Asianet Suvarna News Asianet Suvarna News

2 ತಿಂಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ದೊಡ್ಡಬಳ್ಳಾಪುರ-ರಾಜಾನಕುಂಟೆ-ಯಲಹಂಕ ನಡುವೆ ಮಾ.29ರಿಂದ ಮೇ 29ರ ವರೆಗೆ (ಎರಡು ತಿಂಗಳ ಕಾಲ) ರೈಲು ಹಳಿ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Train Service delayed 2 month

ಬೆಂಗಳೂರು: ದೊಡ್ಡಬಳ್ಳಾಪುರ-ರಾಜಾನಕುಂಟೆ-ಯಲಹಂಕ ನಡುವೆ ಮಾ.29ರಿಂದ ಮೇ 29ರ ವರೆಗೆ (ಎರಡು ತಿಂಗಳ ಕಾಲ) ರೈಲು ಹಳಿ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ಮಾರ್ಗದಲ್ಲಿ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶನಿವಾರ ನಿರ್ವಹಣಾ ಕಾಮಗಾರಿ ನಡೆಯಲಿದೆ.

ಇದರಿಂದ ಗೋರಖ್ ಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೋಮವಾರ ದೊಡ್ಡಬಳ್ಳಾಪುರ-ರಾಜಾನಕುಂಟೆ ನಡುವೆ 35 ನಿಮಿಷ ಮತ್ತು ರಾಜಾನಕುಂಟೆ-ಯಲಹಂಕ ನಡುವೆ 25 ನಿಮಿಷ ನಿಲುಗಡೆಯಾಗಿ ಮುಂದೆ ಸಾಗಲಿದೆ. ನಂದೇಡ್-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಪ್ರತಿ ಶನಿವಾರ, ಸೋಮವಾರ, ಬುಧವಾರ, ದೊಡ್ಡಬಳ್ಳಾಪುರ- ರಾಜನಕುಂಟೆ ನಡುವೆ ೪೫ ನಿಮಿಷ ಮತ್ತು ರಾಜಾನಕುಂಟೆ-ಯಲಹಂಕ ನಡುವೆ 35ನಿಮಿಷ ನಿಂತು ಬಳಿಕ ಸಾಗಲಿದೆ.

ಶ್ರೀ ಸಾಯಿನಗರ್ ಶಿರಡಿ-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಬುಧವಾರ ದೊಡ್ಡಬಳ್ಳಾಪುರ-ರಾಜಾನಕುಂಟೆ ನಡುವೆ 35ನಿಮಿಷ ಮತ್ತು ಶನಿವಾರ ರಾಜಾನಕುಂಟೆ-ಯಲಹಂಕ ನಡುವೆ 25 ನಿಮಿಷ ನಿಂತು, ಸಾಗಲಿದೆ. 

ಕಾಚಿಗುಡ-ಯಶವಂತಪುರ ಎಕ್ಸ್‌ಪ್ರೆಸ್ ಪ್ರತಿ ಬುಧವಾರ ದೊಡ್ಡಬಳ್ಳಾಪುರ- ರಾಜಾನಕುಂಟೆ ಮತ್ತು ರಾಜಾನಕುಂಟೆ-ಯಲಹಂಕ ನಡುವೆ 105 ನಿಮಿಷ ನಿಲುಗಡೆಯಾಗಿ ನಂತರ ಮುಂದೆ ಸಾಗಲಿದೆ.

ಅಂತೆಯೇ ಚಿಕ್ಕಬಾಣಾವರದ ಸಮೀಪ ಹಳಿ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಮಾ.29ರಿಂದ ಏ.22ರವರೆಗೆ ಅರಸೀಕೆರೆ- ಕೆಎಸ್‌ಆರ್ ಬೆಂಗಳೂರು ರೈಲು ಸಂಚಾರ ವಿಳಂಬವಾಗ ಲಿದೆ. ಈ ಮಾರ್ಗದ ಕೆಎಸ್‌ಆರ್ ಬೆಂಗಳೂರು- ಮೈಸೂರು ಪ್ಯಾಸೆಂಜರ್ ರೈಲು ಬೆಳಗ್ಗೆ 9.20ರ ಬದಲಾಗಿ 9.50ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದೆ.

Follow Us:
Download App:
  • android
  • ios