ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದರೂ, ಈ ಹುದ್ದೆ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ನವದೆಹಲಿ(ಮೇ.16): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದರೂ, ಈ ಹುದ್ದೆ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಲೋಕಸಭೆಯಲ್ಲಿ ಕಾಂಗ್ರೆ​ಸ್‌'ನ ನಾಯಕರಾಗಿರುವ ಖರ್ಗೆ, ಬೇರೆ ಪಕ್ಷದಿಂದ ಬಂದ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಿರುವಾಗ ತಾವೇಕೆ ಈಗ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ವೇಣುಗೋಪಾಲ್​​, ಎರಡು ಬಾರಿ ರಾಹುಲ್​​ ಗಾಂಧಿ ಜೊತೆ ಚರ್ಚೆ ನಡೆಸಿದರೂ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಸ್ಪಷ್ಟ​ವಾಗುತ್ತಿಲ್ಲ. ಖರ್ಗೆ ಹೆಸರು ಕಳೆದ ಒಂದು ವಾರದಿಂದ ಕೇಳಿ ಬರುತ್ತಿದೆಯಾದರೂ ಖರ್ಗೆಗೆ, ದೆಹಲಿ ಬಿಟ್ಟು ಬರಲು ಇಷ್ಟವಿಲ್ಲ ಅಂತ ಹೇಳಲಾಗುತ್ತಿದೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿ ಕೂರಿಸಿ​ರು​ವಾಗ ನಾನೇಕೆ ಈಗ ಪಕ್ಷದ ಜವಾಬ್ದಾರಿ ಹೊರಲಿ ಎಂದು ಹೈಕಮಾಂಡ್‌'ನ ಕೆಲ ನಾಯಕರ ಮುಂದೆ ಖರ್ಗೆ ಹೇಳಿಕೊಂಡಿದ್ದಾರೆ ಅಂತ ಸುವರ್ಣ ನ್ಯೂಸ್​​ ಹಾಗೂ ಕನ್ನಡ ಪ್ರಭಕ್ಕೆ ಮೂಲಗಳು ತಿಳಿಸಿವೆ.