ನಾಗರ ಹಾವು ವೀಕ್ಷಣೆ ವೇಳೆ ವಿಷ್ಣು ಅಭಿಮಾನಿ ಸಾವು
ಗರುಡಾ ಸ್ವಾಗತ್ ಮಾಲ್ ಚಿತ್ರ ವೀಕ್ಷಿಸುತ್ತಿದ್ದಾಗ ವಿಷ್ಣು ಆಗಮನದ ಆರಂಭದ ದೃಶ್ಯದಲ್ಲಿ ಹೃದಯಾಘಾತವಾಗಿದೆ.
ಬೆಂಗಳೂರು(ಅ.14): ನಾಗರ ಹಾವು ವೀಕ್ಷಣೆ ವೇಳೆ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ಗರುಡಾ ಸ್ವಾಗತ್ ಮಾಲ್ನಲ್ಲಿ ನಡೆದಿದೆ. ಜಯನಗರದ ನಿವಾಸಿ ವಿಷ್ಣು ಅಭಿಮಾನಿ ಸುಬ್ರಮಣಿ ಮೃತರು. ಗರುಡಾ ಸ್ವಾಗತ್ ಮಾಲ್ ಚಿತ್ರ ವೀಕ್ಷಿಸುತ್ತಿದ್ದಾಗ ವಿಷ್ಣು ಆಗಮನದ ಆರಂಭದ ದೃಶ್ಯದಲ್ಲಿ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.