ಇಂದು ಎರಡನೇ ಶನಿವಾರ(ಡಿ.10), ಭಾನುವಾರ(ಡಿ.11) ಮತ್ತು ಈದ್ ಮಿಲಾದ್(ಡಿ.12)ಗಳು ಸರತಿಯಲ್ಲಿ ಬಂದಿರುವ ಕಾರಣ ಸತತ 3 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ಬೆಂಗಳೂರು(ಡಿ.10) ಇಂದಿನಿಂದ ಸತತ 3 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರುವ ಕಾರಣ ನಗದು ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

Add Asianetnews Kannada as a Preferred SourcegooglePreferred

ದೇಶಾದ್ಯಂತ ಬಹುತೇಕ ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಕೆಲವದರಲ್ಲಿ ಹಣವಿಲ್ಲ, ಇನ್ನು ಕೆಲವು ಮುಚ್ಚಿವೆ. ಹೀಗಿರುವಾಗ, ಹೆಚ್ಚಿನವರು ನಗದಿಗಾಗಿ ಬ್ಯಾಂಕುಗಳನ್ನೇ ಅವಲಂಬಿಸಿದ್ದಾರೆ.

ಇಂದು ಎರಡನೇ ಶನಿವಾರ(ಡಿ.10), ಭಾನುವಾರ(ಡಿ.11) ಮತ್ತು ಈದ್ ಮಿಲಾದ್(ಡಿ.12)ಗಳು ಸರತಿಯಲ್ಲಿ ಬಂದಿರುವ ಕಾರಣ ಸತತ 3 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ಈಗಾಗಲೇ ಕ್ಯೂಗಳಲ್ಲಿ ನಿಂತು ಸಹನೆ ಕಳೆದುಕೊಂಡಿರುವ ಜನರಿಗೆ ಈ ಮೂರು ದಿನಗಳು ಇನ್ನಷ್ಟು ಸಮಸ್ಯೆ ಉಂಟುಮಾಡುವ ಸಾಧ್ಯತೆಯಿದೆ.