ಜಂಬೂ ಸವಾರಿ ವೇಳೆ ವೀಕಕರು ದರ್ಬಾರು ಹಾಲನ್ನು ಗಲೀಜು ಮಾಡಿದ್ದು ಜನರ ನಡವಳಿಕೆಯಿಂದ ನಮ್ಮ ಭಾವನೆಗಳಗೆ ಧಕ್ಕೆಯಾಗಿದೆ ಎಂದು ರಾಜ ವಂಶಸ್ಥ ಯದುವೀರ್​ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರು (ಅ.14): ಜಂಬೂ ಸವಾರಿ ವೇಳೆ ವೀಕಕರು ದರ್ಬಾರು ಹಾಲನ್ನು ಗಲೀಜು ಮಾಡಿದ್ದು ಜನರ ನಡವಳಿಕೆಯಿಂದ ನಮ್ಮ ಭಾವನೆಗಳಗೆ ಧಕ್ಕೆಯಾಗಿದೆ ಎಂದು ರಾಜ ವಂಶಸ್ಥ ಯದುವೀರ್​ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಚಿಕ್ಕವನಿದ್ದಾಗ ಅಲ್ಲಿಗೆ ಯಾರನ್ನೂ ಬಿಡುತ್ತಿರಲಿಲ್ಲ. ಕೇವಲ ರಾಜವಂಶಸ್ಥರು ಮಾತ್ರ ಅಲ್ಲಿ ಕೂತು ಜಂಬೂಸವಾರಿ ವೀಕ್ಷಣೆ ಮಾಡುತ್ತಿದ್ದೆವು. ಈಗ ಅದನ್ನು ವಿಐಪಿ ವಿಂಗ್​ ಮಾಡಿ ಅವಕಾಶ ಕೊಟ್ಟಿದ್ದರು. ವೀಕ್ಷಣೆ ವೇಳೆ ತಿಂಡಿ ವ್ಯವಸ್ಥೆ ಕೂಡ ಇತ್ತು. ಆದರೆ ಅದನ್ನು ಒಂದೆಡೆ ಇಡಲು ಡಸ್ಟ್​ಬಿನ್​ ವ್ಯವಸ್ಥೆ ಇರಲಿಲ್ಲ. ವ್ಯವಸ್ಥೆ ಇಲ್ಲದೆ ಇದ್ದರೂ ಜನರು ಹಾಗೆ ಮಾಡಬಾರದಿತ್ತು. ದರ್ಬಾರ್​ ಹಾಲ್​ಗೆ ತುಂಬಾಪಾವಿತ್ರತೆ ಇದೆ. ಜನ ಅದನ್ನು ಅರ್ಥ ಮಾಡಿಕೊಳ್ಳಬೇಕು. ಮುಂದಾದರೂ ದಸರಾ ಆಚರಣೆ ಮುಂಚೆ ಜನರಲ್ಲಿ ತಿಳುವಳಿಕೆ ಮೂಡಿಸಲಿ ಎಂದಿದ್ದಾರೆ.