿ ಯಾರಿಗಾದರೂ ನೀಡಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios