ಹೊಸ ವರ್ಷದ ಈ ಸಂದರ್ಭದಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೊಸದಾದ ಎರಡು ಯೋಜನೆಗಳನ್ನು ರೈತರಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. 

ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ರೈತರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ರಾಜ್ಯದಲ್ಲಿ 18 - 60 ರ ವಯೋಮಾನದ ಯಾವುದೇ ರೈತ ಸಾವಿಗೀಡಾದರೆ ಆತನ ಕುಟುಂಬಕ್ಕೆ ಕೃಷಿ ಕಿಸಾನ್ ಬಂಧು ಯೋಜನೆಯ ಅಡಿಯಲ್ಲಿ ಸರ್ಕಾರ 8 ಲಕ್ಷ ರು. ನೀಡಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಒಂದು ಎಕರೆಯಲ್ಲಿ ಒಂದು ಬೆಳೆ ಬೆಳೆಯಲು ವರ್ಷಕ್ಕೆ ಎರಡು ಬಾರಿ 2,500 ರು. ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಕಟಿಸಿದ್ದಾರೆ.

ಹೊಸ ವರ್ಷದ ಮೊದಲ ದಿನದಿಂದಲೇ ಈ ಯೋಜನೆ ಆರಂಭವಾಗಲಿದೆ ಎಂದು ಮಮತಾ ಪ್ರಕಟಿಸಿದ್ದಾರೆ.