Asianet Suvarna News Asianet Suvarna News

ರೈತರಿಗೆ ಹೊಸ ವರ್ಷದ ಭರ್ಜರಿ ಗಿಫ್ಟ್

ಹೊಸ ವರ್ಷದ ಈ ಸಂದರ್ಭದಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೊಸದಾದ ಎರಡು ಯೋಜನೆಗಳನ್ನು ರೈತರಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. 

West Bengal CM Mamata Banerjee New Year Gift to Farmers
Author
Bengaluru, First Published Jan 1, 2019, 12:56 PM IST

ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ರೈತರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ರಾಜ್ಯದಲ್ಲಿ 18 - 60 ರ ವಯೋಮಾನದ ಯಾವುದೇ ರೈತ ಸಾವಿಗೀಡಾದರೆ ಆತನ ಕುಟುಂಬಕ್ಕೆ ಕೃಷಿ ಕಿಸಾನ್ ಬಂಧು ಯೋಜನೆಯ ಅಡಿಯಲ್ಲಿ ಸರ್ಕಾರ 8 ಲಕ್ಷ ರು. ನೀಡಲಿದೆ. 

ಅಲ್ಲದೇ ಒಂದು ಎಕರೆಯಲ್ಲಿ ಒಂದು ಬೆಳೆ ಬೆಳೆಯಲು ವರ್ಷಕ್ಕೆ ಎರಡು ಬಾರಿ 2,500 ರು. ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಕಟಿಸಿದ್ದಾರೆ.

ಹೊಸ ವರ್ಷದ  ಮೊದಲ ದಿನದಿಂದಲೇ ಈ ಯೋಜನೆ ಆರಂಭವಾಗಲಿದೆ ಎಂದು ಮಮತಾ ಪ್ರಕಟಿಸಿದ್ದಾರೆ.

Follow Us:
Download App:
  • android
  • ios