ತರಹೆವಾರಿ ತರಕಾರಿ ಗಿಡಗಳು, ಮನೆ, ಕಾವಲಿಗೊಂದು ನಾಯಿ. ಇದೆಲ್ಲಾ ಇರುವುದು ಸಾರ್ವಜನಿಕರ ಉಪಯೋಗಕ್ಕೆ ಅಂತಾ ಇರುವ ತುಮಕೂರಿನ ಜಯನಗರ ದಕ್ಷಿಣ ಬಡಾವಣೆಯ ಪಾರ್ಕ್​. ಇದೇ ಪಾರ್ಕ್​ನೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ವಾಟರ್​ ಮ್ಯಾನ್​ ಹನುಮಂತಪ್ಪ ಎಂಬಾತ ಮನೆ ಕಟ್ಟಿಕೊಂಡು ಸಂಸಾರ ಹೂಡಿ ದರ್ಬಾರ್​ ಮಾಡುತ್ತಿದ್ದಾನೆ. ಸುಮಾರು ಮುಕ್ಕಾಲು ಎಕರೆ ಪ್ರದೇಶದ ಈ ಪಾರ್ಕ್​ ಜಾಗ  ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತೆ.  ರಿಯಲ್ ಎಸ್ಟೆಟ್​ ಕುಳಗಳ ಸಂಪರ್ಕದಲ್ಲಿರುವ ಹನುಂತರಾಯಪ್ಪ ಈ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದು.

ತುಮಕೂರು(ಅ.16): ಇದು ಹೆಸರಿಗೆ ಮಾತ್ರ ಸಾರ್ವಜನಿಕ ಪಾರ್ಕ್​. ಆದರೆ ಆ ಪಾರ್ಕ್​ನಲ್ಲಿರುವುದು ಮಾತ್ರ ವಾಸದ ಮನೆ, ಮತ್ತು ಆತನ ಸಂಸಾರ. ಇದು ಸಾರ್ವಜನಿಕರ ಉದ್ಯಾನವನವನ್ನೇ ಮನೆಯನ್ನಾಗಿಸಿಕೊಂಡ ವಾಟರ್ ಮ್ಯಾನ್ ದರ್ಬಾರ್​ ಸ್ಟೋರಿ.

ತರಹೆವಾರಿ ತರಕಾರಿ ಗಿಡಗಳು, ಮನೆ, ಕಾವಲಿಗೊಂದು ನಾಯಿ. ಇದೆಲ್ಲಾ ಇರುವುದು ಸಾರ್ವಜನಿಕರ ಉಪಯೋಗಕ್ಕೆ ಅಂತಾ ಇರುವ ತುಮಕೂರಿನ ಜಯನಗರ ದಕ್ಷಿಣ ಬಡಾವಣೆಯ ಪಾರ್ಕ್​. ಇದೇ ಪಾರ್ಕ್​ನೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ವಾಟರ್​ ಮ್ಯಾನ್​ ಹನುಮಂತಪ್ಪ ಎಂಬಾತ ಮನೆ ಕಟ್ಟಿಕೊಂಡು ಸಂಸಾರ ಹೂಡಿ ದರ್ಬಾರ್​ ಮಾಡುತ್ತಿದ್ದಾನೆ.

ಸುಮಾರು ಮುಕ್ಕಾಲು ಎಕರೆ ಪ್ರದೇಶದ ಈ ಪಾರ್ಕ್​ ಜಾಗ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತೆ. ರಿಯಲ್ ಎಸ್ಟೆಟ್​ ಕುಳಗಳ ಸಂಪರ್ಕದಲ್ಲಿರುವ ಹನುಂತರಾಯಪ್ಪ ಈ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದು.

ಕಳೆದ 20 ವರ್ಷದಿಂದ ಇದೇ ಬಡಾವಣೆಯಲ್ಲಿ ವಾಟರ್ ಮ್ಯಾನ್ ಆಗಿರುವ ಹನುಮಂತರಾಯಪ್ಪ ಪಾರ್ಕ್​ನಲ್ಲೇ ಸಂಸಾರ ಹೂಡಿದರೂ ಈ ವಾರ್ಡನ್ ಸದ್ಯರಾಗಲಿ. ಪಾಲಿಕೆ ಆಯುಕ್ತರಾಗಲಿ ಕ್ರಮಕ್ಕೆ ಮುಂದಾಗಿಲ್ಲ. ಇನ್ನು ಸಾರ್ವಜನಿಕರಿಂದ ದೂರುಗಳು ಹೋದ್ರೂ ಅಧಿಕಾರಿಗಳು ದಿವ್ಯಮೌನ ವಹಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಪಾರ್ಕ್​ನ್ನ ಸಾರ್ವಜನಿಕರ ಅನುಕೂಲಕ್ಕೆ ಸಿಗುವಂತೆ ಮಾಡಲಿ.