’ಹುತಾತ್ಮ ಯೋಧರ’ ಓವೈಸಿ ಹೇಳಿಕೆಗೆ ಸೇನೆ ತಿರುಗೇಟು
ಸುಂಜ್ವಾನ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ 5 ಮುಸ್ಲಿಮರು ಎಂದು ಓವೖಸಿ ಹೇಳಿಕೆಗೆ ಸೇನೆ ತಿರುಗೇಟು ಕೊಟ್ಟಿದ್ದು ನಾವು ಹುತಾತ್ಮರನ್ನು ಕೋಮುವಾದಿಕರಣಗೊಳಿಸುವುದಿಲ್ಲ ಎಂದಿದೆ.
ನವದೆಹಲಿ (ಫೆ.14): ಸುಂಜ್ವಾನ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ 5 ಮುಸ್ಲಿಮರು ಎಂದು ಓವೖಸಿ ಹೇಳಿಕೆಗೆ ಸೇನೆ ತಿರುಗೇಟು ಕೊಟ್ಟಿದ್ದು ನಾವು ಹುತಾತ್ಮರನ್ನು ಕೋಮುವಾದಿಕರಣಗೊಳಿಸುವುದಿಲ್ಲ ಎಂದಿದೆ.
ಹುತಾತ್ಮ ಯೋಧರನ್ನು ನಾವು ಕೋಮುವಾದಿಕರಣಗೊಳಿಸುವುದಿಲ್ಲ. ಈ ರೀತಿ ಅಸಂಬದ್ಧ ಹೇಳಿಕೆ ನೀಡುವವರಿಗೆ ಸೇನೆಯ ಬಗ್ಗೆ ಸರಿಯಾಗಿ ಗೊತ್ತಿಲ್ಲವೆಂದು ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಹೇಳಿದ್ದಾರೆ.
ಓವೈಸಿ ಹೇಳಿದ್ದೇನು?
ಜ್ವಾನ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ 5 ಮುಸ್ಲಿಮರು. ಅವರ ತ್ಯಾಗವನ್ನು ನೋಡಿ ಈಗ ಎಲ್ಲರೂ ಮೌನ ವಹಿಸಿದ್ದಾರೆ. ಯಾಕಿಂತ ಮೌನ ಎಂದು ಓವೈಸಿ ಪ್ರಶ್ನಿಸಿದ್ದರು.