ಸರ್ಜಿಕಲ್ ದಾಳಿಯಲ್ಲಿ ನಾಶವಾದ 10 ಉಗ್ರ ನೆಲೆಗಳು ಮತ್ತೆ ಸಕ್ರಿಯ: ಸೇನೆ
‘ಈಗ ಚಳಿ ಕಮ್ಮಿಯಾಗತೊಡಗಿದ್ದು, ಹಿಮ ಕರಗುತ್ತಿದೆ. ಇದು ಉಗ್ರರನ್ನು ಕಾಶ್ಮೀರದೊಳಗೆ ಕಳಿಸಲು ಪ್ರಶಸ್ತವಾದ ಸಮಯ ಎಂದು ಗಡಿಯಾಚೆಯ ಉಗ್ರ ಸಂಘಟನೆಗಳು ಭಾವಿಸುತ್ತವೆ.'
ನವದೆಹಲಿ: ಜಮ್ಮು-ಕಾಶ್ಮೀರದ ಉರಿ ಸೇನಾನೆಲೆ ಮೇಲೆ ನಡೆದ ದಾಳಿಯ ನಂತರ ಭಾರತ ನಡೆಸಿದ ಸರ್ಜಿಕಲ್ ದಾಳಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಪಾಕಿಸ್ತಾನಿ ಉಗ್ರರ ನೆಲೆಗಳು ಧ್ವಂಸಗೊಂಡಿದ್ದವು. ಆದರೆ ಈ ನೆಲೆಗಳು ಈಗ ಮತ್ತೆ ಸಕ್ರಿಯವಾಗತೊಡಗಿದ್ದು, ಭಾರತದೊಳಗೆ ಉಗ್ರರನ್ನು ಕಳಿಸಲು ಸಿದ್ಧತೆ ನಡೆಸುತ್ತಿವೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಬಾರಾಮುಲ್ಲಾದಲ್ಲಿರುವ 19ನೇ ಸೇನಾ ವಿಭಾಗದ ಮುಖ್ಯಸ್ಥ ಮೇ|ಜ| ಆರ್.ಪಿ. ಕಲಿತಾ ಎನ್'ಡಿಟೀವಿ ಜೊತೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. ‘ಈಗ ಚಳಿ ಕಮ್ಮಿಯಾಗತೊಡಗಿದ್ದು, ಹಿಮ ಕರಗುತ್ತಿದೆ. ಇದು ಉಗ್ರರನ್ನು ಕಾಶ್ಮೀರದೊಳಗೆ ಕಳಿಸಲು ಪ್ರಶಸ್ತವಾದ ಸಮಯ ಎಂದು ಗಡಿಯಾಚೆಯ ಉಗ್ರ ಸಂಘಟನೆಗಳು ಭಾವಿಸುತ್ತವೆ. ನಾವು ಸರ್ಜಿಕಲ್ ದಾಳಿಯಲ್ಲಿ ನಾಶ ಮಾಡಿದ 10 ಉಗ್ರರ ಕ್ಯಾಂಪ್ಗಳು ಈಗ ಮತ್ತೆ ಕಾರಾರಯಚರಣೆ ಆರಂಭಿಸಿವೆ ಎಂದು ತಿಳಿದುಬಂದಿದೆ' ಎಂದಿದ್ದಾರೆ.
(ಸಾಂದರ್ಭಿಕ ಚಿತ್ರ)