ರಾತ್ರೋರಾತ್ರಿ JDS ಮುಖಂಡನ ಬಂಧನ, ಬಿಡುಗಡೆ, ಏನಿದು ಘಟನೆ..?
ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ರಾತ್ರೋರಾತ್ರಿ ಜೆಡಿಎಸ್ ಮುಖಂಡನನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಏನಿದು ಘಟನೆ..?
ಬೆಂಗಳೂರು, [ಮಾ .10]: ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ರಾತ್ರೋರಾತ್ರಿ ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ನನ್ನು ಬಂಧಿಸಿ ಜಾಮೀನ ಮೇಲೆ ಬಿಡುಗಡೆ ಮಾಡಲಾಗಿದೆ.
ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ಬಿಡುಗಡೆ ಆಗಿರುವವರು. ಅಲ್ತಾಫ್ ಹೋಟೆಲ್ಗೆ ನುಗ್ಗಿ ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆ ಉಪ್ಪಾರಪೇಟೆ ಪೊಲೀಸರು ಶನಿವಾರ ತಡರಾತ್ರಿ ಅಲ್ತಾಫ್ ಖಾನ್ ಬಂಧಿಸಿ, ತಡರಾತ್ರಿವರೆಗೆ ವಿಚಾರಣೆ ನಡೆಸಿ ಬಳಿಕ ನ್ಯಾಯಾಧಿಶರ ನಿವಾಸಕ್ಕೆ ಹಾಜರು ಪಡಿಸಿದದ್ದರು.
ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲೇ ಜಾಮೀನು ಪಡೆದು ಅಲ್ತಾಫ್ ಖಾನ್ ರಿಲೀಸ್ ಆಗಿದ್ದಾನೆ. ಅಲ್ತಾಫ್ ಖಾನ್ ಬಂಧನದ ಹಿಂದೆ ಮೈತ್ರಿ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎನ್ನುವುದನ್ನು ಅಲ್ತಾಪ್ ಖಾನ್ ಬೆಂಬಲಗರು ಮಾಹಿತಿ ನೀಡಿದ್ದಾರೆ.