ಇವಿಎಂಗಳಲಲ್ಲಿ ವಂಚನೆ ನಡೆದಿರುವುದು ಉತ್ತರ ಪ್ರದೇಶದ ಜನತೆಗೆ ಗೊತ್ತಾಗಿದೆ.  ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ, ಮುಂದಿನ 2-3 ದಿನಘಲಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.

ನವದೆಹಲಿ (ಮಾ.20): ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ)ನಲ್ಲಾಗುತ್ತಿರುವ ವಂಚನೆ ವಿರುದ್ಧ ಮುಂದಿನ ಎರಡು ಮೂರು ದಿನಗಳಲ್ಲಿ ನ್ಯಾಯಾಲಯದ ಮೊರೆಹೋಗುವುದಾಗಿ ಬಿಎಸ್ಪಿ ವರಿಷ್ಠೆ ಮಾಯಾವತಿ ಪುನರುಚ್ಚರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವಿಎಂಗಳಲಲ್ಲಿ ವಂಚನೆ ನಡೆದಿರುವುದು ಉತ್ತರ ಪ್ರದೇಶದ ಜನತೆಗೆ ಗೊತ್ತಾಗಿದೆ.ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ, ಮುಂದಿನ 2-3 ದಿನಘಲಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.

ಬಿಎಸ್ಪಿ ನಾಯಕನ ಹತ್ಯೆ:

ಭಾನುವಾರ ರಾತ್ರಿ ಬಿಎಸ್ಪಿ ನಾಯಕ ಮೊಹಮ್ಮದ್ ಶಮಿ ಅವರನ್ನುಅಲಹಾಬಾದ್’ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಯಾವತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಲಿ ಅಥವಾ ಅಭಿವೃದ್ಧಿಯನ್ನು ಸಾಧಿಸುವುದಾಗಲಿ ಹೊಸ ಸರ್ಕಾರದಿಂದ ಸಾಧ್ಯವಿಲ್ಲ; ಅದು ಆರೆಸ್ಸೆಸ್ ಏಜೆಂಡಾವನ್ನು ಜಾರಿಗೊಳಸಬಹುದಷ್ಟೇ ಎಂದು ಹೇಳಿದ್ದಾರೆ.