ಮನೆ ಎದುರೇ ನಡೆದ ಗುಂಡಿನ ದಾಳಿಯಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿ 11 ದಿನಗಳೇ ಕಳೆದರೂ ತನಿಖಾ ತಂಡಕ್ಕೆ ಹಂತಕರ ಸುಳಿವು ಇಲ್ಲ. ತನಿಖಾತಂಡವು 8 ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅವುಗಳಲ್ಲಿ  ‘ಟೈಗರ್ ವಿಂಗ್’ ಆಯಾಮವೂ ಒಂದು.

ಬೆಂಗಳೂರು: ಮನೆ ಎದುರೇ ನಡೆದ ಗುಂಡಿನ ದಾಳಿಯಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿ 11 ದಿನಗಳೇ ಕಳೆದರೂ ತನಿಖಾ ತಂಡಕ್ಕೆ ಹಂತಕರ ಸುಳಿವು ಇಲ್ಲ. ತನಿಖಾತಂಡವು 8 ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅವುಗಳಲ್ಲಿ ‘ಟೈಗರ್ ವಿಂಗ್’ ಆಯಾಮವೂ ಒಂದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಟೈಗರ್ ವಿಂಗ್?

ಹಿಂದೂ ಪರ ಒಲವು ಹೊಂದಿರುವ ಟೈಗರ್ ಸಂಘಟನೆಯು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿದೆ. ಪ್ರಮುಖ ಮುಸ್ಲಿಂ ಮುಖಂಡರೇ ಅದರ ಟಾರ್ಗೆಟ್. ಹಿಂದೂ ತತ್ವವನ್ನು ಪ್ರಶ್ನಿಸಿದವರ ಮೇಲೆ ಆ ಸಂಘಟನೆ ದಾಳಿ ನಡೆಸಿದ ನಿದರ್ಶನಗಳಿವೆ. ಹೀಗಾಗಿ ಎಡಪಂಥೀಯ ಧೋರಣೆ ಹೊಂದಿದ್ದ ಗೌರಿ ಅವರನ್ನು ಟೈಗರ್ ಗುರಿಯಾಗಿಸಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಗೊತ್ತಾಗಿದೆ.