ರೈತರಿಗೆ ಹೊಸ ವರ್ಷದ ಭರ್ಜರಿ ಗಿಫ್ಟ್
ಹೊಸ ವರ್ಷದ ಈ ಸಂದರ್ಭದಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೊಸದಾದ ಎರಡು ಯೋಜನೆಗಳನ್ನು ರೈತರಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ರೈತರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ರಾಜ್ಯದಲ್ಲಿ 18 - 60 ರ ವಯೋಮಾನದ ಯಾವುದೇ ರೈತ ಸಾವಿಗೀಡಾದರೆ ಆತನ ಕುಟುಂಬಕ್ಕೆ ಕೃಷಿ ಕಿಸಾನ್ ಬಂಧು ಯೋಜನೆಯ ಅಡಿಯಲ್ಲಿ ಸರ್ಕಾರ 8 ಲಕ್ಷ ರು. ನೀಡಲಿದೆ.
ಅಲ್ಲದೇ ಒಂದು ಎಕರೆಯಲ್ಲಿ ಒಂದು ಬೆಳೆ ಬೆಳೆಯಲು ವರ್ಷಕ್ಕೆ ಎರಡು ಬಾರಿ 2,500 ರು. ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಕಟಿಸಿದ್ದಾರೆ.
ಹೊಸ ವರ್ಷದ ಮೊದಲ ದಿನದಿಂದಲೇ ಈ ಯೋಜನೆ ಆರಂಭವಾಗಲಿದೆ ಎಂದು ಮಮತಾ ಪ್ರಕಟಿಸಿದ್ದಾರೆ.