ಉತ್ತರ ಪ್ರದೇಶ: ದಾಳಿಯಿಂದ ಪತ್ರಕರ್ತನನ್ನು ರಕ್ಷಿಸಿದ ಪತ್ನಿ
ಲಖನೌನಲ್ಲಿ ಪತ್ರಕರ್ತನ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿರುವ ಮತ್ತೊಂದು ಪ್ರಕರಣ ವರದಿಯಾಗಿದೆ.
ಲಖನೌ: ಲಖನೌನಲ್ಲಿ ಪತ್ರಕರ್ತನ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿರುವ ಮತ್ತೊಂದು ಪ್ರಕರಣ ವರದಿಯಾಗಿದ್ದು, ಸಮಯ ಪ್ರಜ್ಞೆಯಿಂದ ಪತ್ನಿ ಮರು ದಾಳಿ ನಡೆಸಿ, ಪತಿಯನ್ನು ರಕ್ಷಿಸಿಕೊಂಡಿದ್ದಾರೆ.
ಕಕೋರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಈ ವೇಳೆ ಪತ್ರಕರ್ತನ ಪತ್ನಿ ಗುಂಡು ಹಾರಿಸಿದ್ದು, ಸರಿಯಾದ ಸಮಯಕ್ಕೆ ಬಂದು, ದುಷ್ಕರ್ಮಿಗಳ ದಾಳಿಯಿಂದ ಪತಿಯನ್ನು ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
#WATCH Man attacked by unknown assailants is saved by gun toting wife in Lucknow district's Kakori. Police begin investigation (4.2.18) pic.twitter.com/7bfp9600WN
— ANI UP (@ANINewsUP) February 5, 2018
ಗುಂಡಿನ ಸದ್ದಿಗೆ ಬೆದರಿದ ದುಷ್ಕರ್ಮಿಗಳು ಸ್ಥಳಗಳಿಂದ ಕಾಲ್ಕಿತ್ತಿದ್ದಾರೆ. ದಾಳಿಯ ಈ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.