ಚಂದ್ರ ಗ್ರಹಣ ಪ್ರಯುಕ್ತ ನಾಳೆ  ತಿರುಪತಿ ತಿಮ್ಮಪ್ಪ ಸೇರಿದಂತೆ  ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ​

ಬೆಂಗಳೂರು (ಜ.30): ಚಂದ್ರ ಗ್ರಹಣ ಪ್ರಯುಕ್ತ ನಾಳೆ ತಿರುಪತಿ ತಿಮ್ಮಪ್ಪ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ​

ನಾಳೆ ಧರ್ಮಸ್ಥಳದ ಮಂಜುನಾಥ ದರ್ಶನವೂ ಸಿಗುವುದಿಲ್ಲ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲವೂ ಬಂದ್​ ಆಗಲಿದೆ. ಖಗ್ರಾಸ ಚಂದ್ರ ಗ್ರಹಣವಾದ ನಾಳೆ ಬಹುತೇಕ ದೇವರಿಗೆ ಪೂಜೆ ಇರಲ್ಲ. ದೇಶದ ಮತ್ತು ರಾಜ್ಯ ಹಲವು ಹಿಂದೂ ದೇವಾಲಯಗಳ ದರ್ಶನ ಇರುವುದಿಲ್ಲ.

ದಕ್ಷಿಣ ಕಾಶಿ ನಂಜನಗೂಡು ಹುಣ್ಣಿಮೆ ತೇರಿನ ಸಮಯ ಬದಲಾವಣೆಯಾಗಲಿದೆ. ರಾತ್ರಿ 8 ಗಂಟೆಗೆ ಬದಲಾಗಿ ಸಂಜೆ 4.30 ಕ್ಕೆ ಹುಣ್ಣಿಮೆ ತೇರು ನಡೆಯಲಿದೆ.