ಕಳೆದ 22 ವರ್ಷಗಳಿಂದ ಪ್ರತಿವಾರ ಓದುಗರ ಕೈ ಸೇರುತ್ತಿದ್ದ ಹಾಯ್ ಬೆಂಗಳೂರು ಇನ್ನು ಕೆಲವು ದಿನಗಳಲ್ಲಿ ನೆನಪಾಗಿ ಮಾತ್ರ ಉಳಿಯಲಿದೆ.

ಬೆಂಗಳೂರು(ಸೆ.27): ವಿಶಿಷ್ಟ ಬರವಣಿಗೆಯ ಮೂಲಕ ತಮ್ಮದೆ ಓದುಗ ಅಭಿಮಾನಿಗಳನ್ನು ಹೊಂದಿದ ಪತ್ರಕರ್ತ ರವಿಬೆಳಗೆರೆ ತಮ್ಮ ವಾರಪತ್ರಿಕೆ ಹಾಯ್ ಬೆಂಗಳೂರನ್ನು ಮುಚ್ಚುವ ನಿರ್ಧಾರ ಕೈಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಕಳೆದ 22 ವರ್ಷಗಳಿಂದ ಪ್ರತಿವಾರ ಓದುಗರ ಕೈ ಸೇರುತ್ತಿದ್ದ ಹಾಯ್ ಬೆಂಗಳೂರು ಇನ್ನು ಕೆಲವು ದಿನಗಳಲ್ಲಿ ನೆನಪಾಗಿ ಮಾತ್ರ ಉಳಿಯಲಿದೆ. 'ಒನ್ ಇಂಡಿಯಾ' ವೆಬ್'ಸೈಟ್'ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ತಿಳಿಸಿದ್ದಾರೆ.

ಪತ್ರಿಕೆ ಮುಚ್ಚುವುದಕ್ಕೆ ವಯಸ್ಸು, ಕುಟುಂಬಸ್ಥರೊಂದಿಗೆ ಕಾಲ ಕಳೆಯುವಿಕೆ ಹಾಗೂ ಮನಮುಟ್ಟುವ ಬರವಣೆಗೆಯ ಕಾರಣಗಳನ್ನು ನೀಡಿದ್ದು, 'ಓ ಮನಸೆ' ಮೂಲಕ ತಮ್ಮ ಬರವಣಿಗೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.