ಅಶ್ಲೀಲ ಸಂಗೀತ ನಿಷೇಧಿಸಿದ ಸರ್ಕಾರ, CD ಲೇಡಿ ವಿಡಿಯೋಗೆ ಡಿಕೆಶಿ ಉತ್ತರ; ಮಾ.27ರ ಟಾಪ್ 10 ಸುದ್ದಿ!
ಸಾರ್ವಜನಿಕ ಸಾರಿಗೆಯಲ್ಲಿ ಅಶ್ಲೀ ಸಂಗೀತವನ್ನು ಸರ್ಕಾರ ನಿಷೇಧಿಸಿದೆ. ಇನ್ನು ಸಿಡಿ ಲೇಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಈ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಕೆಜಿಎಫ್ 2’ ಚಿತ್ರದಲ್ಲಿ ಪ್ರಕಾಶ್ ರೈ ಪಾತ್ರ, ಕೊರೋನಾ 2ನೇ ಅಲೆ ಸೇರಿದಂತೆ ಮಾರ್ಚ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೊರೋನಾ 2ನೇ ಅಲೆ ಮೊದಲ ಅಲೆಗಿಂತ ಭಯಾನಕ; 10 ದಿನದ ಪ್ರಕರಣವೇ ಸಾಕ್ಷಿ!...
ಭಾರತದಲ್ಲಿ ಕೊರೋನಾ ವೈರಸ್ 2ನೇ ಅಲೆ ಆರಂಭವಾಗಿದೆ ಅನ್ನೋ ಮಾತುಗಳು ಬಲಗೊಳ್ಳುತ್ತಿದೆ. ಕಾರಣ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ನಡುವೆ ತಜ್ಞರು ಮತ್ತೊಂದು ಅಂಕಿ ಅಂಶ ತೆರೆದಿಟ್ಟಿದ್ದಾರೆ. ಇದರ ಪ್ರಕಾರ ಭಾರತದಲ್ಲಿ ಮೊದಲ ಕೊರೋನಾ ಅಲೆಗಿಂತ 2ನೇ ಅಲೆ ಭಯಾನಕವಾಗಿದೆ.
ವಕೀಲರ ಮಹತ್ವದ ಮಾಹಿತಿ: ಎಸ್ಐಟಿ ಮುಂದೆ ಹಾಜರಾಗ್ತಾರಾ ಸಿ.ಡಿ. ಲೇಡಿ?...
ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಡಿ.ಲೇಡಿ ಪರ ವಕೀಲರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಹತ್ದ ಮನವಿಯೊಂದು ಮಾಡಿಕೊಂಡಿದ್ದಾರೆ. ಹಾಗಾದ್ರೆ ಯುವತಿ ಎಸ್ಐಟಿ ಮುಂದೆ ಹಾಜರಾಗುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ಗೆ ಕೋವಿಡ್ ಪಾಸಿಟಿವ್..!...
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕೆಜಿಫ್-2ನಲ್ಲಿ ಪ್ರಕಾಶ್ ರೈ ಪಾತ್ರಕ್ಕೆ ಅನಂತ್ನಾಗ್ ಪಾತ್ರವೇ ಏನಿದೆ ವ್ಯತ್ಯಾಸ..? ನೀಲ್ ಹೇಳಿದ್ದಿಷ್ಟು...
ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನ ‘ಕೆಜಿಎಫ್ 2’ ಚಿತ್ರದಲ್ಲಿ ಪ್ರಕಾಶ್ ರೈ ಪಾತ್ರ ಏನಾಗಿರಬಹುದು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಸಿಡಿ ಲೇಡಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ: ಸಚಿವೆ ಜೊಲ್ಲೆ...
ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಬಿಡುಗಡೆ ಮಾಡಿರುವ ವಿಡಿಯೋ ನಾನು ನೋಡಿಲ್ಲ. ಆದರೆ ಹಿಂದೆಯೂ ರಕ್ಷಣೆ ಕೇಳಿದ್ದಕ್ಕೆ ಸದನದಲ್ಲಿ ಸಿಎಂ ಬಿ..ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ನಾನು ಸಹ ಅವರ ಪರವಾಗಿದ್ದೇವೆ ಅಂತ ಹೇಳಿದ್ದೆವು. ಸಿಎಂ ಸಹ ಅಷ್ಟೇ ಸೀರಿಯಸ್ ಆಗಿ ನೋಡ್ತಿದ್ದಾರೆ.
ಬಯಲಾಯ್ತು ಅಮೆಜಾನ್ ಬಾಯ್ಸ್ ಜೀವನದ ಕಹಿ ಸತ್ಯ: ಬಾಟಲಿಯಲ್ಲೇ ಶೌಚ!...
