ವಿಟಿಯು ಅನರ್ಹ ಬೋಧಕರ ನೇಮಕಾತಿ ವಿಚಾರ64 ಬೋಧಕರಿಗೆ ಕುಲಸಚಿವರಿಂದ ನೋಟಿಸ್ ಜಾರಿನೋಟಿಸ್ ಜಾರಿ ಮಾಡಿದ ಕುಲಸಚಿವ ಪ್ರೊ.ಜಗನ್ನಾಥನೋಟಿಸ್ ಗೆ ೧೫ ದಿನದೊಳಗೆ ಉತ್ತರಿಸುವಂತೆ ಸೂಚನೆ  

ಬೆಳಗಾವಿ(ಜು.13): ಆದಾಯ ಪ್ರಮಾಣ ಪತ್ರ ಮತ್ತು ಪಿಹೆಚ್ ಡಿ ಪದವಿ ಪಡೆಯದ 64 ಬೋಧಕರಿಗೆ ವಿಟಿಯು ಕುಲಸಚಿವರು ನೋಟಿಸ್ ಜಾರಿ ಮಾಡಿದ್ದಾರೆ. 64 ಬೋಧಕರಿಗೆ ನೋಟಿಸ್ ಜಾರಿಗೊಳಿಸಿದ ವಿಟಿಯು ಕುಲಸಚಿವ ಪ್ರೊ.ಜಗನ್ನಾಥ ರೆಡ್ಡಿ, ೧೫ ದಿನದೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಲಪತಿ ಡಾ.ಮಹೇಶಪ್ಪ ಆಧಿಕಾರದ ಅವಧಿಯಲ್ಲಿ ಈ ಹುದ್ದೆಗಳು ಭರ್ತಿಯಾಗಿದ್ದು, ಇದರಲ್ಲಿ ಲಂಚ ಪಡೆದ ಆರೋಪ ಕೂಡ ಕೇಳಿ ಬಂದಿತ್ತು. ಕಲಬುರಗಿ, ಮೈಸೂರು, ಮುದ್ದೇನಹಳ್ಳಿಯ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಈ ಬೋಧಕರನ್ನು ನೇಮಿಸಲಾಗಿತ್ತು.

ಈ ಅಕ್ರಮದ ಬಗ್ಗೆ 2017 ರಲ್ಲಿ ಸರ್ಕಾರ ನ್ಯಾ .ಕೇಶವನಾರಾಯಣ ಸಮಿತಿ ರಚಿಸಿತ್ತು. ಅನರ್ಹತೆ ಹೊಂದಿರುವವರನ್ನು ನೇಮಕ ಮಾಡಿಕೊಂಡಿರುವುದಾಗಿ ಈ ಸಮಿತಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು.

ಇದೀಗ ಬೋಧಕರ ಪ್ರೊಬೆಷನರಿ ಅವಧಿ ಮುಕ್ತಾಯಗೊಂಡಿದ್ದು, ಬೋಧಕರ ಆರ್ಹತೆ ಪರಿಶೀಲನೆಗೆ ವಿಟಿಯು‌ ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಈ 64 ಬೋಧಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.