ಐಎಎಸ್​ ಅಧಿಕಾರಿ ಅನುರಾಗ್​ ತಿವಾರಿ ಸಾವಿನ ಪ್ರಕರಣದ ತನಿಖಾಧಿಕಾರಿಗಳನ್ನು ಬದಲಿಸುವಂತೆ ನಿವೃತ್ತ ಐಎಎಸ್​ ಅಧಿಕಾರಿ ವಿಜಯ್​ ಕುಮಾರ್​ ಒತ್ತಾಯಿಸಿದ್ದಾರೆ.  

ಬೆಂಗಳೂರು (ಸೆ.25): ಐಎಎಸ್​ ಅಧಿಕಾರಿ ಅನುರಾಗ್​ ತಿವಾರಿ ಸಾವಿನ ಪ್ರಕರಣದ ತನಿಖಾಧಿಕಾರಿಗಳನ್ನು ಬದಲಿಸುವಂತೆ ನಿವೃತ್ತ ಐಎಎಸ್​ ಅಧಿಕಾರಿ ವಿಜಯ್​ ಕುಮಾರ್​ ಒತ್ತಾಯಿಸಿದ್ದಾರೆ.

ಕೇಂದ್ರ ಕ್ಯಾಬಿನೆಟ್​ಕಾರ್ಯದರ್ಶಿಗೆ ಪತ್ರ ಬರೆದಿರುವ ವಿಜಯ್​ ಕುಮಾರ್​, ಸಿಬಿಐ ಕಡೆಯಿಂದ ಸಾಕಷ್ಟು ತಪ್ಪುಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅನುರಾಗ್​​ ತಿವಾರಿ ಸಾವನ್ನಪ್ಪಿದ ದಿನ ಅವರ ಜೊತೆಗಿದ್ದ ಐಎಎಸ್​ ಅಧಿಕಾರಿ ಹಾಗೂ ಆಹಾರ ಇಲಾಖೆ ಹಿರಿಯ ಅಧಿಕಾರಿಗಳನ್ನು ಬಂಧಿಸುವಂತೆ ಅವರ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಅನುರಾಗ್​ ಡ್ರಗ್​ ಓವರ್​ ಡೋಸ್​ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಐಪಿಎಸ್​ ದರ್ಜೆಯ ಅಧಿಕಾರಿಗಳನ್ನು ತನಿಖಾಧಿಕಾರಿಗಳಾಗಿ ನೇಮಿಸುವಂತೆ ವಿಜಯ್​ ಕುಮಾರ್​ ಒತ್ತಾಯಿಸಿದ್ದಾರೆ.