ವಿಶ್ವಾದ್ಯಂತ ಅಮೆಜಾನ್ ಒಂದು ಬೃಹತ್ ಹಾಗೂ ನಂಬಿಕಾರ್ಹ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ. ಇಲ್ಲಿ ಕಾರ್ಯ ನಿರ್ವಹಿಸುವುದೆಂದರೆ ಕನಸಿನ ಲೋಕಕ್ಕೆ ಎಂಟ್ರಿ ಕೊಟ್ಟಂತೆ. ಆದರೆ ಇತ್ತೀಚೆಗೆ ವೈರಕ್ ಆದ ಸುದ್ದಿಯೊಂದನ್ನು ನೋಡಿದರೆ ಇಲ್ಲಿನ ಉದ್ಯೋಗಿಗಳು ಅದೆಷ್ಟು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆಂಬುವುದು ಸಾಬೀತಾಗುತ್ತದೆ.
ರಮೇಶ್ಗೆ ಕಾನ್ಫಿಡೆನ್ಸ್ ಬಂದಿದ್ದು ಹೇಗೆ? ಪ್ರೇಸ್ ಮೀಟ್ನಲ್ಲಿ ಸ್ಫೋಟವಾಗುವ ದಾಖಲೆ!...
ಸಿಡಿ ಸ್ಫೋಟ ಪ್ರಕರಣದಲ್ಲಿ ನಾನು ಜಾಮೀನು ತೆಗೆದುಕೊಳ್ಳಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿಗೆ ಅಷ್ಟೊಂದು ಕಾನ್ಫಿಡೆನ್ಸ್ ಬಂದಿದ್ದಾದ್ರು ಹೇಗೆ? ಅಷ್ಟಕ್ಕೂ ಸಾಹುಕಾರ್ ಪ್ರಯೋಗಿಸಲಿರುವ ಅಸ್ತ್ರಯಾವುದು? ಸಾಹಕಾರ್ ಬತ್ತಳಿಕೆಯಿಂದ ಸಿಡಿಯಲಿದೆಯಾ ಬಾಂಬ್ ಗಳು? ಎಂಬ ಪ್ರಶ್ನೆಗಳು ಮೂಡಿದ್ದು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಸಾರ್ವಜನಿಕ ಸಾರಿಗೆಯಲ್ಲಿ ಅಶ್ಲೀಲ ಸಂಗೀತ ನಿಷೇಧಿಸಿದ ಸರ್ಕಾರ!...
ಸಾರ್ವಜನಿಕ ಸಾರಿಗೆ, ಟ್ರಕ್, ಟೆಂಪೋಗಳಲ್ಲಿ ಪ್ರಯಾಣದ ವೇಳೆ ಮ್ಯೂಸಿಕ್ ಸಾಮಾನ್ಯವಾಗಿದೆ. ಆದರೆ ಯಾವ ಸಂಗೀತ, ಹಾಡು ಹಾಕಬೇಕು ಅನ್ನೋದರಲ್ಲಿ ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಅಶ್ಲೀಲ, ಅಸಭ್ಯ ಸಂಗೀತಗಳನ್ನು ಹಾಕಲಾಗುತ್ತಿತ್ತು. ಇದೀಗ ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.
ಯುವತಿ ನನ್ನ ಭೇಟಿಗೆ ಪ್ರಯತ್ನಿದ್ದು ನಿಜ, ಡಿಕೆಶಿ ಮೊದಲ ಪ್ರತಿಕ್ರಿಯೆ...
ವಿವಾದಿತ ಸೀಡಿಯಲ್ಲಿರುವ ಯುವತಿ ಇಂದು 4 ನೇ ವಿಡಿಯೋ ರಿಲೀಸ್ ಮಾಡಿ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಂಕಿತ ಕಿಂಗ್ಪಿನ್ ನರೇಶ್ ಗೌಡ ಮೂಲಕ ಡಿಕೆ ಶಿವಕುಮಾರ್ರನ್ನು ಭೇಟಿ ಮಾಡಲು ಯತ್ನಿಸಿರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
IPL 2021 ಈ ಸಲ ಸನ್ರೈಸರ್ಸ್ ಕಪ್ ಗೆಲ್ಲಲು ಒಳ್ಳೆಯ ಅವಕಾಶವಿದೆ: ಬೇರ್ಸ್ಟೋವ್...
ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜಾನಿ ಬೇರ್ಸ್ಟೋವ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಾವು ಪ್ರತಿನಿಧಿಸುವ ಸನ್ರೈಸರ್ಸ್ ಹೈದರಾಬಾದ್ ತಂಡ ಟ್ರೋಫಿ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.