Asianet Suvarna News Asianet Suvarna News

ಗ್ರಹಣ ಪ್ರಯುಕ್ತ ನಾಳೆ ತಿರುಪತಿ, ಧರ್ಮಸ್ಥಳ ದರ್ಶನ ಬಂದ್!

ಚಂದ್ರ ಗ್ರಹಣ ಪ್ರಯುಕ್ತ ನಾಳೆ  ತಿರುಪತಿ ತಿಮ್ಮಪ್ಪ ಸೇರಿದಂತೆ  ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ​

Tirupati Dharmasthala Temple Will be closed tommorrow

ಬೆಂಗಳೂರು (ಜ.30): ಚಂದ್ರ ಗ್ರಹಣ ಪ್ರಯುಕ್ತ ನಾಳೆ  ತಿರುಪತಿ ತಿಮ್ಮಪ್ಪ ಸೇರಿದಂತೆ  ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ​

ನಾಳೆ ಧರ್ಮಸ್ಥಳದ ಮಂಜುನಾಥ ದರ್ಶನವೂ ಸಿಗುವುದಿಲ್ಲ.  ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲವೂ ಬಂದ್​ ಆಗಲಿದೆ.  ಖಗ್ರಾಸ ಚಂದ್ರ ಗ್ರಹಣವಾದ ನಾಳೆ ಬಹುತೇಕ ದೇವರಿಗೆ ಪೂಜೆ ಇರಲ್ಲ.  ದೇಶದ ಮತ್ತು ರಾಜ್ಯ ಹಲವು ಹಿಂದೂ ದೇವಾಲಯಗಳ ದರ್ಶನ ಇರುವುದಿಲ್ಲ.

ದಕ್ಷಿಣ ಕಾಶಿ ನಂಜನಗೂಡು ಹುಣ್ಣಿಮೆ ತೇರಿನ ಸಮಯ ಬದಲಾವಣೆಯಾಗಲಿದೆ.  ರಾತ್ರಿ 8 ಗಂಟೆಗೆ ಬದಲಾಗಿ ಸಂಜೆ 4.30 ಕ್ಕೆ ಹುಣ್ಣಿಮೆ ತೇರು ನಡೆಯಲಿದೆ.

Follow Us:
Download App:
  • android
  • ios