Asianet Suvarna News Asianet Suvarna News

ರಾಜ್ಯ ಸರ್ಕಾರಕ್ಕೆ ಅಂಟಿತೇ ಲೋಕಾ ಕಳಂಕ..?

ಲೋಕಾಯುಕ್ತವನ್ನು ರಾಜ್ಯ ಸರ್ಕಾರ ಹಲ್ಲಿಲ್ಲದ ಹಾವು ಮಾಡಿದೆ -  ಶೇ. 21

ಭ್ರಷ್ಟಾಚಾರ ಮುಚ್ಚಿಕೊಳ್ಳಲು ದುರ್ಬಲ ಮಾಡಿದ್ದರೂ ಮಾಡಿರಬಹುದು – ಶೇ.14

ಖಂಡಿತಾ ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಈ ಕೆಲಸ ಮಾಡಿಲ್ಲ – ಶೇ. 18

ಸ್ವಾರ್ಥಕ್ಕಾಗಿ ಲೋಕಾಯುಕ್ತವನ್ನು ಸರ್ಕಾರ ದುರ್ಬಲ ಮಾಡಿದೆಯೋ ಇಲ್ಲವೋ ಗೊತ್ತಿಲ್ಲ – ಶೇ. 19

Whether State Govt may Effect Lokayuktha issue

ಬೆಂಗಳೂರು(ಡಿ.7): ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೇಶಾದ್ಯಂತ ಗಮನಸೆಳೆದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿತು. ಇದು ಲೋಕಾಯುಕ್ತದ ಶಕ್ತಿ ಕುಂದಿಸುವ ಯತ್ನ ಎಂಬ ಟೀಕೆ, ಆಕ್ರೋಶ ಆ ವೇಳೆ ವ್ಯಕ್ತವಾಗಿತ್ತು.

Whether State Govt may Effect Lokayuktha issue

ಜನಸಾಮಾನ್ಯರಲ್ಲಿ ಈಗಲೂ ಅದೇ ಭಾವನೆ ಇದೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದುಬಂದಿದೆ. ಲೋಕಾ ಯುಕ್ತವನ್ನು ಸರ್ಕಾರ ದುರ್ಬಲಗೊಳಿಸಿದೆ,ದುರ್ಬಲ ಮಾಡಿರಬಹುದು ಎಂದು ಹೇಳಿದವರ ಸಂಖ್ಯೆ ಶೇ.50ಕ್ಕಿಂತ ಹೆಚ್ಚಿರುವುದು ಗಮನಾರ್ಹ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಭಾವನೆ ಹೆಚ್ಚಾಗಿದೆ. ವಿವಿಧ ಜಾತಿಗಳ ಪೈಕಿ ಲಿಂಗಾಯತರು, ವಿವಿಧ ಪ್ರಾಂತ್ಯಗಳ ಪೈಕಿ ಲಿಂಗಾಯತ ಬಾಹುಳ್ಯದ ಮುಂಬೈ ಕರ್ನಾಟಕದಲ್ಲಿ ಸರ್ಕಾರ ಲೋಕಾಯುಕ್ತವನ್ನು ದುರ್ಬಲ ಮಾಡಿರಬಹುದು ಎಂಬ ಅಭಿಪ್ರಾಯ ಗಟ್ಟಿಯಾಗಿ ಕೇಳಿಬಂದಿದೆ.

Follow Us:
Download App:
  • android
  • ios