ಗ್ರಹಣ ಪ್ರಯುಕ್ತ ನಾಳೆ ತಿರುಪತಿ, ಧರ್ಮಸ್ಥಳ ದರ್ಶನ ಬಂದ್!
ಚಂದ್ರ ಗ್ರಹಣ ಪ್ರಯುಕ್ತ ನಾಳೆ ತಿರುಪತಿ ತಿಮ್ಮಪ್ಪ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.
ಬೆಂಗಳೂರು (ಜ.30): ಚಂದ್ರ ಗ್ರಹಣ ಪ್ರಯುಕ್ತ ನಾಳೆ ತಿರುಪತಿ ತಿಮ್ಮಪ್ಪ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.
ನಾಳೆ ಧರ್ಮಸ್ಥಳದ ಮಂಜುನಾಥ ದರ್ಶನವೂ ಸಿಗುವುದಿಲ್ಲ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲವೂ ಬಂದ್ ಆಗಲಿದೆ. ಖಗ್ರಾಸ ಚಂದ್ರ ಗ್ರಹಣವಾದ ನಾಳೆ ಬಹುತೇಕ ದೇವರಿಗೆ ಪೂಜೆ ಇರಲ್ಲ. ದೇಶದ ಮತ್ತು ರಾಜ್ಯ ಹಲವು ಹಿಂದೂ ದೇವಾಲಯಗಳ ದರ್ಶನ ಇರುವುದಿಲ್ಲ.
ದಕ್ಷಿಣ ಕಾಶಿ ನಂಜನಗೂಡು ಹುಣ್ಣಿಮೆ ತೇರಿನ ಸಮಯ ಬದಲಾವಣೆಯಾಗಲಿದೆ. ರಾತ್ರಿ 8 ಗಂಟೆಗೆ ಬದಲಾಗಿ ಸಂಜೆ 4.30 ಕ್ಕೆ ಹುಣ್ಣಿಮೆ ತೇರು ನಡೆಯಲಿದೆ.