ಮನೆಯ ನೆಲ ಸ್ವಚ್ಚಗೊಳಿಸಲು ಗೋ ಮೂತ್ರದಿಂದ ತಯಾರಿಸಿದ ಕ್ಲೀನರ್ ಬಿಡುಗಡೆ ಮಾಡಿದ್ದ ಉತ್ತರಪ್ರದೇಶ ಸರ್ಕಾರ, ಇದೀಗ ಗೋಮೂತ್ರ ಬಳಸಿ ವಿವಿಧ ಬಗೆಯ ಔಷಧಗಳನ್ನು ತಯಾರಿಸಲು ಮುಂದಾಗಿದೆ.

ಲಖನೌ: ಮನೆಯ ನೆಲ ಸ್ವಚ್ಚಗೊಳಿಸಲು ಗೋ ಮೂತ್ರದಿಂದ ತಯಾರಿಸಿದ ಕ್ಲೀನರ್ ಬಿಡುಗಡೆ ಮಾಡಿದ್ದ ಉತ್ತರಪ್ರದೇಶ ಸರ್ಕಾರ, ಇದೀಗ ಗೋಮೂತ್ರ ಬಳಸಿ ವಿವಿಧ ಬಗೆಯ ಔಷಧಗಳನ್ನು ತಯಾರಿಸಲು ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಇಲಾಖೆ ನಿರ್ದೇಶಕ ಡಾ. ಆರ್.ಆರ್.ಚೌಧರಿ, ‘ಪಿತ್ತಜನಕಾಂಗ ಸಮಸ್ಯೆ ಗಳು, ಕೀಲು ನೋವು ಮತ್ತು ರೋಗ ನಿರೋಧಕ ಕೊರತೆ ವಿರುದ್ಧ ಹೋರಾಡಲು ಆಯುರ್ವೇದ ಇಲಾಖೆ ತಯಾರಿಸಿದ 8 ರೀತಿ ಮಾತ್ರೆಗಳಲ್ಲಿ ಗೋಮೂತ್ರ ಬಳಸಲಾಗಿದೆ,’ ಎಂದು ತಿಳಿಸಿದ್ದಾರೆ.

ಗೋಮೂತ್ರ, ಹಾಲು ಮತ್ತು ತುಪ್ಪ ಬಳಸಿ ಆಯುರ್ವೇದ ಔಷಧಿ ತಯಾರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.