ಕಾಫಿ ಅಂಗಡಿಯಲ್ಲಿ ಕಾಫಿ ಮಿಷನ್ ಗೆ ಸಿಕ್ಕಿ  ಹಾಕಿಕೊಂಡಿದ್ದ ಗೊಬೆಯನ್ನು ಸ್ಥಳೀಯ ಉರಗ ತಜ್ಞ ನರೇಶ ಅವರು ರಕ್ಷಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಅಪರೂಪದ ಬಿಳಿ ಗೂಬೆ ಪತ್ತೆಯಾಗಿದೆ. ನಗರದ ಎಂ.ಜೆ. ರಸ್ತೆಯಲ್ಲಿರುವ ಪಾಡುರಂಗ ಕಾಫಿ ಅಂಗಡಿಯಲ್ಲಿ ಕಾಫಿ ಮಿಷನ್ ಗೆ ಸಿಕ್ಕಿ ಹಾಕಿಕೊಂಡಿದ್ದ ಗೊಬೆಯನ್ನು ಸ್ಥಳೀಯ ಉರಗ ತಜ್ಞ ನರೇಶ ಅವರು ರಕ್ಷಿಸಿದ್ದಾರೆ. ಅಂಗಡಿಗೆ ಬಿಳಿ ಗೂಬೆ ನೋಡಲು ಜನ ಜಮಾಯಿಸಿದ್ದಾರೆ. ಬಿಳಿ ಗೂಬೆ ರಾತ್ರಿ ಬಂದಿರಬೇಕು ಎಂದು ಹೇಳಲಾಗುತ್ತಿದೆ. ಅವನತಿ ಅಂಚಿನಲ್ಲಿರುವ ಬಿಳಿ ಗೂಬೆ ಸಿಗುವುದೆ ಅಪರೂಪವಾಗಿದೆ.

Add Asianetnews Kannada as a Preferred SourcegooglePreferred