ಮಲ್ಯ ಹಾಜರಾದ ಮೇಲಷ್ಟೇ ತೀರ್ಪು: ಈ ನಡುವೆ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಮಲ್ಯಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಸ್ಥಗಿತಗೊಳಿಸಿದೆ.

ನವದೆಹಲಿ(ಜು.15): ವಂಚನೆ ಕೇಸಲ್ಲಿ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಅವರನ್ನು ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಅತ್ಯಧಿಕ ಬಿಗಿ ಭದ್ರತೆಯ 12ನೇ ಬಾರಕ್‌ನಲ್ಲಿ ಉದ್ಯಮಿಯನ್ನು ಬಂಧಿಸಿಡುವುದಾಗಿ ಬ್ರಿಟನ್ ಸರ್ಕಾರಕ್ಕೆ ಮಾಹಿತಿ ನೀಡಿದೆ. ಯಾವುದೇ ವ್ಯಕ್ತಿಯನ್ನು ಬೇರೆ ದೇಶಕ್ಕೆ ಗಡೀಪಾರು ಮಾಡುವ ಮುನ್ನ ಆ ದೇಶದಲ್ಲಿನ ಜೈಲಿನ ಸ್ಥಿತಿಗಳ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ಬ್ರಿಟನ್ ತೆಗೆದುಕೊಳ್ಳುತ್ತದೆ. ಅದರಂತೆ, ಮಲ್ಯ ಅವರ ಬಗ್ಗೆ ಬ್ರಿಟನ್ ಸರ್ಕಾರ ಕೇಳಿದ ಪ್ರಶ್ನೆಗೆ ಭಾರತ ಸರ್ಕಾರ ಮೇಲ್ಕಂಡ ಉತ್ತರ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲ್ಯ ಹಾಜರಾದ ಮೇಲಷ್ಟೇ ತೀರ್ಪು: ಈ ನಡುವೆ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಮಲ್ಯಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಸ್ಥಗಿತಗೊಳಿಸಿದೆ. ಮಲ್ಯ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಶಿಕ್ಷೆ ವಿಧಿಸಲು ಆಗದು. ಮಲ್ಯ ಖುದ್ದು ಹಾಜರಾದ ಮೇಲಷ್ಟೇ ಈ ಕೇಸಲ್ಲಿ ಮುಂದುವರೆಯಬಹುದು ಎಂದು ನ್ಯಾಯಪೀಠ ಹೇಳಿದೆ