ಈ ಎರಡೂ ಗ್ರಾಮಗಳ ಜನಪ್ರತಿ​ನಿಧಿ​ಗಳು ಮತ್ತು ರಾಜಕೀಯ ಮುಖಂಡರು ಬಂದ್‌ ಸಂಪ್ರದಾಯ​ವನ್ನು ವಿರೋಧಿಸುತ್ತಿರುವುದೇ ಗ್ರಾಮ ಈ ಸಾಧನೆ ಸಾಧಿಸುವುದಕ್ಕೆ ಸಾಧ್ಯ​ವಾಗಿದೆ. ಈ ಪ್ರದೇಶದಲ್ಲಿ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ, ಸಾರಿಗೆ ಸಾಗಾಟ ವ್ಯವಸ್ಥೆ ಸಹಜ ಸ್ಥಿತಿಯಲ್ಲಿರು​ತ್ತವೆ.

ಕೊಚ್ಚಿ: ರಾಜಕೀಯ ಸಂಘಟನೆಗಳು ಬಂದ್‌ಗೆ ಕರೆ ನೀಡಿದಾಗ ಪ್ರತಿಯೊಬ್ಬರಿಗೂ ಕಿರಿಕಿರಿ​​ಯಾಗುವುದು ಸಹಜ. ಆದರೆ ಕೇರಳದ ಕೊಚ್ಚಿಯ ಎರಡು ಗ್ರಾಮ​ಗಳಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಬಂದ್‌ ನಡೆದಿಲ್ಲ ಎಂಬ ಕುತೂಹಲಕಾರಿ ವಿಷಯ ‘ದ ಟೈಮ್ಸ್‌ ಆಫ್‌ ಇಂಡಿಯಾ' ವರದಿ ಮಾಡಿದೆ. 
ರಾಜಕೀಯ ಪೈಪೋಟಿ ಹೊಂದಿ​ರುವ ಕೇರಳದಲ್ಲಿ ಬಂದ್‌ಗಳು ಸರ್ವೇ ಸಾಮಾನ್ಯ ಎಂಬ ಭಾವನೆಯಿದೆ. ಬಂದ್‌​​ಗಳಿಗೆ ಸಂಘಟನೆಗಳು ಕರೆ ನೀಡಿ​ದಾಗ ಸಾಮಾನ್ಯವಾಗಿ ನಗರಗಳಲ್ಲಿ ಜನ ಜೀವನ ಅಸ್ತವ್ಯಸ್ಥವಾಗುವುದು ಸಹಜ. ಈ ಸಂದರ್ಭ ಬಂದ್‌ ಪರಿ​ಣಾಮ​ಕ್ಕೊಳಪಟ್ಟಜನರು ಬಂದ್‌ ಕರೆ ನೀಡಿದವರನ್ನು ಬೈಕೊಳ್ಳುವುದೂ ಸಾಮಾನ್ಯ. ಆದರೆ ಇಂಥ ಸನ್ನಿವೇಶದಲ್ಲಿ ಕೇರಳದ ಪೆರುಂಬವೂರ್‌ ಸಮೀಪದ ಪುಲ್ಲುವಳಿ ಮತ್ತು ವಲ್ಲಂ ಎಂಬ ಎರಡು ಗ್ರಾಮಗಳಲ್ಲಿ ಬಂದ್‌ ನಡೆಸದಿರಲು ಅವಿರೋಧ ನಿರ್ಣಯವನ್ನು ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ಪಾಲಿಸಿಕೊಂಡು ಬರಲಾಗಿದೆ. 
ಈ ಎರಡೂ ಗ್ರಾಮಗಳ ಜನಪ್ರತಿ​ನಿಧಿ​ಗಳು ಮತ್ತು ರಾಜಕೀಯ ಮುಖಂಡರು ಬಂದ್‌ ಸಂಪ್ರದಾಯ​ವನ್ನು ವಿರೋಧಿಸುತ್ತಿರುವುದೇ ಗ್ರಾಮ ಈ ಸಾಧನೆ ಸಾಧಿಸುವುದಕ್ಕೆ ಸಾಧ್ಯ​ವಾಗಿದೆ. ಈ ಪ್ರದೇಶದಲ್ಲಿ ಅಂಗಡಿಗಳು ಯಾವಾಗಲೂ ತೆರೆದಿರುತ್ತವೆ, ಸಾರಿಗೆ ಸಾಗಾಟ ವ್ಯವಸ್ಥೆ ಸಹಜ ಸ್ಥಿತಿಯಲ್ಲಿರು​ತ್ತವೆ. ಇಲ್ಲಿ ಯಾರೊಬ್ಬರೂ ಬಂದ್‌ ನಡೆಸಲು ಬಲವಂತ ಮಾಡುವುದಿಲ್ಲ. ಕಣ್ಣೂರಿನಲ್ಲಿ ಆರೆಸ್ಸೆಸ್‌ ಕಾರ್ಯಕರ್ತನ ಕೊಲೆಯಾದ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಕೇರಳ ಬಂದ್‌ಗೆ ಕರೆ ನೀಡಿ​ದ್ದರೂ, ಪುಲ್ಲುವಳಿ ಮತ್ತು ವೆಲ್ಲಂ ಗ್ರಾಮ​ಗಳಲ್ಲಿ ಬಂದ್‌ ನಡೆದಿಲ್ಲ. ಹೀಗಾಗಿ ಬಂದ್‌ ನಡೆಸದಿರುವ ತಮ್ಮ ಗ್ರಾಮಗಳ ನಿರ್ಣಯಕ್ಕೆ ಅವು ಮತ್ತೊಮ್ಮೆ ಬದ್ಧತೆಯನ್ನು ಪ್ರದರ್ಶಿಸಿದಂತಾಗಿದೆ. 

ಬಂದ್‌ ನಡೆಯದ ನಾಡು
* ಕೇರಳದಲ್ಲಿ ಎಲ್ಲದಕ್ಕೂ ಬಂದ್‌ ನಡೆಯುವಾಗಲೂ, ಬಂದ್‌ ಸಂಪ್ರದಾಯದಿಂದ ದೂರ ಇರಲು ಸರ್ವಪಕ್ಷ ಮುಖಂಡರ ನಿರ್ಧಾರ
* ರಾಜ್ಯ ಬಂದ್‌'ಗೆ ಕರೆ ನೀಡಿದ್ದರೂ ಈ ಎರಡು ಹಳ್ಳಿಗಳಲ್ಲಿ ಮಾತ್ರ ಜನಜೀವನ ನಿರಾತಂಕ
* ಬಲವಂತವಾಗಿ ಬಂದ್‌ ಮಾಡುವವರಿಲ್ಲ.
* ಗುರುವಾರ ಬಿಜೆಪಿ ಕರೆ ನೀಡಿದ್ದ ಬಂದ್‌ಗೂ ಯಾವುದೇ ಪ್ರತಿಕ್ರಿಯೆ ಇಲ್ಲ.

(ಕೃಪೆ: ಕನ್ನಡಪ್ರಭ)