'ನನ್ನ ಹಾಗೂ ನನ್ನ ಸರಕಾರದ ಬಗ್ಗೆ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಅಮಿತ್ ಶಾ ಸಾಬೀತು ಪಡಿಸುವವರೇ?.. ಈ ರಾಜ್ಯದ ಜನತೆ ಸುಳ್ಳುಗಳನ್ನು ನಂಬುವವರಲ್ಲ'
ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯವಾಗ್ದಾಳಿ ನಡೆಸಿದ್ಧಾರೆ. ಸಿದ್ದರಾಮಯ್ಯ ಎಂದರೇ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೇ ಸಿದ್ದರಾಮಯ್ಯ ಎಂದು ಮೈಸೂರಿನಲ್ಲಿ ಸಿಎಂ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ , ಅಮಿತಾ 'ಮಾಜಿ ಜೈಲು ಹಕ್ಕಿಯೊಂದು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮತ್ತೊಂದು ಜೈಲು ಹಕ್ಕಿಯನ್ನೇ ಆಯ್ಕೆ ಮಾಡಿದೆ', 'ನನ್ನ ಹಾಗೂ ನನ್ನ ಸರಕಾರದ ಬಗ್ಗೆ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಅಮಿತ್ ಶಾ ಸಾಬೀತು ಪಡಿಸುವವರೇ?.. ಈ ರಾಜ್ಯದ ಜನತೆ ಸುಳ್ಳುಗಳನ್ನು ನಂಬುವವರಲ್ಲ' ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
