Asianet Suvarna News Asianet Suvarna News

ಹೈದರಾಬಾದ್-ಕರ್ನಾಟಕ ಭಾಗದವರ ದಶಕದ ಕನಸು ನನಸಾಗೋ ಸಮಯ: ರೈಲು ಸಂಚಾರಕ್ಕೆ ದಿನಗಣನೆ

ಬಹು ನಿರೀಕ್ಷಿತ, ಹೈದ್ರಾಬಾದ್​-ಕರ್ನಾಟಕದ ಜನರ ದಶಕಗಳ ಕನಸು ನನಸಾಗಲು ದಿನಗಣನೆ ಶುರುವಾಗಿದೆ,. ಮಹತ್ವದ ಬೀದರ್-ಕಲಬುರಗಿ ರೈಲ್ವೆ ಮಾರ್ಗ ಸಂಚಾರಕ್ಕೆ ಸಿದ್ಧವಾಗಿದ್ದು. ಈ ಕುರಿತು ನಮ್ಮ ಬೀದರ್ ರಿಪೋರ್ಟ್ ಲಿಂಗೇಶ್ ಮರಕಲೆ ನೀಡಿರುವ  ಒಂದು ವರದಿ ಇಲ್ಲಿದೆ ನೋಡಿ.

The Dream of Hyderabad karnataka people will become reality

ಬೀದರ್(ಅ.24): ಹೈದರಾಬಾದ್ ಕರ್ನಾಟಕ ಭಾಗದ ಜನರ ದಶಕದ ಕನಸು ನನಸಾಗೋಕೆ ದಿನಗಣನೆ ಶುರುವಾಗಿದೆ. ಕಲಬುರಗಿ ಹಾಗೂ ಬೀದರ್ ನಡುವಿನ ರೈಲ್ವೆ ಸಂಚಾರಕ್ಕೆ ಇದೇ 29ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹೈ-ಕ ಕನಸಿನ ರೈಲು ಯೋಜನೆ..! 

ಬೀದರ್-ಕಲಬುರಗಿ ರೈಲು ಮಾರ್ಗ ಹೈದರಾಬಾದ್ ಕರ್ನಾಟಕ ಭಾಗದ ಮಹತ್ವದ ಯೋಜನೆ. ಬರೋಬ್ಬರಿ 110 ಕಿ.ಮೀ ಮಾರ್ಗದ ಈ ಯೋಜನೆ 1999ರಿಂದ ನೆನೆಗುದಿಗೆ ಬಿದ್ದಿತ್ತು..ಈದೀಗ  ಪೂರ್ಣಗೊಂಡಿದೆ. ಬೀದರ್​ನಿಂದ ಕಲಬುರಗಿವರೆಗಿನ ಈ ಮಾರ್ಗದಲ್ಲಿ 13 ರೈಲ್ವೆ ನಿಲ್ದಾಣಗಳು ಬರಲಿವೆ. ಈಗಾಗಲೇ ಬೀದರ್ ನಿಂದ ಹುಮನಾಬಾದ್ ವರೆಗೆ ಸಂಚಾರ ಮುಕ್ತವಾಗಿದ್ದು ಈ ಮಾರ್ಗದಲ್ಲಿ ರೈಲು ಸಂಚರಿಸುತ್ತಿದೆ. ಕಮಲಾಪುರದಿಂದ ಕಲಬುರಗಿವರೆಗೆ ಬಾಕಿಯಿದ್ದ ಕಾಮಗಾರಿಯೂ ಈಗ ಪೂರ್ಣಗೊಂಡಿದೆ.

ಒಟ್ಟಿನಲ್ಲಿ  ಇದೇ 29ರಂದು ಹೈ-ಕ ಭಾಗದ ಕನಸಿನ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದು.. ಈ ಮಾರ್ಗ ಉದ್ಘಾಟನೆಯಿಂದ ದೆಹಲಿ ಪ್ರಯಾಣಿಕರಿಗೆ 7 ಗಂಟೆ ಉಳಿತಾಯವಾದರೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ಬರೋ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

 

Follow Us:
Download App:
  • android
  • ios