Asianet Suvarna News Asianet Suvarna News

ಯೋಧ ಔರಂಗಜೇಬ್ ಕೊಂದಿದ್ದ ಉಗ್ರನನ್ನು ಮಸಣಕ್ಕೆ ಸೇರಿಸಿದ ಸೇನೆ!

ಸಂಗಾತಿಯನ್ನು ಕೊಂದಿದ್ದ ಉಗ್ರನನ್ನು ಜಹನ್ನುಮ್‌ಗೆ ಕಳುಹಿಸಿದ ಸೇನೆ| ಯೋಧ ಔರಂಗಜೇಬ್ ಹತ್ಯೆಗೈದಿದ್ದ ಉಗ್ರ ಮಟಾಷ್| ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಹಿಜ್ಬುಲ್ ಉಗ್ರರು ಹತ| ಮೃತರಲ್ಲಿ ಔರಂಗಜೇಬ್ ಹಂತಕ ಶೌಕತ್ ದಾರ್ ಕೂಡ ಒಬ್ಬ|  

Terrorist who killed Aurangzeb Dies In Encounter
Author
Bengaluru, First Published May 18, 2019, 6:42 PM IST

ಶ್ರೀನಗರ(ಮೇ.18): ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ನಡೆದ ಎನ್‌ಕೌಂಟರ್‌ನಲ್ಲಿ ಭಧ್ರತಾ ಪಡೆಗಳು ಮೂವರು ಹಿಜ್ಬುಲ್ ಉಗ್ರರನ್ನು ಹೊಡೆದುರುಳಿಸಿದೆ.

ಇದರಲ್ಲಿ ಭಾರತೀಯ ಸೇನೆಯ ಯೋಧ ಔರಂಗಜೇಬ್ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಹಿಜ್ಬುಲ್ ಉಗ್ರನನ್ನೂ ಕೂಡ ಸದೆಬಡಿಯಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.

ಎನ್‌ಕೌಂಟರ್‌ನಲ್ಲಿ ಹತರಾದವರನ್ನು ಶೌಕತ್ ದಾರ್, ಇರ್ಫಾನ್ ವಾರ್ ಮತ್ತು ಮುಜಾಫರ್ ಶೇಖ್ ಎಂದು ಗುರುತಿಸಲಾಗಿದ್ದು, ಇದರಲ್ಲಿ ಶೌಕತ್ ದಾರ್ ಎಂಬ ಉಗ್ರ ಔರಂಗಜೇಬ್ ಹತ್ಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios