Asianet Suvarna News Asianet Suvarna News

ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನವೂ ಟಿಕೆಟ್ ವಾರ್

ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನ ಟಿಕೆಟ್ ವಾರ್ ನಡೆದಿದೆ. ಮೀಸಲು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧೆಗೆ ಆಕಾಂಕ್ಷಿಯಾಗಿರುವ ಎಸ್.ಎಸ್.ಶಂಕರ್ ಇಂದು ಮೈಸೂರಿನ ಬನ್ನೂರು ಪಟ್ಟಣದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿದರು.

Ticket war in T Narasipura before the election

ಮೈಸೂರು(ಅ.09): ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನ ಟಿಕೆಟ್ ವಾರ್ ನಡೆದಿದೆ. ಮೀಸಲು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧೆಗೆ ಆಕಾಂಕ್ಷಿಯಾಗಿರುವ ಎಸ್.ಎಸ್.ಶಂಕರ್ ಇಂದು ಮೈಸೂರಿನ ಬನ್ನೂರು ಪಟ್ಟಣದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿದರು.

ವಂಶ ಪಾರಂಪರ್ಯವಾಗಿ ಬಂದ ರಾಜಕಾರಣದಿಂದ  ಬೇಸತ್ತು ಕಾಂಗ್ರೇಸ್ ತ್ಯೇಜುಸುತ್ತಿದ್ದೆನೆ ಎಂದ ಶಂಕರ್, ನನಗೆ ಹಣ ಮುಖ್ಯ ಅಲ್ಲ. ನನ್ನ   ಬಳಿ ಎಲ್ಲವೊ ಇದೆ. ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಸಮಾವೇಶದಲ್ಲಿ ಇಷ್ಟು ಜನ ಸೇರಿದ್ದಾರೆ ಅಂದ್ರೆ ನನ್ನ ಮೇಲಿನ ಪ್ರೀತಿ ತೊರಿಸುತ್ತದೆ. ಕೆಲವರು ಅಧಿಕಾರದ ದರ್ಪದಲ್ಲಿ ಎಲ್ಲವನ್ನೂ ಗೆಲ್ಲೊಕೆ ಆಗುತ್ತೆ ಎಂದುಕೊಂಡಿದ್ದಾರೆ.

ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸೊಕೆ ಬಯಸುತ್ತೆನೆ ಎಂದು ಸಚಿವ ಮಹದೇವಪ್ಪ ವಿರುದ್ಧ ಕಿಡಿಕಾರಿದರು. ನನಗೊ ಈ ಕ್ಷೇತ್ರದ ಚಿತ್ರಣ ಬದಲು ಮಾಡಬೇಕೆಂಬ ಆಸೆ ಇದೆ. ನಿವೇಲ್ಲರೊ ಒಗ್ಗಟ್ಟಾಗಿ ತಮಗೆ ಆಶಿರ್ವಾದ ಮಾಡಿ ಎಂದು ಮನವಿ ಮಾಡಿದ್ದಾರೆ.

 

Follow Us:
Download App:
  • android
  • ios