ಮತ್ತೊಮ್ಮೆ ವಿಭಜನೆಯಾಗುತ್ತಾ ಭಾರತ..? ಕೇಂದ್ರ ಸಚಿವರು ಹೇಳಿದ್ದೇನು?
ಪರಿಚ್ಛೇದ 35ಎ ಕುರಿತಂತೆ ಕೂಗು ಕೇಳಿಬರುತ್ತಿದೆ. ಭಾರತದ ಬಗ್ಗೆ ಉಲ್ಲೇಖಿಸುವುದು ಅಸಾಧ್ಯವಾಗುವಂತಹ ಸಮಯ ಬರಬಹುದು’ 1947 ರಂತೆ 2047ರಲ್ಲಿಯೂ ಭಾರತ ವಿಭಜನೆಯಾಗಬಹುದು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ನವದೆಹಲಿ: 2047 ರಲ್ಲಿ ಭಾರತ ಮತ್ತೊಮ್ಮೆ ವಿಭಜನೆಯಾಗಬಹುದು ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ. ‘ಧರ್ಮದ ಆಧಾರದಲ್ಲಿ 1947 ರಲ್ಲಿ ಭಾರತ ವಿಭಜನೆಯಾಗಿತ್ತು.
ಅದೇ ಪರಿಸ್ಥಿತಿ 2047 ರಲ್ಲಿ ಸಂಭವಿಸಲಿದೆ. 72 ವರ್ಷಗಳಲ್ಲಿ 33 ಕೋಟಿಯಷ್ಟಿದ್ದ ಜನಸಂಖ್ಯೆ, 135.7 ಕೋಟಿಗೆ ಏರಿಕೆಯಾಗಿದೆ. ವಿಭಜಕ ಶಕ್ತಿಗಳ ಜನಸಂಖ್ಯಾ ಸ್ಫೋಟ ಭಯಾನಕವಾಗಿದೆ.
ಪ್ರಸ್ತುತ ಪರಿಚ್ಛೇದ 35ಎ ಕುರಿತಂತೆ ಕೂಗು ಕೇಳಿಬರುತ್ತಿದೆ. ಭಾರತದ ಬಗ್ಗೆ ಉಲ್ಲೇಖಿಸುವುದು ಅಸಾಧ್ಯವಾಗುವಂತಹ ಸಮಯ ಬರಬಹುದು’ ಎಂದು ಸಚಿವ ಸಿಂಗ್ ಟ್ವೀಟ್ ಮಾಡಿದ್ದಾರೆ.
1947 में धर्म के आधार पर ही देश का विभाजन हुआ वैसी ही परिस्थिति पुनः2047 तक होगी।
— Giriraj Singh (@girirajsinghbjp) September 16, 2018
72 साल में जनसंख्या 33cr से बढ़कर 135.7cr हो गया है।
विभाजनकारी ताक़तों का जनसंख्या विस्फोट भयावह है ।
अभी तो 35A के बहस पर हंगामा हो रहा है।आने वाले वक़्त में तो एक भारत का ज़िक्र करना असंभव होगा। pic.twitter.com/5RbWk3nEws